ಕೋಲಾರ(ವಿಶ್ವಕನ್ನಡಿಗ ನ್ಯೂಸ್): ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಡಿ .೬ ರಂದು ನಡೆಯಬೇಕಾಗಿದ್ದ ( ಸಿಆರ್ಪಿ) ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಹಾಗೂ ( ಬಿಆರ್ಪಿ ) ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ರದ್ದು ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ ನೇತೃತ್ವದಲ್ಲಿ ಡಿಡಿಪಿಐ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂಬಂಧ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಅವರಿಗೆ ಮನವಿ ಸಲ್ಲಿಸಿದ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ ಮತ್ತಿತರರು , ಇಲಾಖೆಯೇ ೩ ಮತ್ತು ೫ ವರ್ಷ ಮುಗಿಸಿದ ೩೯ ಮಂದಿ ಸಿಆರ್ಪಿ ಹಾಗೂ ಬಿಆರ್ಪಿಗಳು ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದರು ಎಂದು ತಿಳಿಸಿದರು.
ಇಲಾಖೆ ಸೂಚನೆಯಂತೆಯೇ ಕೋರಿಕೆ ವರ್ಗಾವಣೆ ಬಯಸಿ ಸ್ವಇಚ್ಚಾ ಅರ್ಜಿ ಸಲ್ಲಿಸಿದ್ದರೂ ಇದೀಗ ವರ್ಗಾವಣೆ ಸ್ಥಳ ಆಯ್ಕೆ ಪ್ರಕ್ರಿಯೆ ಶೇ .೭ ಮೀರುವಂತಿಲ್ಲ ಎಂಬ ನೆಪವೊಡ್ಡಿ ಕೌನ್ಸಿಲಿಂಗ್ ಅನ್ನು ಇಲಾಖೆ ರದ್ದು ಮಾಡಿದೆ ಎಂದು ದೂರಿದರು.
ಕೋಲಾರ ಜಿಲ್ಲೆಯಲ್ಲಿ ಕೋರಿಕೆ ವರ್ಗಾವಣೆ ಮಿತಿ ಈಗಾಗಲೇ ಶೇಕಡ ೭ % ಹುದ್ದೆಗಳಿಗೆ ಲಾಕ್ ಆಗಿದೆ . ಸ್ಥಳ ಆಯ್ಕೆ ಪ್ರಕ್ರಿಯೆ ಶೇಕಡ ೭ % ಮೀರುವಂತಿಲ್ಲ ಎಂದು ಇಂದಿನ ಕೌನ್ಸಿಲಿಂಗ್ ಅನ್ನು ರದ್ದು ಮಾಡುವ ಮೂಲಕ ಸ್ಥಳ ಆಯ್ಕೆ ಆಸೆಯೊಂದಿಗೆ ಹಾಜರಾಗಿದ್ದ ಸಿಆರ್ಪಿ , ಬಿಆರ್ಪಿಗಳು ತೊಂದರೆಗೊಳಗಾಗಿದ್ದಾರೆ ಎಂದು ತಿಳಿಸಿದರು.
ನಮಗೆ ಇಲಾಖೆ ನಿಯಮದಂತೆ ಸಿಆರ್ಪಿ.ಬಿಆರ್ಪಿ ಅವಧಿ ಮುಗಿದಿರುವುದರಿಂದ ನಮಗಾಗಿರುವ ಅನ್ಯಾಯವನ್ನು ಪರಿಗಣಿಸಿ ಅತಿ ಶೀಘ್ರದಲ್ಲೇ ನಮಗೆ ಕೌನ್ಸಿಲಿಂಗ್ ನೀಡಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಡಿಡಿಪಿಐ ಅವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ರಡ್ಡಪ್ಪ , ಮಾಲೂರು ತಾಲ್ಲೂಕು ಅಧ್ಯಕ್ಷ ನರಸಿಂಹ , ಕಾರ್ಯದರ್ಶಿ ಮುನಿರಾಜು , ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ವೆಂಕಟಗಿರಿಯಪ್ಪ , ಕೆಜಿಎಫ್ ತಾಲ್ಲೂಕು ಅಧ್ಯಕ್ಷವಿನೋದ್ ಬಾಬು , ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ಬೈರಾರೆಡ್ಡಿ , ಕಾರ್ಯದರ್ಶಿ ಶಿವಣ್ಣ ಮುಂತಾದ ಪದಾಧಿಕಾರಿಗಳು ಕೌನ್ಸಿಲಿಂಗ್ ಬಯಸಿ ಬಂದ ಸಿಆರ್ಪಿ ಮತ್ತು ಬಿಆರ್ಪಿಗಳೊಂದಿಗೆ ಹಾಜರಿದ್ದು ಮನವಿ ಸಲ್ಲಿಸಿದರು .ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.