ಗುರು ಬ್ರಹ್ಮ ಗುರು ವಿಷ್ಣು ಗುರುದೇವೊ ಮಹೇಶ್ವರ ಗುರು ಸಾಕ್ಷ್ಯಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ
(www.vknews.com) : ಪ್ರತಿಯೊಬ್ಬರ ಜೀವನದಲ್ಲಿ ಬಿಲಷ್ಠವಾದುದು ಗುರುಬಲ ಹಣಬಲ ಜನಬಲ ಕುಲಬಲಗಳಿಂದ ಗುರುಬಲ ಬಲಿಷ್ಠ ಅಂದ ಹಾಗೆ ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಾಜೆ ಪ್ರೌಢ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ ಜರಗಿತು.
ಸಮಾರಂಭದಲ್ಲಿ 2014-15 ನೇ ಸಾಲಿನಲ್ಲಿ ಪಾಠ ಭೊದನೆ ಮಾಡಿದ ಶಿಕ್ಷಕರು ಸೇರಿದಂತೆ ಪ್ರಸ್ತುತ ಕರ್ತವ್ಯದಲ್ಲಿದ್ದ ಶಿಕ್ಷಕರು ಭಾಗವಹಿಸಿದರು 2014-15 ನೇ ಸಾಲಿಮ SSLC ಪೂರೈಸಿದ ವಿಧ್ಯಾರ್ಥಿಗಳು ಆಯೋಜಿಸಿದ ಗುರುವಂದನಾ ಸಮಾರಂಭದಲ್ಲಿ ಗುರುವಂದನೆ ಸ್ವೀಕರಿಸಿ ನೆರೆದಿದ್ದ 2014-15 ನೇ ಸಾಲಿನ ಹತ್ತನೇ ತರಗತಿ ವಿಧ್ಯಾರ್ಥಿಗಳಿಗೆ ಅನುಗ್ರಹ ಸಂದೇಶ ನೀಡಿದರು.
ಇನ್ನೂ ಬೆಳಗ್ಗೆ 09:00 ಗಂಟೆಗೆ ಪ್ರೌಢಶಾಲೆ ಆವರಣ ಪ್ರವೇಶಿಸಿದ ಮಾಜಿ ವಿಧ್ಯಾರ್ಥಿಗಳೆಲ್ಲರೂ ಇಳಿಹೊತ್ತಿನ ವರೆಗೂ ಇದ್ದು ಎಂಜಾಯ್ ಮಾಡಿದ್ರು. ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟದ ಜೊತೆಗೆ ಮನರಂಜನೆಯ ರಸದೂಟ ಒಂದೇಡೆಯಾದರೆ ಸಂಜೆಯ ಹೊತ್ತಿಗೆ ಶಿಕ್ಷಕರೊಂದಿಗೆ ಫೊಟೊ ತೆಗೆಸಿ ನೆನಪಿನ ಬುತ್ತಿ ಹೊರಡಿಸಿತು. ಸುಮಾರು 50ಕ್ಕೂ ಹೆಚ್ಚು ಮಾಜಿ ವಿಧ್ಯಾರ್ಥಿಗಳು ಈ ಅಭೂತಪೂರ್ವ ಸಮಾರಂಭಕ್ಕೆ ಸಾಕ್ಷಿಯಾದರು. ಸುಮಾರು 7 ವರ್ಷಗಳ ನಂತರ ಒಂದೆಡೆ ಸೇರಿದ ಈ ಸ್ನೇಹಿತರ ಸಮ್ಮಿಳನವು ಹಲವು ಮರೆಯಲಾಗದ ಘಟನೆಗೆ ಸಾಕ್ಷಿ ಆಯಿತು. ಅಲ್ಲದೇ ಸಮಾರಂದುದ್ದಕ್ಕೂ ಹಲವು ಮನರಂಜನಾ ಚಟುವಟಿಕೆಗಳನ್ನು ನಡೆದ ಲಾಯಿತು.
ಇನ್ಮೂ ಒಂದೆಡೆ ಸೇರಿದ ಸ್ನೇಹಿತರೆಲ್ಲರೂ ಸಖತ್ ಹಾಡುಗಳಿಗೆ ಸ್ಟೆಪ್ ಹಾಕಿದ್ರೆ ಹಾಡಿನ ಬಂಡಿಯಲ್ಲೂ ತಾವೇನು ಕಡಿಮೆ ಇಲ್ಲ ಅನ್ನೊದನ್ಮ ಸಾರಿದ ಕುಚುಕುಗಳನ್ನು ಇಡೀ ದಿನ ಸಮಯ ಕಳೆದದ್ದೇ ಗೊತ್ತಾಗಲಿಲ್ಲ ಅಂತ ಗೊಣಗುತ್ತ ಸಮಾರಂಭದ ನಂತರ ಒಲ್ಲದ ಮನಸ್ಸಿನಿಂದ ಕಾಲ್ಕಿತ್ತಿದ್ದಂತು ಸುಳ್ಳಲ್ಲ.
ಸಮಾರಂಭದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀಯುತ ಶ್ರೀನಿವಾಸ್ ನಾಯಕ್, ಅಂದಿನ ಮುಖ್ಯೋಪಾಧ್ಯಾಯರಾದ ಶ್ರೀಯುವ ಶಿವಕುಮಾರ್ ಮುಸಂಡಿ ಅಂದಿನ SDMC ಅಧ್ಯಕ್ಷರಾಗಿದ್ದ ಶೀಯುತ ಡಿ.ಕೆ ಹಂಝ ಶಿಕ್ಷಕರಾದಂತಹ ದಿನೇಶ್ ಪೂಜಾರಿ ಸಿ, ಗೌಡ ಶ್ರೀಮತಿ ಬಬಿತಾ,ಸುಶ್ಮ, ಕುಸುಮ ಸೇರಿದಂತೆ 2014-15ನೇ ಸಾಲಿನ ಬಹುತೇಕರು ಉಪಸ್ಥಿತರಿದ್ದು ಸಮಾರಂಭದ ಯಶಸ್ವಿಗೆ ಕಾರಣವಾದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.