(www.vknews.com) : ಒತ್ತಡದ ಅನ್ನುವುದು ಜೀವನ ಹಗ್ಗದ ಮೇಲಿನ ನಡಿಗೆ ಎನ್ನುವಂತೆ ಕಳೆದ ವರ್ಷಕ್ಕಿಂತ ಈ ವರ್ಷ ಒತ್ತಡ ಕಡಿಮೆ ಎನ್ನಬಹುದು.
ನಮ್ಮ ಉನ್ನತ ಯೋಜನೆಗಳು ಯೋಚನೆಗಳಾಗಿಯೇ ಉಳಿದಿದೆ ಹೊರತು ಯಾವುದು ಕಾರ್ಯರೂಪಕ್ಕೆ ಬಂದಿಲ್ಲ ಎನ್ನುವುದು ಬೇಜಾರು.. ಬರಹಕ್ಕೆ ಸ್ಪೂರ್ತಿ ಎಂಬಂತೆ ಹಫ್ಸ ದೀದಿ ಕಟ್ಟಿದ ಕನ್ನಡ ಬ್ಯಾರಿ ಲೇಖಕಿಯರ ಸಾಹಿತ್ಯ ಕೂಟದಿಂದ ಬರೆಯಲು ಮನಸ್ಸಿಲ್ಲದೇ ಬರವಣಿಗೆಯನ್ನು ನಿಲ್ಲಿಸಿದವರು ಸಹ ಬರೆಯಲು ಪ್ರಾರಂಭಿಸಿದ್ದು ಸಂತೋಷದ ವಿಚಾರ, ಇದರಲ್ಲಿ ನಾನು ಸಹ ಒಬ್ಬಳು ಎನ್ನಲು ಹೆಮ್ಮೆಯಿದೆ.
ಇನ್ನುಳಿದಂತೆ ಈ ವರ್ಷ ಮದುವೆ ಹೆಸರಲ್ಲಿ ಕುಟುಂಬದೊಂದಿಗೆ ಬೇರೆತ ಸುಂದರ ಕ್ಷಣಗಳಿವೆ. ಪ್ರವಾಸಿ ಅಣ್ಣಂದಿರ ಕೂಡುವಿಕೆಯಿಂದ ಊರು ಸುತ್ತಿದ್ದು ಸಹ ಸ್ವಲ್ಪ ಹೆಚ್ಚು ಎನ್ನಬಹುದು. ಅಸೌಖ್ಯದ ಸಂಧರ್ಭದಲ್ಲಿ ಮಾನಸಿಕವಾಗಿ ದೈಹಿಕವಾಗಿ ಕುಗ್ಗಿದ್ದ ನನಗೆ ಅಮ್ಮನಿಲ್ಲದ ಕೊರಗು ಕಾಡದಂತೆ ಮನೆಯವರೆಲ್ಲ ನನ್ನ ಜೊತೆ ನಿಂತು ಧೈರ್ಯ ತುಂಬಿದ್ದು ನನ್ನ ಅನಾರೋಗ್ಯವನ್ನು ಇಲ್ಲದಂತೆ ಮಾಡಿದೆ. ಸುಖ ದುಃಖ ಎಲ್ಲದರಲ್ಲಿಯೂ ಜೊತೆ ನಿಲ್ಲುವ ಗಂಡ ನನಗೆ ಸಿಕ್ಕಿದ್ದು ಪುಣ್ಯವೆಂದೆ ಹೇಳಬಹುದು. ಮನೆ ಮಕ್ಕಳ ತುಂಟಾಟಗಳು ಹೊಡೆದಾಟ- ಗುದ್ದಾಟಗಳಲ್ಲಿ ಮನಸ್ಸಿನ ಬೇಸರವೆಲ್ಲ ಮಾಯವಾಗುತ್ತದೆ. ಆದರೆ ನಮ್ಮವರೆಂದುಕೊಂಡ ಕೆಲವರ ಮುಖವಾಡ ಕಳಚಿ ಅವರ ನಿಜ ಬಣ್ಣ ಬಯಲಾಗಿ ಅವರಿಂದ ದೂರ ಇರುವಂತೆ ಮಾಡಿದೆ.
ಕಳೆದ ವರ್ಷದಲ್ಲಿ ಕೊರೋನ ಆರ್ಭಟದಲ್ಲಿ ಎಲ್ಲವನ್ನು ಕಳೆದುಕೊಂಡಿದ್ದ ನಮಗೆ 2021 ಕಳೆದ ವರ್ಷಕ್ಕಿಂತ ಸುಂದರ ಕ್ಷಣಗಳನ್ನು ನೆನಪುಗಳನ್ನು ನೀಡಿದೆ ಎನ್ನುವುದು ಸಂತೋಷದ ವಿಚಾರ.ಹಾಗೆಯೇ ಮುಂದಿನ ೨೦೨೨ನೇ ವರ್ಷವೂ ಎಲ್ಲರ ಬಾಳಿನಲ್ಲಿ ಸಂತೋಷ ತರಲಿ.
✍🏻ಉಮ್ಮು ಜಿಕೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.