ಮಂಜನಾಡಿ (www.vknews.com) : ಮಂಜನಾಡಿ ಗ್ರಾಮ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕಲ್ಕಟ್ಟ ಕಂಡಿಕದ ಡಿವೈನ್ ಗ್ರೇಸ್ ಫಿಲಿಪ್ ರವರ ವಾಠಾದಲ್ಲಿ ಕ್ರಿಸ್ಮಸ್ ಸೌಹಾರ್ದ ಸಂಗಮ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜರವರು ಕ್ರಿಸ್ಮಸ್ ಹಬ್ಬದ ಸಂದೇಶವನ್ನು ನೀಡುತ್ತಾ “ಎರಡು ಸಾವಿರ ವರ್ಷಗಳ ಹಿಂದೆ ಮೇರಿ ಮಾತೆಯ ಮಗನಾಗಿ ಹುಟ್ಟಿದ ಏಸು ಕ್ರಿಸ್ತನು ಸಮಾಜದ ನೂಂದವರ ಪಾಲಿನ ದೇವರಾಗಿ ಅವರ ರಕ್ಷಣೆಗೆ ಅನ್ಯಾಯ ಅಕ್ರಮದ ವಿರುದ್ಧ ಹೋರಾಡಿದರು. ಸಮಾನತೆಯನ್ನು ಸಾರಿದರು. ಏಸು ಕ್ರಿಸ್ತನು ಕ್ರೈಸ್ತ ಧರ್ಮದವರಿಗೆ ಮಾತ್ರ ಸೀಮಿತವಾಗದೆ ಎಲ್ಲಾ ಧರ್ಮದಲ್ಲೂ ಎಲ್ಲರ ಮನೆಯಲ್ಲೂ ಮನದಲ್ಲೂ ಇದ್ದಾನೆ. ಮುಸ್ಲಿಮರು ಈಸ ಪ್ರವಾದಿ ಎಂದು ನಂಬುತ್ತಾರೆ. ಸಮಾನತೆಯ ಸಂದೇಶವನ್ನು ಅವರು ಜಗತ್ತಿಗೆ ನೀಡಿದ್ದಾರೆ. ಅವರ ಸಂದೇಶಗಳ ಪ್ರಭಾವದಿಂದ ಮದರ್ ತೆರೆಸಾ ರಂತಹ ಅನೇಕ ಸಮಾಜ ಸೇವಕರು, ಮಿಶನರಿಗಳು ಜಗತ್ತಿನಾದ್ಯಂತ ಕೆಲಸಮಾಡಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎನ್ ಎಸ್ ಕರೀಂ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡುತ್ತಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದ ಮಾಡಿದ ಹಲವು ಸೇವಾ ಕಾರ್ಯವನ್ನು ಸ್ಮರಿಸಿದರು.
ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ ರವರು, ಭಾರತದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಕ್ರೈಸ್ತ ಸಮಾಜದ ಕೊಡುಗೆ ಅನನ್ಯ ಮತಾಂತರ ಎಂಬುವರು ಒಂದು ರಾಜಕೀಯ ಅಜಂಡ ಎಂದರು.
ಮಾಜಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಸಿರ್ ಸಾಮಣಿಗೆ ಮಾತನಾಡಿ ಕ್ರೈಸ್ತ ಸಮುದಾಯದ ಶೈಕ್ಷಣಿಕ ಸೇವೆಯಿಂದಾಗಿ ಬಲಾಡ್ಯರ ಸೊತ್ತಾಗಿದ್ದ ವಿದ್ಯೆ ಕೆಲವರ್ಗದ ಮಕ್ಕಳಿಗೂ ಸಿಗುವಂತಾಗಿದೆ ಇದು ಏಸು ಕ್ರಿಸ್ತನ ಸಂದೇಶದಿಂದಲೇ ಸಾಧ್ಯವಾಯಿತು ಎಂದರು.
ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಫಿರೋಜ್ ಮಲಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ “ಕ್ರಿಸ್ಮಸ್ ಎಂಬುವುದು ಜಗತ್ತಿನ ಎಲ್ಲ ಭಾಷೆಗಳ ಎಲ್ಲಾ ಜನರ ಹಬ್ಬವಾಗಿದೆ. ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು, ಶತ್ರುವನ್ನು ಪ್ರೀತಿಸಬೇಕು, ಎಂಬ ಏಸು ಕ್ರಿಸ್ತನ ಸಂದೇಶವು ಜಾತಿ ಮತ ಭೇದವಿಲ್ಲದೆ ಎಲ್ಲರೂ ಸಮಾನರು ಎಂದು ತಿಳಿಸುತ್ತದೆ. ಪ್ರಸ್ತುತ ಸಮಾಜದಲ್ಲಿ ಬೆಳೆಯುತ್ತಿರುವ ಕೋಮು ರಾಜಕೀಯದಲ್ಲಿ ಇಂತಹ ಸೌಹಾರ್ದಯುತವಾದ ವಾತಾವರಣ ನಿರ್ಮಿಸುವ ಸಂಗಮಗಳು ಹೆಚ್ಚು ನಡೆಯಬೇಕಾಗಿದೆ. ಕೋಮುವಾದಿಗಳಿಂದ ದೇಶವನ್ನು ರಕ್ಷಿಸುವುದು ಕಾಂಗ್ರೆಸ್ ನ ಗುರಿಯಾಗಿದೆ ಎಂದರು.
ಮಂಜನಾಡಿ ಗ್ರಾಮ ಯುವ ಕಾಂಗ್ರೆಸ್ ನ ಈ ಕಾರ್ಯವನ್ನು ಶ್ಲಾಘಿಸಿದರು. ಮಂಜನಾಡಿ ಗ್ರಾಮ ಯುವ ಕಾಂಗ್ರೆಸ್ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು, ಡಿವೈನ್ ಗ್ರೇಸ್ ಬಳಗದಿಂದ ಕರೋಲ್ ಸಂಗೀತ ಕಾರ್ಯಕ್ರಮ ನೆರವೇರಿಸಿದರು. ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಅಶ್ರಫ್ ಮಾರಾಟಿ ಮೂಲೆ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸ್ಮಾಯಿಲ್ ಸಾಯಿಬಾಕ, ಹಿಂದುಳಿದ ವರ್ಗಗಳ ಅಧ್ಯಕ್ಷ ಹರೀಶ್, ಕಾರ್ಮಿಕ ಘಟಕದ ಅಧ್ಯಕ್ಷ ಫೆಲಿಕ್ಸ್ ಡಿಸೋಜ ಗ್ರಾಮ ಪಂಚಾಯಿತಿ ಸದಸ್ಯರಾದ ಅತ್ತಾವುಲ್ಲ ಪರ್ತಿಪ್ಪಾಡಿ, ಬಾವು ಮಂಗಳಾಂತಿ, ಬಶೀರ್ ಮಂಜನಾಡಿ, ಅಬ್ಬಾಸ್ ನಾಟೆಕಲ್, ಆಸಿಫ್ ಸಾಮಣಿಗೆ, ಇಸ್ಮಾಯಿಲ್ ದೊಡ್ಡ ಮನೆ ಹಮೀದ್ ಕಿನ್ಯ ಮಂಜನಾಡಿ ಯುವ ಕಾಂಗ್ರೆಸ್ ಘಟಕದ ಕೋಶಾಧಿಕಾರಿ ಮುಸ್ತಫ ,ಉಪಾಧ್ಯಕ್ಷ ನಾಸಿರ್ ಮೈಸೂರು ,ನಿಝಾರ್ ಕುಚ್ಚಿಗುಡ್ಡೆ , ಕಾರ್ಯದರ್ಶಿ ಸಫ್ವಾನ್ ಮಂಗಳ ನಗರ, ಮುಝಮ್ಮಿಲ್ ಕಲ್ಕಟ್ಟ, ಆಸಿಫ್ ಮಂಜನಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫಿಲಿಪ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು, ಫೆಲಿಕ್ಸ್ ಡಿಸೋಜ ಧನ್ಯವಾದವಿತ್ತರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.