(www.vknews.com) : ಸಂಪಾಜೆ ಗ್ರಾಮದ ಪೇರಡ್ಕ-ಗೂನಡ್ಕ ಮುಹಿದ್ದೀನ್ ಜುಮಾ ಮಸೀದಿಯ ಆವರಣ ಗೋಡೆ ರಚನೆಗಾಗಿ ಕರ್ನಾಟಕ ಸರಕಾರದ ವಕ್ಫ್ ಇಲಾಖೆಯಲ್ಲಿ ಮಂಜೂರಾದ ರೂ.10 ಲಕ್ಷ ಅನುದಾನದಲ್ಲಿ 2ನೇ ಕಂತಿನ ಹಣ ರೂ. 5 ಲಕ್ಷ ಅನುದಾನವು ಕೆಪಿಸಿಸಿಯ ಮಾಜಿ ಕಾರ್ಯದರ್ಶಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಹಾಗೂ ಪೇರಡ್ಕ ಮುಹಿದ್ಧೀನ್ ಜುಮಾ ಮಸೀದಿಯ ಗೌರವಾಧ್ಯಕ್ಷರಾದ ಟಿ. ಎಂ. ಶಹೀದ್ ತೆಕ್ಕಿಲ್ ರವರ ಶಿಫಾರಸ್ಸಿನ ಮೇರೆಗೆ ಬಿಡುಗಡೆಗೊಂಡಿರುತ್ತದೆ.
ಈ ಮೊದಲು ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಮತ್ತು ಮಸೀದಿಯ ವಕ್ಫ್ ಸೊತ್ತುಗಳ ರಕ್ಷಣೆಗಾಗಿ ವಕ್ಫ್ ನ್ನಿಂದ ರೂ.28ಲಕ್ಷ, ಕರ್ನಾಟಕ ಸರಕಾರದ ಪ್ರವಾಸೋಧ್ಯಮ ಇಲಾಖೆಯಿಂದ ಯಾತ್ರಿ ನಿವಾಸ ನಿಮಾಣಕ್ಕೆ ರೂ.59 ಲಕ್ಷ, ಪೇರಡ್ಕ ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಕರ್ನಾಟಕ ಸರಕಾರದಿಂದ ರೂ. 5 ಕೋಟಿ, ಗೂನಡ್ಕ-ದರ್ಖಾಸ್ತು ಗ್ರಾಮೀಣ ರಸ್ತೆಗಳಿಗೆ ರೂ. 20 ಲಕ್ಷ ಅನುದಾನವನ್ನು ಒದಗಿಸಿ ಕೊಟ್ಟಿರುತ್ತಾರೆ.
ಅನುದಾನ ಬಿಡುಗಡೆಯಾಗಲು ಶ್ರಮಿಸಿದ ಟಿ. ಎಂ.ಶಹೀದ್ ತೆಕ್ಕಿಲ್ ರವರನ್ನು ಪೇರಡ್ಕ ಮುಹಿದ್ಧೀನ್ ಜುಮಾ ಮಸೀದಿಯ ಅಧ್ಯಕ್ಷ ಆಲಿಹಾಜಿ ಹಾಗೂ ಕಾರ್ಯದರ್ಶಿ ಅಬ್ದುಲ್ ರಜಾಕ್ ಮೊಟ್ಟೆಂಗಾರ್ ಅಭಿನಂಧಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.