ಮುಲ್ಕಿ (www.vknews.com) : ಸಮಸ್ತ ಉಲಮಾ ಒಕ್ಕೂಟದ ಅಧೀನ ಸಂಸ್ಥೆ ಸುನ್ನಿ ಮೊಹಲ್ಲಾ ಫಡರೇಶನ್ (ಎಸ್ ಎಂ ಎಫ್) ಇದರ ಸುರತ್ಕಲ್ ವಲಯ ಸದಸ್ಯತ್ವ ಅಭಿಯಾನಕ್ಕೆ ಮುಲ್ಕಿ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ಚಾಲನೆ ನೀಡಲಾಯಿತು.ಮೊಹಲ್ಲಾ ಸಬಲೀಕರಣವನ್ನು ಗುರಿಯಾಗಿಟ್ಟು ಕೊಂಡು ಕಾರ್ಯಚರಿಸುತ್ತಿರುವ ಎಸ್ ಎಂ ಎಫ್ ನೊಂದಿಗೆ ಪ್ರತೀ ಮೊಹಲ್ಲಾವನ್ನು ಅಂಗೀಕರಿಸಲು ಸಮಸ್ತದ ಉಲಮಾಗಳು ಕರೆ ಕೊಟ್ಟಿದ್ದು ಇದನ್ನು ಪಾಲಿಸುವುದು ನಮ್ಮ ಕರ್ತವ್ಯ ವಾಗಿದೆ ಎಂದು ಸುರತ್ಕಲ್ ವಲಯ ನಿರೀಕ್ಷಕರಾದ ಎಸ್ ಬಿ ದಾರಿಮಿ ಕರೆ ನೀಡಿದರು.
ಇಂದು ಸಂಘಟಿತವಾಗಿದ್ದರೆ ಏನನ್ನೂ ಸಾಧಿಸಬಹುದು ಎಂಬುದನ್ನು ಎಸ್ ಎಂ ಎಫ್ ಸಂಘಟನೆ ಕೇರಳದಲ್ಲಿ ತೋರಿಸಿ ಕೊಟ್ಟಿದೆ ಎಂದು ಅಭಿಯಾನ ಉದ್ಘಾಟಿಸಿ ಮೌಲಾನ ಯು ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ನುಡಿದರು. ಮದ್ರಸ ಮ್ಯಾನೇಜ್ಮೆಂಟ್ ಅದ್ಯಕ್ಷ ಹಾಜಿ ಏಕೆ ಜೀಲಾನಿ ಪ್ರಥಮ ಸದಸ್ಯತ್ವ ಪಡೆದು ಕೊಂಡರು.
ಅಬ್ದುಲ್ಲಾ ದಾರಿಮಿ, ಎಂ ಎಸ್ ರಿಯಾಝ್ ಪೈಝಿ ಪಲಿಮಾರ್, ಚೊಕ್ಕಬೆಟ್ಟು ಅದ್ಯಕ್ಷ ಬಶೀರ್, ಹನೀಫ್ ಕೊಲ್ನಾಡ್, ಇಬ್ರಾಹಿಂ ಬೊಳ್ಳೂರು, ಮುಹಮ್ಮದ್ ಬೊಳ್ಳೂರು, ಶಿಹಾಬ್ ಚೊಕ್ಕಬೆಟ್ಟು, ಹಸನ್ ಬಾವ ಮುಲ್ಕಿ, ಶಿಹಾಬ್ ಬೊಳ್ಳೂರು, ಮುಬೀನ್ ಕೊಲ್ನಾಡ್, ಸುಲೈಮಾನ್ ಹಾಜಿ ಬೊಳ್ಳೂರು, ರಝಾಕ್ ಅಝ್ಹರಿ, ಅಬ್ದುರ್ರಹಿಮಾನ್ ಸಹದಿ, ಇಂತಿಯಾಝ್ ಇಡ್ಯಾ, ಬದ್ರುದ್ದೀನ್, ಎಸ್ ಎಂ ಹನೀಪ್ ಇಡ್ಯಾ, ಅಬೂಬಕರ್ ಇಡ್ಯಾ ಮೊದಲಾದ ಉಲಮಾ ಉಮರಾ ನಾಯಕರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.