ಶ್ರೀನಿವಾಸಪುರ (ವಿಶ್ವಕನ್ನಡಿಗ ನ್ಯೂಸ್): ಶಾಸಕ ಕೆ.ಆರ್.ರಮೇಶ್ ಕುಮಾರ್ ಗುರುವಾರ ವಿಧಾನ ಸಭೆಯಲ್ಲಿ ಅತ್ಯಾಚಾರ ಕುರಿತು ಆಡಿದ ಮಾತನ್ನು ಖಂಡಿಸಿ ತಾಲ್ಲೂಕು ಬಿಜೆಪಿ , ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತ್ಯೇಕವಾಗಿ ಮೆರವಣಿಗೆ ನಡೆಸಿ , ಕೆ.ಆರ್.ರಮೇಶ್ ಕುಮಾರ್ ಪ್ರತಿಕೃತಿಯನ್ನು ಸುಟ್ಟುಹಾಕಿದರು.
ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ , ‘ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಿದ್ದರೆ ಅತ್ಯಾಚಾರವನ್ನು ಆನಂದಿಸಿ ಎಂಬ ಮಾತಿದೆ ‘ ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಗುರುವಾರ ಹೇಳಿರುವುದು ಖಂಡನೀಯ. ಅವರ ಮಾತು ಮಹಿಳಾ ಸಮುದಾಯ ಹಾಗೂ ಭಾರತೀಯ ಸಂಸ್ಕೃತಿಗೆ ಮಾಡಿರುವ ಅಪಚಾರ ಎಂದು ಹೇಳಿದರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ ಮಾತನಾಡಿ , ವಿಧಾನಸಭೆಯ ಹಿರಿಯ ಸದಸ್ಯರಾದ ಕೆ.ಆರ್.ರಮೇಶ್ ಕುಮಾರ್ ಅವರ ಬಾಯಿ ತೆವಲಿನಿಂದ ತಾಲ್ಲೂಕಿನ ಜನರಿಗೆ ಅವಮಾನವಾಗಿದೆ.
ಮಹಿಳೆಯರ ಬಗ್ಗೆ ಕುಲ್ಲಕವಾಗಿ ಮಾತನಾಡಿರುವ ಅವರು ಕ್ಷಮೆ ಕೋರಿದರೆ ಸಾಲದು , ವಿಧಾನಸಭಾಧ್ಯಕ್ಷರು ಅವರನ್ನು ಸದನದಿಂದ ಅಮಾನತು ಪಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್. ನಾರಾಯಣಸ್ವಾಮಿ , ಪುರಸಭಾ ಸದಸ್ಯ ಬಿ.ವೆಂಕಟರೆಡ್ಡಿ , ವಕೀಲ ಕೆ.ಶಿವಪ್ಪ ಮಾತನಾಡಿ , ಶಾಸಕ ಕೆ.ಆರ್.ರಮೇಶ್ ಕುಮಾರ್ ಸದನದಲ್ಲಿ ಅತ್ಯಾಚಾರ ಕುರಿತು ಆಡಿದ ಮಾತನ್ನು ಖಂಡಿಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗಿಹಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಎಂ.ಜಿ ರಸ್ತೆಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಪ್ರತಿಕೃತಿ ದಹಿಸಲಾಯಿತು . ಅವರ ವಿರುದ್ಧ ಘೋಷಣೆ ಕೂಗಲಾಯಿತು. ತಮ್ಮ ಬೇಡಿಕೆಗಳನ್ನು ಒಳಗೊಂಡ ಮವವಿ ಪತವನು , ತಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಅವರಿಗೆ ನೀಡಿದರು.
ಮುಖಂಡರಾದ ಮಂಜುನಾಥರೆಡ್ಡಿ , ಪೂಲ ಶಿವಾರೆಡ್ಡಿ , ಆಯಿಷಾ ನಯಾಜ್ , ಪುರಸಭೆ ಮಾಜಿ ಉಪಾಧ್ಯಕ್ಷ ಸೈಯದ್ ಏಜಾಜ್ ಪಾಷ ವೇಣುಗೋಪಾಲರೆಡ್ಡಿ , ಚಂಗಪ್ಪ ಇದ್ದರು.
ಬಿಜೆಪಿ ಪ್ರತಿಭಟನೆ :
ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಸಮೀಪ ಕೆ.ಆರ್.ರಮೇಶ್ ಕುಮಾರ್ ಅವರ ಪ್ರತಿಕೃತಿ ದಹನ ಮಾಡಿದ ಬಳಿಕ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ . ಕೆ.ಎನ್.ವೇಣುಗೋಪಾಲ್ ಮಾತನಾಡಿ , ತಮ್ಮನ್ನು ಬುದ್ದಿ ಜೀವಿಯೆಂದು ಬಿಂಬಿಸಿಕೊಂಡಿರುವ ಶಾಸಕ ಕೆ.ಆರ್.ರಮೇಶ್ ಕುಮಾರ್ , ಸದನದಲ್ಲಿ ಅತ್ಯಾಚಾರದಂಥ ಅಮಾನವೀಯ ಕೃತ್ಯದ ಬಗ್ಗೆ ತೀರಾ ಲಘುವಾಗಿ ಮಾತನ್ನಾಡಿದ್ದಾರೆ. ಅಂಥ ಗಂಭೀರ ಸಂಗತಿಯನ್ನು ತಮಾಷೆಗೂ ಆ ರೀತಿ ಹೇಳಬಾರದಿತ್ತು.
ಮಾತಿನ ಭರದಲ್ಲಿ ಏನನ್ನಾದರೂ ಮಾತನಾಡಬಹುದು ಎಂದು ತಿಳಿಯುವುದು ತಪ್ಪಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಎ.ಅಶೋಕರೆಡ್ಡಿ ಮುಖಂಡರಾದ ವೆಂಕಟಮುನಿಯಪ್ಪ , ರಾಮಾಂಜಿ , ಎಸ್.ವಿನೋದ್ ಕುಮಾರ್ , ರಮೇಶ್ , ಷಫಿವುಲ್ಲಾ , ಶಿವಶಂಕರ್ , ರಾಜು , ಮಾಲಾ ಇದ್ದರು .
ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.