ಹಾಸನ (www.vknews.com) ; ಸಮಸ್ತ ಕೇರಳ ಜಂಹಿಯ್ಯತ್ತುಲ್ ಉಲಮಾ ಇದರ ಪ್ರಧಾನ ಪೋಷಕ ಸಂಘಟನೆಯಾದ ಸುನ್ನಿ ಯುವ ಜನಸಂಘ ಇದರ ನೂತನ ಹಾಸನ ಜಿಲ್ಲಾ ಸಮಿತಿ ಆಸ್ತಿತ್ವಕ್ಕೆ ಬಂದಿದ್ದು ಅಧ್ಯಕ್ಷರಾಗಿ ಸುಂಟಕೆರೆ ಸಲಿಂ ಪೈಝಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಯಾಗಿ ಬದ್ರುದ್ದೀನ್ ದಾರಿಮಿ ಕೋಶಾಧಿಕಾರಿಯಾಗಿ ಇಬ್ರಾಹಿಂ ಮುಸ್ಲಿಯಾರ್ ಆನೆಮಹಲ್ ಆಯ್ಕೆಯಾಗಿದ್ದಾರೆ.
ಉಳಿದಂತೆ ಪದಾಧಿಕಾರಿಗಳಾಗಿ ಅಬ್ಬುಚ್ಚ ಗುಳುಗಳಲೆ, ಅಬ್ಬಾಸ್ ಸುಂಟಕೆರೆ, ಉಮರ್ ಮುಸ್ಲಿಯಾರ್ ಕೊಳ್ಳಹಳ್ಳಿ ಉಪಾಧ್ಯಕ್ಷರು.ಬೀರಾನ್ ಆನೆಮಹಲ್, ಕಾದಿರಿಚ್ಚ ಸಕಲೇಶಪುರ, ಸಮದ್ ಪೈಝಿ ಆನೆಮಹಲ್ ಕಾರ್ಯದರ್ಶಿಗಳು.ಮಜ್ಲಿಸುನ್ನೂರು; ಇಸ್ಮಾಯಿಲ್ ದಾರಿಮಿ ಸುಂಟಕೆರೆ, ಶರೀಪ್ ಅರ್ಶದಿ ಅರಸುಳಿಗೆ, ಪಯಾಝ್ ಪೈಝಿ ಸುಂಟಕೆರೆ, ಪಾರೂಕ್ ಮುಸ್ಲಿಯಾರ್ ಕೊಲ್ಲಹಳ್ಳಿ.ಆಮಿಲ; ಅಬ್ಬಾಸ್ ಅಝ್ಹರಿ ನಾರ್ವೆ .ಸಲಹಾಗಾರರಾಗಿ ಪೋಕರ್ ಹಾಜಿ ಆನೆಮಹಲ್, ಯೂಸುಪ್,ಅಹ್ಮದ್ ಬಾವರನ್ನು ಆಯ್ಕೆ ಮಾಡಲಾಯಿತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಹಾಜಿ ಎಸ್ ಬಿ ದಾರಿಮಿ ಹಾಸನ ಜಿಲ್ಲಾದ್ಯಂತ ಸಮಸ್ತದ ಶಾಂತಿಯ ಸಂದೇಶವನ್ನು ಪ್ರಚಾರ ಪಡಿಸುವ ನಿಟ್ಟಿನಲ್ಲಿ ಎಸ್ ವೈ ಎಸ್ ಅವಿಶ್ರಾಂತ ಶ್ರಮವಹಿಸಿದರೆ ಆ ಮೂಲಕ ಎಲ್ಲಾ ಜಾತಿ ಜನಾಂಗದ ಪ್ರಶಂಸೆಯನ್ನು ಗಿಟ್ಟಿಸಿ ಕೊಳ್ಳಬಹುದಲ್ಲದೇ ಪಾರತ್ರಿಕ ವಿಜಯ ಸಾಧಿಸಬಹುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್ ವೈ ಎಸ್ ಕರ್ನಾಟಕ ರಾಜ್ಯ ಸಂಚಾಲಕ ಮೌಲಾನ ಯುಕೆ ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ ಪೂರ್ವಿಕ ಉಲಮಾಗಳು ತೋರಿಸಿ ಕೊಟ್ಟ ಸಮಸ್ತದ ಸಂದೇಶವೇ ಸತ್ಯ ಹಾದಿಯಾಗಿದೆ. ಭಾರತದಲ್ಲಿ ಧರ್ಮ ಪ್ರಚಾರಕ್ಕೆ ಮುಕ್ತ ಅವಕಾಶ ಇದೆ.ಇದನ್ನು ನಾವು ದುರುಪಯೋಗಿಸದೇ ಶಾಂತಿ ಮತ್ತು ಬಾತೃತ್ವಕ್ಕೆ ಒತ್ತು ನೀಡಿ ಮುಂದುವರಿಯಬೇಕು ಎಂದರು.
ಕೆ ಎಲ್ ಉಮರ್ ದಾರಿಮಿ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು. ನೌಷಾದ್ ಪೈಝಿ ಆನೆಮಹಲ್ ,ಇಬ್ರಾಹಿಂ ಮುಸ್ಲಿಯಾರ್ , ಸಲೀಂ ಕೊಲ್ಲಹಳ್ಳಿ ಭಾಷಣ ಮಾಡಿದರು. ವೀಕ್ಷಕರಾಗಿ ಹಾಜಿ ಹಕೀಂ ಪರ್ತಿಪಾಡಿ ಕೇಂದ್ರ ಕೌನ್ಸಿಲ್ ಸದಸ್ಯರು ಆಗಮಿಸಿದ್ದರು.ಸ್ಥಳೀಯ ಖತೀಬ್ ನಾಸಿರ್ ದಾರಿಮಿ ದುಹಾ ನೆರವೇರಿಸಿದರು. ಇಸ್ಮಾಯಿಲ್ ದಾರಿಮಿ ಸ್ವಾಗತಿಸಿದರು. ಜಿಲ್ಲೆಯ ಮೊಹಲ್ಲಾಗಳಿಂದ ಹಲವಾರು ಗಣ್ಯರು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.