ಬಂಟ್ವಾಳ(www.vknews.in): ಬಂಟ್ವಾಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ(ರಿ) ಕಂದೂರು ಹಾಗೂ ಮಡಿವಾಳ ಯುವ ಬಳಗ ಬಂಟ್ವಾಳ ಮತ್ತು ಮಹಿಳಾ ಸಮಿತಿ ಇದರ ಆಶ್ರಯ ದಲ್ಲಿ ..ಮಡಿವಾಳ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟವು ದಿನಾಂಕ 04 – 12 – 2021 ರಂದು ಕಂದೂರಿನ ಶ್ರೀ ಮಾಚಿದೇವ ಸಭಾಭವನದ ವಠಾರದಲ್ಲಿ ಜರುಗಿತು.
ಪಿ.ಸಿ ಗ್ರೂಪ್ ಮಂಗಳೂರು ಇದರ ಮುಖ್ಯ ಪ್ರಬಂಧಕರು ಆಗಿರುವ ಶ್ರೀ ಹರೀಶ್ ಕುದುಂಬ್ಲಾಡಿಯವರು ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘ ದ ಅಧ್ಯಕ್ಷರಾದ ಶ್ರೀ ಎನ್ ಕೆ ಶಿವ ಅಧ್ಯಕ್ಷತೆ ವಹಿಸಿದ್ದರು.ಯುವಬಳಗದ ವತಿಯಿಂದ ಎಲ್ಲಾ ಸದಸ್ಯರಿಗೆ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು.
ಸಮಿತಿಯ ಗೌರವ ಸಲಹೆಗಾರರಾದ ..ಶ್ರೀ ಸೋಮಪ್ಪ ಮಾಸ್ತರ್ ರಾಯಿ , ಪುಷ್ಪರಾಜ ಕುಕ್ಕಾಜೆ , ಹರೀಶ್ ಮಂಕುಡೆ , ಮಹಿಳಾ ಸಮಿತಿ ಅಧ್ಯಕ್ಷೆ ವಿನೋದಾ ಬಿ.ಸಿ ರೋಡ್ ..ವೇದಿಕೆಯಲ್ಲಿ ಉಪಸ್ಥಿತರಿದ್ದರು . ಸ್ಪರ್ಶಾ ಪಂಜಿಕಲ್ಲು ಪ್ರಾರ್ಥಿಸಿದರು, ಯುವ ಬಳಗದ ಅಧ್ಯಕ್ಷ ದಿಲೀಪ್ ಪಂಜಿಕಲ್ಲು ಸ್ವಾಗತಿಸಿ , ಕಾರ್ಯದರ್ಶಿ …ವನೀತ್ ವಂದಿಸಿದರು . ವೆಂಕಟೇಶ ಮಾಸ್ತರ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.