ಕಾರ್ಕಳ (www.vknews.com) : ನಮ್ಮ ನಾಡ ಒಕ್ಕೂಟ(ರಿ) ಕಾರ್ಕಳ ಘಟಕ, ಇದರ ವತಿಯಿಂದ ಆಯುಷ್ಮಾನ್ ಕಾರ್ಡ್ ಹಾಗೂ ಇ ಶ್ರಮ್ ಕಾರ್ಡನ್ನು “ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ರಝಾ ಜುಮಾ ಮಸೀದಿ ಹೊಸ್ಮಾರ್”, ಇದರ ಆವರಣದಲ್ಲಿ ಆದಿತ್ಯವಾರ ದಿನಾಂಕ 02-01.2022 ರಂದು ಬೆಳಿಗ್ಗೆ ಘಂಟೆ 9.30 ಕ್ಕೆ ಆಯೋಜಿಸಲಾಗಿತ್ತು. ಇದಕ್ಕೆ ನಮ್ಮ ನಾಡ ಒಕ್ಕೂಟ ಇದರ ಹೆಬ್ರಿ ಘಟಕ, ಉಡುಪಿ ಜಿಲ್ಲಾ ಹಾಗೂ ಸೆಂಟ್ರಲ್ ಕಮಿಟಿಯ ಸಹಕಾರವಿತ್ತು.
ಕಾರ್ಯಕ್ರಮವು ಮೌಲಾನಾ ಸಲ್ಮಾನ್ ಅತ್ತಾರಿ, ಖತೀಬರು ರಝಾ ಜುಮಾ ಮಸೀದಿ, ಇವರ ಕಿರಾತ್ ಹಾಗೂ ಉಮರ್ ಸಅದಿ ಉಸ್ತಾದ್, ಖತೀಬರು ಮುಹಿಯ್ಯುದ್ದೀನ್ ಜುಮಾ ಮಸೀದಿ, ಹೊಸ್ಮಾರು, ಇವರ ದುವಾಃದೊಂದಿಗೆ ಆರಂಭಗೊಂಡಿತು. ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ, ಕಾರ್ಕಳ ತಾಲೂಕು, ಇದರ ಅಧ್ಯಕ್ಷರಾದ ಶಾಕಿರ್ ಹುಸೈನ್, ಬೈಲೂರು, ವಹಿಸಿದ್ದರು. ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮಿಯವರು ನಮ್ಮ ನಾಡ ಒಕ್ಕೂಟದ ಧ್ಯೇಯೋದ್ದೇಶಗಳಾದ, ನಮ್ಮೆಲ್ಲರ ಐಕ್ಯತೆ, ಶಿಕ್ಷಣ,ಹಾಗೂ ನೈತಿಕ ಏಳಿಗೆಯ ಬಗ್ಗೆ ವಿವರಿಸಿದರು. ರಝಾ ಜುಮಾ ಮಸೀದಿಯ ಅಧ್ಯಕ್ಷರಾದ ಜನಾಬ್ ಜಾವೇದ್ ಸಾಹೇಬ್ ರವರು ತಮ್ಮ ಸಲಹೆ ಹಾಗೂ ಸಹಕಾರಗಳನ್ನು ವ್ಯಕ್ತಪಡಿಸಿದರು.
ಹಾಗೂ ಕಳೆದ ಆದಿತ್ಯವಾರ ಮೀಯ್ಯಾರು ಮದ್ರಸ ಆವರಣದಲ್ಲಿ ಹಮ್ಮಿಕೊಂಡಂತಹ ಕಾರ್ಯಕ್ರಮದಲ್ಲಿ ತಯಾರಾದ ಆಯುಶ್ಮಾನ್ ಕಾರ್ಡಗಳನ್ನು ಜನಾಬ್ ಶೇಖ್ ಶಬ್ಬೀರ್ (ಅಧ್ಯಕ್ಷರು, ಮಿಯ್ಯಾರು ಜುಮಾ ಮಸೀದಿ, ಇವರಿಗೆ ಹಸ್ತಾಂತರಿಸಲಾಯಿತು. ಕೊನೆಗೆ ಶಾಕಿರ್ ಹುಸೈನ್ ರವರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ವೇದಿಕೆಯಲ್ಲಿ ಜನಾಬ್ ಮನ್ಸೂರ್ ಅಹ್ಮದ್ (ಉಪಾಧ್ಯಕ್ಷರು ಕಾರ್ಕಳ ಘಟಕ), ಜನಾಬ್ ಮುಸ್ತಫಾ (ಸದಸ್ಯರು ಜಿಲ್ಲಾ ಸಮಿತಿ), ಜನಾಬ್ ಅಹ್ಮದ್ ಹುಸೇನ್ ನಿಟ್ಟೆ, (ಸದಸ್ಯರು ಜಿಲ್ಲಾ ಸಮಿತಿ),ಜನಾಬ್ ಅಬ್ದುಲ್ ಅಝೀಝ್ (ಅಧ್ಯಕ್ಷರು ಮೊಹಿಯ್ಯುದ್ದೀನ್ ಜುಮಾ ಮಸೀದಿ, ಹೊಸ್ಮಾರು) ಉಪಸ್ಥಿತರಿದ್ದರು.
ಶೇಖ್ ಶಬ್ಬೀರ್ ಅಹ್ಮದ್ ಮಿಯಾರು (ಕಾರ್ಯದರ್ಶಿಗಳು ನಮ್ಮ ನಾಡ ಒಕ್ಕೂಟ, ಕಾರ್ಕಳ) ಕಾರ್ಯಕ್ರಮನ್ನು ನಿರೂಪಿಸಿ ಧನ್ಯವಾದವಿತ್ತರು.
ಮೌಲಾನಾ ಅಬ್ದುಲ್ ಹಫೀಝ್, ಅಲ್ ಕಾಸಿಮೀ.ನಮ್ಮ ನಾಡ ಒಕ್ಕೂಟ, ಕಾರ್ಕಳ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.