ಉಚ್ಚಿಲ (www.vknews.com) : ತವಕ್ಕಲ್ ಮುಸ್ಲಿಮ್ ಯಂಗಮೆನ್ಸ್ ಅಸೋಸಿಯೇಷನ್ ಉಚ್ಚಿಲ ಇದರ ನೂತನ ಕಟ್ಟಡ(ಆಡಿಟೋರಿಯಮ್)ಉದ್ಘಾಟನೆ ಕಾರ್ಯಕ್ರಮ ತಾ-11-01-2022 ಮಂಗಳವಾರ ತವಕ್ಕಲ್ ಮುಸ್ಲಿಮ್ ಯಂಗಮೆನ್ಸ್ ಅಸೋಸಿಯೇಷನ್ ಇದರ ನೂತನ ಕಟ್ಟಡದಲ್ಲಿ ತವಕ್ಕಲ್ ಓವರ್ಸಿಸ್ ದುಬೈ ಇದರ SILVER JUBLEE MEMORIAL HALL ನು ತವಕ್ಕಲ್ ಓವರ್ಸಿಸ್ ದುಬೈ ಇದರ ಸ್ಥಾಪಕ ಅಧ್ಯಕ್ಷರಾದ ವೈ ಅಹ್ಮದ್ ಹಾಜಿ ಕಟ್ಟಡವನು ಉದ್ಘಾಟಿಸಿದರು.
ಈ ಕಾರ್ಯಕ್ರಮಕ್ಕೆ ಉಚ್ಚಿಲ ಮಸೀದಿ ಖಾತಿಬರಾದ ಜನಾಬ್ ಇಸಾಕ್ ಫೈಝಿ ದುಆದೊಂದಿಗೆ ಚಾಲನೆ ನೀಡಿದರು. ಇದೆ ಸಮಯದಲ್ಲಿ ತವಕ್ಕಲ್ ಓವರ್ಸಿಸ್ ದುಬೈ ಇದರ ಸದ್ಯಸರು ಬರೆದ (THE BOOK OF CONCEALED FACTS) ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮವನ್ನು ಎರ್ಮಾಳ್ ಮಸೀದಿ ಖತಿಬರಾದ ಜನಾಬ್ ಶಬ್ಬೀರ್ ಫೈಝಿ ನೆರವೇರಿಸಿದರು.
ಈ ಉದ್ಘಾಟನೆ ಕಾರ್ಯಕ್ರಮದಲ್ಲಿ ತವಕ್ಕಲ್ ಓವರ್ಸಿಸ್ ದುಬೈ ಮಾಜಿ ಅಧ್ಯಕ್ಷ ರಝಕ್ ವೈ ಎಸ್ ತವಕ್ಕಲ್ ಓವರ್ಸಿಸ್ ದುಬೈ ಪ್ರದಾನ ಕಾರ್ಯದರ್ಶಿ ವೈ ಎಸ್ ಇಲಿಯಾಸ್, ಕತಾರ್ ಸದಸ್ಯ ಮುಹಮ್ಮದ್ ಹುಸೇನ್, ತವಕ್ಕಲ್ ಓವರ್ಸಿಸ್ ಕುವೈಟ್ ಅಧ್ಯಕ್ಷ ಕರೀಮ್ ಬೀರಾಲಿ,ಸಂಸ್ಥೆಯ ಮಾಜಿ ಅಧ್ಯಕ್ಷ ಶರೀಫ್ ಕರೀಂ, ಉಪಾಧ್ಯಕ್ಷ ರಝಕ್ ಬಗ್ಗತೋಟ,ಪ್ರದಾನ ಕಾರ್ಯದರ್ಶಿ ಆರಿಫ್ ಕಾಸಿಮ್ ಮತ್ತು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.
ಇದೆ ಸಮಯದಲ್ಲಿ ತವಕ್ಕಲ್ ಮುಸ್ಲಿಮ್ ಯಂಗಮೆನ್ಸ್ ಅಸೋಸಿಯೇಷನ್ ಉಚ್ಚಿಲ ಇದರ ಅಧ್ಯಕ್ಷ ಅಬ್ದುಲ್ ರಝಕ್ ಮೋನಬ್ಬ ಇವರನ್ನು ತವಕ್ಕಲ್ ಓವರ್ಸಿಸ್ ದುಬೈ ಇದರ ಪದಾಧಿಕಾರಿಗಳಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಸ್ವಾಗತವನ್ನು ಬಶೀರ್ ಬಗ್ಗತೋಟ ಕೋರುತ್ತಾ ಅಧ್ಯಕ್ಷತೆಯನ್ನು ಅಬ್ದುಲ್ ರೆಹ್ಮನ್ ವಹಿಸಿದರು.ಅಹ್ಮದ್ ಗುಲಾಮ್ ನಿರೂಪಣೆ ಮಾಡಿ ನೆರವೇರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.