ಕೋಲಾರ(ವಿಶ್ವ ಕನ್ನಡಿಗ ನ್ಯೂಸ್): ಸಹಕಾರಿ ರಂಗದ ನಾಯಕತ್ವ ಕಷ್ಟ , ಎಷ್ಟೇ ಉತ್ತಮವಾಗಿ ಕೆಲಸ ಮಾಡಿದರೂ ಅಡ್ಡಿ , ವಿರೋಧ ಸಾಮಾನ್ಯ ಆದರೆ ಈ ವ್ಯವಸ್ಥೆಯಿಂದ ಮಾತ್ರವೇ ಸಮಾಜದ ಕಟ್ಟಕಡೆಯ ಬಡವರಿಗೆ ಸಹಾಯ ಮಾಡಲು ಸಾಧ್ಯ ಎಂದು ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಹಾಲು ಉತ್ಪಾದಕರ ಸಹಕಾರ ಸಂಘಗಳು ಸೇರಿದಂತೆ ೧೮ ವರ್ಷ ಮೇಲ್ಪಟ್ಟವರಲ್ಲಿ ಶೇ .೭೩ ಮಂದಿ ಇಂದು ಇಲ್ಲಿ ಸದಸ್ಯರಾಗಿದ್ದಾರೆ , ಜನರ ನಡುವಿನ ಈ ವ್ಯವಸ್ಥೆಯಲ್ಲಿ ಸ್ವಲ್ಪ ತಪ್ಪು ಕಾಣಿಸಿದರೂ ಅದಕ್ಕೆ ಹೆಚ್ಚಿನ ಮಹತ್ವ ಬರುತ್ತದೆ ಆದ್ದರಿಂದ ಕಣ್ಣಲ್ಲಿ ಕಣ್ಣಿಟ್ಟು ಕೆಲಸ ಮಾಡಬೇಕಿದೆ ಎಂದರು.
ಯಶಸ್ವಿನಿ ಯೋಜನೆ ಮರು ಜಾರಿ ಸಾಧ್ಯತೆ ಬಡವರಿಗೆ ಆರೋಗ್ಯ ರಕ್ಷಣೆ ನೀಡುತ್ತಿದ್ದ ಯಶಸ್ವಿನಿ ಯೋಜನೆ ಮರು ಜಾರಿಯಾಗುವ ಸಾಧ್ಯತೆ ಇದ್ದು , ಇದರಿಂದ ಸಹಕಾರಿ ರಂಗದ ಸದಸ್ಯರಾದ ಎಲ್ಲರಿಗೂ ನಗದು ರಹಿತ ಆರೋಗ್ಯ ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ರಾಜಕಾರಣಬೇರೆ , ಸಹಕಾರಿ ವ್ಯವಸ್ಥೆಯೇ ಬೇರೆ ಎಂದ ಅವರು , ಸಹಕಾರ ರಂಗ ಬೆಳೆಯಲು ಕೊಡುಗೆ ನೀಡಿದ ಕುರಿಯನ್ , ಎಂ.ಎ.ಕೃಷ್ಣಪ್ಪ ಮತ್ತಿತರ ಸ್ಮರಣೆಯ ಮೂಲಕ ಜನತೆಯಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು. ಪತ್ರಕರ್ತರ ಸಹಕಾರ ಸಂಘ ತನ್ನ ಸದಸ್ಯರಿಗೆ ನಿವೇಶನ ನೀಡುವ ಆಶಯ ಈಡೇರಿಕೆಗೆ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು.
ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿ ಸದಸ್ಯ ಬಿ.ವಿ.ಗೋಪಿನಾಥ್ , ೨೦೦೭ ರಲ್ಲಿ ಆರಂಭವಾದ ಪತ್ರಕರ್ತರ ಸಹಕಾರ ಸಂಘ ೧೪ ವರ್ಷದ ವನವಾಸ , ಅಜ್ಞಾತವಾಸ ಮುಗಿಸಿ , ಕಳೆದ ಐದು ವರ್ಷಗಳಿಂದ ಸಾಲ ಸೌಲಭ್ಯ ಒದಗಿಸುವ ಮೂಲಕ ಧಾಪುಗಾಲು ಹಾಕುತ್ತಿದೆ , ಈ ಅಭಿವೃದ್ಧಿ ಚೇತೋಹಾರಿಯಂತ ಸಾಗಲಿ ಎಂದು ಹಾರೈಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು , ಸಹಕಾರ ಸಂಘ ಪತ್ರಕರ್ತರಿಗೆ ಆರ್ಥಿಕ ನೆರವು ನೀಡುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ , ಈ ಕಾರ್ಯ ಮತ್ತಷ್ಟು ಮುಂದುವರೆಯಲಿ , ಅಭಿವೃದ್ಧಿಪಥದತ್ತ ಸಾಗಿ ಮತ್ತಷ್ಟು ಮೆಚ್ಚುಗೆ ಗಳಿಸಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ , ೫ ವರ್ಷ ಬಾಲ್ಯಾವಸ್ಥೆಯಲ್ಲೇ ಇದ್ದ ಸಂಘ ಈಗ ಕ್ರಿಯಾಶೀಲವಾಗಿದೆ , ಸಂಘಕ್ಕೆ ಮರು ಜೀವ ನೀಡುವಲ್ಲಿ ಬ್ಯಾಲಹಳ್ಳಿ ಗೋವಿಂದಗೌಡರ ನೆರವು , ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕರಾಗಿದ್ದ ದೊಡ್ಡಮುನಿ ಅವರ ಸಹಕಾರ ಮರೆಯಲು ಸಾಧ್ಯವಿಲ್ಲ ಎಂದರು.
ಸಂಘದ ಕಾರ್ಯಕ್ಷಮತೆ ಹೆಚ್ಚಿಸಲು ಕ್ರಮವಹಿಸಲಾಗಿದೆ , ಸಾಲ ಮರುಪಾವಯೂ ಚೆನ್ನಾಗಿದೆ , ಸ ೦ ಘದ ಕಾರ್ಯದರ್ಶಿ ಗಂಗಾಧರ್ ಫಲಾಪೇಕ್ಷೆಯಿಲ್ಲದೇ ಕೆಲಸ ಮಾಡುತ್ತಿದ್ದಾರೆ ಎ ೦ ದು ಧನ್ಯವಾದ ಸಲ್ಲಿಸಿದರು.
ಸಹಕಾರ ಸಂಘದ ಉಪಾಧ್ಯಕ್ಷ ಕೋ.ನಾ.ಮಂಜುನಾಥ್ ನಿರೂಪಿಸಿ , ಸಂಘದ ಖಜಾಂಚಿ ಎ.ಜಿ.ಸುರೇಶ್ಕುಮಾರ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ , ವಕೀಲ ಕೆ.ಆರ್.ಧನರಾಜ್ , ಪತ್ರಕರ್ತರಾದ ಸದಾನಂದ್ , ವಾಸುದೇವಹೊಳ್ಳ , ಸದಾನಂದ್ , ಸಚ್ಚಿದಾನಂದ , ಜಗದೀಶ್ , ರಾಜೇಂದ್ರಸಿಂಹ , ಗಿರೀಶ್ , ಸುನೀಲ್ , ಗೋಪಿಕಾ ಮಲ್ಲೇಶ್ , ವಿ , ಬಾಬಾ , ಬಾಲಾಜಿ , ಮಾಮಿ , ಚಾಂದ್ಪಾಷ , ಜಿಲ್ಲಾ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್ , ಮುನಿವೆಂಕಟ , ಚಲಪತಿ , ನಾರಾಯಣಸ್ವಾಮಿ ಮತ್ತಿತರರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.