ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) : ವಿಶ್ವಕರ್ಮರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಸಿ.ವಿ.ಸ್ನೇಹಾ ಹೇಳಿದರು.
ಜಿಲ್ಲಾಡಳಿತ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಲ್ಲಿನ ಜಿಲ್ಲಾಡಳಿತದ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಹೋಂಗಾರ್ಡ್ ಕಮಾಂಡೆಂಟ್ ಕೆ.ಮೋಹನಾಚಾರಿ ವಿಶ್ವಕರ್ಮ ಅವರಿಗೆ ವಿಶ್ವಕರ್ಮ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ , ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಗೆ ಕಾರಣಾಂತರಗಳಿಂದ ಮೋಹನಾಚಾರಿ ಅವರು ಗೈರುಹಾಜರಾದ ಹಿನ್ನೆಲೆಯಲ್ಲಿ ಇದೀಗ ಸನ್ಮಾನ ಮಾಡಲಾಗುತ್ತಿದೆ ಎಂದರು .
ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಕಲಾವಿದ ವಿಷ್ಣು ಮಾತನಾಡಿ , ವಿಶ್ವಕರ್ಮರಿಗಾಗಿ ವಸ್ತುಪದರ್ಶನವನ್ನು ಏರ್ಪಡಿಸುವ ಮೂಲಕ ಶಿಲ್ಪಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಬೇಕೆಂದರು . ಜಕಣಾಚಾರಿ ಪುತ್ಥಳಿಯನ್ನು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅನಾವರಣ ಮಾಡಬೇಕೆಂದು ಒತ್ತಾಯಿಸಿದರು . ವಿಶ್ವಕರ್ಮರು ಅಹಂ ಬದಿಗೊತ್ತಿ ಎಲ್ಲರೂ ಸಂಘಟಿತರಾಗಿ ಮುಂದಕ್ಕೆ ಹೆಜ್ಜೆ ಹಾಕುವ ಮೂಲಕ ಸಮೂದಾಯದ ಪ್ರಗತಿಗೆ ನಾಂದಿ ಹಾಡಬೇಕು .
ಸಮೂದಾಯದಲ್ಲಿ ಪರಸ್ಪರ ಕಾಲೆಳೆಯುವ ಮೂಲಕ ನಮ್ಮ ನಮ್ಮಲ್ಲೇ ಅಪಪಚಾರ ನಡೆಯುತ್ತಿರುವುದು ಸಮೂದಾಯಕ್ಕೆ ಒಳ್ಳೆಯದಲ್ಲ , ಹಿರಿಯರ ಸಲಹೆ ಮತ್ತು ಮಾರ್ಗದರ್ಶನ ಪಡೆದುಕೊಂಡು ಯುವಶಕ್ತಿ ಸಂಘಟನೆಯನ್ನು ಮುನ್ನಡೆಸಲು ಮುಂದೆ ಬರಬೇಕಿದ್ದು ಇದಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಇರುತ್ತದೆ ಎಂದು ವಿಷ್ಣು ತಿಳಿಸಿದರು .
ವಿಶ್ವಕರ್ಮ ಸಮುದಾಯದ ಮುಖಂಡರಾದ ಎಸ್.ಬಿ.ಚಂದ್ರಶೇಖರಾಚಾರ್ಯ , ರುದ್ರಾಚಾರ್ , ಮಹದೇವಪಾಂಚಾಲ್ , ಎ.ರುದ್ರಪ್ಪ , ಹಿಂದುಳಿದ ವರ್ಗದ ಮುಖಂಡರಾದ ಫಲ್ಗುಣ , ವಿಶ್ವಕರ್ಮ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಾಚಾರ್ಯ , ಗೌರವಾಧ್ಯಕ್ಷ ಪ್ರಭಾಕರಾಚಾರ್ಯ , ಖಜಾಂಚಿ ಡಿ.ಹರಿಪ್ರಕಾಶ್ ಇದ್ದರು .ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.