ಕುಶಾಲನಗರ (www.vknews.com) : ಕುಶಾಲನಗರದ ನೂರೇ ಮದೀನ ಎಜುಕೇಷನ್ ಟ್ರಸ್ಟ್ ವತಿಯಿಂದ ಕೊಡಗು ಜಿಲ್ಲೆಗೆ ನೂತನ ನಾಯಿಬ್ ಖಾಝಿಯಾಗಿ ಆಯ್ಕೆಯಾದ ಉಸ್ತಾದ್ ಶಾದುಲಿ ಫೈಝಿ ಕೊಟ್ಟಮುಡಿ ರವರಿಗೆ ಸನ್ಮಾನ ಮಾಡಲಾಯಿತು.
ದಿನಾಂಕ 11/01/2022 ರಂದು ಮಗ್ರಿಬ್ ನಮಾಜಿನ ನಂತರ ನೂರೇ ಮದೀನ ಹಿಫ್ಳುಲ್ ಖುರ್ಆನ್ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಜ. ಸೂಫಿ ಕೆ. ಬಿ. ರವರು ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಶಂಸುದ್ದೀನ್ ರವರು ಸ್ವಾಗತಿಸಿ, ಎಸ್. ವೈ. ಎಸ್. ಕುಶಾಲನಗರ ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ಲ ಮದನಿ ಉಸ್ತಾದ್ ರವರು ಕಾರ್ಯಕ್ರಮ ಉದ್ಘಾಟಿಸಿದರು.
ನೂತನ ಖಾಝಿಗಳಾದ ಶಾದುಲಿ ಫೈಝಿಯವರು ಮಾತನಾಡಿ ಎಲ್ಲರೂ ಪರಸ್ಪರ ದ್ವೇಷ ಮತ್ತು ಭಿನ್ನಾಭಿಪ್ರಾಯವಿಲ್ಲದೇ ಸಮುದಾಯದ ಉನ್ನತಿಗಾಗಿ ಸಂಘ ಸಂಸ್ಥೆಗಳಲ್ಲಿ ದುಡಿಯಬೇಕು, ವೈಯಕ್ತಿಕ ಲಾಭಕ್ಕಾಗಿ ಆಗಬಾರದೆಂದರು.
ಸಮಾರಂಭದಲ್ಲಿ ಎಸ್. ವೈ. ಎಸ್. ಕುಶಾಲನಗರ ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ಲ ಮದನಿ, ಕರ್ನಾಟಕ ಮುಸ್ಲಿಂ ಜಮಾಅತ್ ಬ್ಲಾಕ್ ಅಧ್ಯಕ್ಷರಾದ ಕಲೀಮುಲ್ಲಾ, ಸಮಾಜ ಸೇವಕರಾದ ಶಬೀರ್ ಪಾಷ ಮುಂತಾದವರನ್ನು ಕಾಣಿಕೆ ಫಲಕ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಮಾಜಿ ಅಧ್ಯಾಪಕರಾದ ಶೌಖತ್ತಲಿ ಸಖಾಫಿಯವರು ಸಮಾರಂಭಕ್ಕೆ ಶುಭಾರೈಸಿದರು. SSF, SჄS, KMJ ಕಾರ್ಯಕರ್ತರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ನೂತನ ಖಾಝಿಗಳು ಪ್ರಾರ್ಥಿಸಿ, ಸಂಸ್ಥೆಯ ಸದಸ್ಯರಾದ ಜಾಬಿರ್ ನಿಜಾ಼ಮಿಯವರು ಧನ್ಯವಾದ ಸಮರ್ಪಿಸಿದರು.
✍️ ಹಂಝ ಮಾನಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.