ಕೋಲಾರ (ವಿಶ್ವಕನ್ನಡಿಗ ನ್ಯೂಸ್) :ದಿನಾಂಕ 05-01-2022 ರಂದು ಕೋಲಾರ ತಾಲ್ಲೂಕಿನ ಹುದುಕುಳ ಬಸ್ ತಂಗುದಾಣದ ಬಳಿ ಒಬ್ಬ ನಿರಾಶ್ರಿತ ಗಾಯದಿಂದ ಬರಳುತ್ತಿದ್ದು , ತಂಗುದಾಣದಲ್ಲಿಯೇ ಬಿದ್ದನು.
ಈ ಬಗ್ಗೆ ಮಾಹಿತಿಯನ್ನು ಕೋಲಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಹೆಚ್.ಗಂಗಾಧರ್ ಅವರು ಬೀರಂಡಹಳ್ಳಿ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕರಿಗೆ ಮಾಹಿತಿಯನ್ನು ನೀಡಿ ಸದರಿ ವ್ಯಕ್ತಿಗೆ ಆಶ್ರಯ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಈ ನಿರ್ದೇಶನದ ಮೇರೆಗೆ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕರು ತಮ್ಮ ಸಿಬ್ಬಂದಿಯನ್ನು ಹುದುಕುಳ ಪ್ರಯಾಣಿಕರ ತಂಗುದಾಣದ ಬಳಿ ಕಳುಹಿಸಿ ಸದರಿ ವ್ಯಕ್ತಿಯನ್ನು ವಿಚಾರಣೆ ಮಾಡಿ ಅವನನ್ನು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕರೆದುಕೊಂಡು ಬಂದು ವಸತಿ ವ್ಯವಸ್ಥೆ ಮಾಡಿರುತ್ತಾರೆ.
ನಿರಾಶ್ರಿತರ ಪರಿಹಾರ ಕೇಂದ್ರದ ಸಿಬ್ಬಂದಿಯವರು ವಿಚಾರಿಸಿದಾಗ ಅವನು ಹಿಂದಿ ಭಾಷೆಯಲ್ಲಿ ತನಗೆ ಯಾರೋ ವಾಹನದಿಂದ ಅಪಘಾತ ಪಡಿಸಿ , ಗಾಯ ಪಡಿಸಿ ತಂಗುದಾಣದಲ್ಲಿ ಬಿಟ್ಟು ಹೋಗಿರುವ ಬಗ್ಗೆ ತಿಳಿಸಿರುತ್ತಾನೆ. ಅವನು ಹೆಸರು ಮತ್ತು ವಿಳಾಸ ತಿಳಿಸುತ್ತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.