ಬಂಟ್ವಾಳ (www.vknewsw.com) : ಬಿ.ಸಿ.ರೋಡಿನ ಲಯನ್ಸ್ ಸಭಾಂಗಣದಲ್ಲಿ ಜೆಡಿಎಸ್ನ ದ.ಕ.ಜಿಲ್ಲಾ ಮುಸ್ಲಿಂ ಪ್ರಮುಖರ ಸಭೆ ಜಿಲ್ಲೆಯ ಪ್ರಮುಖರ ಕೂಡುವಿಕೆಯಿಂದ ಬಹಳ ಯಶಸ್ವೀಯಾಗಿ ನಡೆಯಿತು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜೆಡಿಎಸ್ ರಾಜ್ಯ ಮುಖಂಡರಾದ ಇಕ್ಬಾಲ್ ಅಹ್ಮದ್ ಮುಲ್ಕಿ ರಾಜ್ಯದಲ್ಲಿ ಮುಸ್ಲಿಮರಿಗೆ ಜೆಡಿಎಸ್ ಕಲ್ಪಿಸಿದಷ್ಟು ಅವಕಾಶವನ್ನು ಮತ್ತ್ಯಾವುದೇ ಪಕ್ಷ ಕಲ್ಪಿಸಿಲ್ಲ ಎಂದು ಸಭೆಯನ್ನುದ್ಧೇಶಿಸಿ ಮಾತನಾಡುತ್ತಾ ಹೇಳಿದರು.
ಜೆಡಿಎಸ್ ಪಕ್ಷವು ಹಲವು ಮುಸ್ಲಿಂ ನಾಯಕರ ಹುಟ್ಟಿಗೆ ಕಾರಣಕರ್ತರಾಗಿದ್ದು, ಹಲವು ಮುಸ್ಲಿಂ ನಾಯಕರಿಗೆ ರಾಜಕೀಯವಾಗಿ ಬೆಳೆಯಲು ಹಾಗೂ ಅಧಿಕಾರವನ್ನು ಸವಿಯಲು ಅವಕಾಶವನ್ನು ಕೊಟ್ಟ ಪಕ್ಷವನ್ನು ಅವರು ಮರೆತು, ಪಕ್ಷದ ಕಷ್ಟಕಾಲದಲ್ಲಿ ಪಕ್ಷಕ್ಕೆ ಕೈಕೊಟ್ಟು ಬೇರೆ ಪಕ್ಷಗಳಿಗೆ ವಲಸೆ ಹೋದರು ಎಂದು ಖೇದವನ್ನು ವ್ಯಕ್ತಪಡಿಸಿದರು.
ಇತ್ತೀಚಿನ ದಿನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರಾದ ಬಿ.ಎಂ. ಫಾರೂಕ್ ರವರನ್ನು ಎಂಎಲ್ಸಿ ಯನ್ನಾಗಿ ಮಾಡಿತ್ತು ಹಾಗೂ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕಮಾಡಿತು. ಮತ್ತು ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಆರು ವರ್ಷಗಳ ಕಾಲ ಜಿಲ್ಲಾಧ್ಯಕ್ಷರನ್ನಾಗಿ ಮಾಡಿತ್ತು ಎಂದು ಮಾತನಾಡುತ್ತಾ ಹೇಳಿದರು.
ಜೆಡಿಎಸ್ ಪಕ್ಷವು ಹಲವು ನಾಯಕರನ್ನು ಹಾಗೂ ರಾಜ್ಯದ ಪ್ರಮುಖ ರಾಜಕಾರಣಿಗಳನ್ನಾಗಿ ಸೃಷ್ಟಿಸಿದ ಪಕ್ಷವಾಗಿದೆ. ಇಂದು ದುರದೃಷ್ಟವಶಾತ್ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪಕ್ಷ ಇತ್ತೀಚಿನ ದಿನಗಳಲ್ಲಿ ಸಮರ್ಥ ನಾಯಕರಿಲ್ಲದೆ ಹಿನ್ನಡೆಯನ್ನು ಕಂಡಿದೆ. ಮತ್ತು ಕೆಲವು ನಾಯಕರೇ ಪಕ್ಷದ ಹಿನ್ನಡೆಗೆ ಕಾರಣಕರ್ತರಾಗಿದ್ದಾರೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಲ್ಲಿ ಕೆಲಸ ಮಾಡಿದಲ್ಲಿ ನಿಶ್ಚಯವಾಗಿಯೂ ನಮ್ಮ ಪಕ್ಷ ಗತವೈಭವವನ್ನು ಮರಳಬಹುದೆಂದರು. ಸಭೆಯಲ್ಲಿ ಹಿರಿಯ ಮುಖಂಡರ ಸಹಿತ ಹಲವು ನಾಯಕರು ಭಾಗವಹಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.