ಸಕಲೇಶಪುರ (www.vknews.com) : ಗ್ರಾಮದಲ್ಲಿ ಅಂಬೇಡ್ಕರ್ ಸಂಘ ಸ್ಥಾಪಿಸುವುದನ್ನು ವಿರೋಧಿಸಿ 40 ಜನರ ಗುಂಪೊಂದು 3 ದಲಿತರ ಮೇಲೆ ಹಲ್ಲೆ ನಡೆಸಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವ ಘಟನೆ ತಾಲೂಕಿನ ಹಾನುಬಾಳು ಹೋಬಳಿ ದೇವಲಕೆರೆ ಗ್ರಾ ಪಂ ವ್ಯಾಪ್ತಿಯ ನೀಕನಹಳ್ಳಿ ಸಮೀಪದ ನಿರ್ಮಲಾ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ. ಅಣ್ಣಪ್ಪ (30)ರಾಜು(32) ಸುಂದರ(28) ಹಲ್ಲೆಗೊಳಗಾಗಿರುವ ವ್ಯಕ್ತಿಗಳಾಗಿದ್ದು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಆದಿ ಕರ್ನಾಟಕ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದ ಇವರು ತಮ್ಮ ಗ್ರಾಮದಲ್ಲಿಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘವನ್ನು ಸ್ಥಾಪಿಸಬೇಕು,ಅವರ ಭಾವಚಿತ್ರ ಅಳವಡಿಸಿ, ಜೈ ಭೀಮ್ ಬಾವುಟಗಳನ್ನು ಅಳವಡಿಸಬೇಕು ಎಂದು ಚರ್ಚೆ ನಡೆಸಿದ್ದಾರೆ ಎಂಬ ಈ ವಿಚಾರವನ್ನು ತಿಳಿದು ಇದಕ್ಕೆ ಆಕ್ಷೇಪಣೆ ಸಲ್ಲಿಸಿ, ಇಲ್ಲಿ ಯಾವುದೇ ರೀತಿಯ ಸಂಘಗಳನ್ನು ರಚಿಸಬಾರದು ಎಂದು ಮೌಖಿಕವಾಗಿ ಎಚ್ಚರಿಕೆ ನೀಡಿದ್ದರು.
ದಲಿತ ಸಮುದಾಯದ ಕೆಲವು ಯುವಕರನ್ನು ಕರೆದು ಎಚ್ಚರಿಕೆಯನ್ನು ಸಹ ನೀಡಲಾಗಿತ್ತು. ಶನಿವಾರ 8.30 ರ ಸಮಯಕ್ಕೆ 40 ಜನರ ಗುಂಪೊಂದು ಏಕಾಏಕಿ ಗ್ರಾಮಕ್ಕೆ ದಾಳಿ ನಡೆಸಿ ಅಣ್ಣಪ್ಪ ಎಂಬುವವರನ್ನು ಮನಸೋಇಚ್ಚೆ ಥಳಿಸಿ, ಗ್ರಾಮಕ್ಕೆ ಕಾಲು ನಡಿಗೆಯಲ್ಲಿ ಆಗಮಿಸುತ್ತಿದ್ದ ರಾಜು ಮತ್ತು ಸುಂದರ ಇವರಗಳ ಮೇಲು ಹಲ್ಲೆ ನಡೆಸಿದ್ದಾರೆ. ಅಣ್ಣಪ್ಪನವರ ಕುತ್ತಿಗೆ ಬೆನ್ನು, ಎಡಗಾಲಿಗೆ ಪೆಟ್ಟಾಗಿದ್ದು, ರಾಜು ಹಾಗೂ ಸುಂದರ ಅವರಿಗೂ ಗಾಯಗಳಾಗಿವೆ.
ಪತ್ರಿಕೆಯೊಂದಿಗೆ ಮಾತನಾಡಿದ ಗಾಯಾಳು ಅಣ್ಣಪ್ಪ , ಏಕಾಏಕಿ ನಮ್ಮಗಳ ಮೇಲೆ ದಾಳಿ ನಡೆಸಿದರು ಜಾತಿನಿಂದನೆ ಮಾಡಿದರು.ಕೆಟ್ಟ ಕೆಟ್ಟ ಪದಗಳಲ್ಲಿ ಬೈದರು ಪ್ರಾಣ ಬೆದರಿಕೆ ಹಾಕಿದರು ಎಂದು ತಿಳಿಸಿದರು
ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಗೆ ಅಣ್ಣಪ್ಪ ದೂರು ನೀಡಿದ್ದಾರೆ. ಹಲ್ಲೆ ಮಾಡಿರುವ ಆರೋಪಿಗಳಾದ ಪ್ರಸನ್ ಪೂಜಾರಿ,ಸುನಿಲ್ ಗೌಡ, ಅಶ್ವಥ್ ಪೂಜಾರಿ,ಮಣಿ ,ಸಂತೋಷ, ಹಿತೈಷಿ, ಮನೋಜ್ ಮೋಹನ್, ಗಿರೀಶ್ ಶೆಟ್ಟಿ, ನಿತಿನ್, ಶಮಿ ಗೌಡ, ನಿತಿನ್ ಬಂಡಾರಿ, ರಾಜುಗೌಡ, ಅಭಿಷೇಕ್ ದಂತೆ 20 ಜನರ ಮೇಲೆ ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.