ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ): ಶ್ರೀ ಕೃಷ್ಣ ಮಠದಲ್ಲಿ ಎರಡು ವರ್ಷಳಿಗೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ ವೈಭವದಿಂದ ಸಂಪನ್ನಗೊಂಡಿತು .
ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಪರ್ಯಾಯ ಆಚರಣೆ ಮಾಡಲಾಯಿತು ಸಾಂಪ್ರದಾಯಿಕ ಆಚರಣೆಗಳಿಗೆ ಮಾತ್ರ ಮಹೋತ್ಸವ ಸೀಮಿತವಾಯಿತು ಸೋಮವಾರ ರಾತ್ರಿ ಜೋಡುಕಟ್ಟೆಯಿಂದ ಪರ್ಯಾಯ ಮೆರವಣಿಗೆ ಆರಂಭಗೊಂಡಿತ್ತು.ಸೀಮಿತ ಟ್ಯಾಬ್ಲೋ,ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು.ಟ್ಯಾಬ್ಲೋ ಪಲ್ಲಕ್ಕಿಯಲ್ಲಿ ಅಷ್ಟಮಠಾಧೀಶರ ಮೆರವಣಿಗೆ ನಡೆಯಿತು . ಕೊರೊನಾ ಹಿನ್ನೆಲೆ ಮಾನವ ಹೊರುವ ಪಲ್ಲಕ್ಕಿ ರದ್ದುಗೊಳಿಸಲಾಗಿತ್ತು.ಪರ್ಯಾಯ ಪೀಠಾಧೀಶರಾದ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿಯವರಿಗೆ ಎರಡು ವರ್ಷ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದ್ದರು ಮುಂದಿನ ಆಡಳಿತವನ್ನು ಕೃಷ್ಣಾಪುರ ಮಠದವರು ವಹಿಸಿಕೊಳ್ಳಲಿದ್ದಾರೆ. ಕರೋನ ವೀಕೆಂಡ್ ಕರ್ಪ್ಯೂ ನಡುವೆಯೂ ಉಡುಪಿ ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯದ ಮಹಾ ಪರ್ವ ಯಶಸ್ವೀಯಾಗಿ ನಡೆಯಿತು.
ಪರ್ಯಾಯದ ಬಗ್ಗೆಒಂದಿಷ್ಟು:
ಉಡುಪಿ ಪರ್ಯಾಯ ಉತ್ಸವ ಕರಾವಳಿ ಕರ್ನಾಟಕದ ಉಡುಪಿಯಲ್ಲಿ ನಡೆಯುವ ದ್ವೈವಾರ್ಷಿಕ ಹಬ್ಬವಾಗಿದೆ. ಉಡುಪಿ ಶ್ರೀ ಕೃಷ್ಣ ದೇವಾಲಯದ ನಿರ್ವಹಣೆಯನ್ನು ಉಡುಪಿಯ ಅಷ್ಟ ಮಠಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಹಸ್ತಾಂತರಿಸುವುದನ್ನು ಪರ್ಯಾಯ ಉತ್ಸವದ ಮೂಲಕ ಆಚರಿಸಲಾಗುತ್ತದೆ.
ಹಿನ್ನೆಲೆ: ಉಡುಪಿ ಶ್ರೀಕೃಷ್ಣ ದೇವಸ್ಥಾನವನ್ನು ಎಂಟು ಮಠಗಳು ಸರದಿಯಲ್ಲಿ ನಿರ್ವಹಿಸುತ್ತವೆ. ಇವುಗಳನ್ನು ಅಷ್ಟ ಮಠಗಳೆಂದು ಕರೆಯಲಾಗುತ್ತದೆ. ಪುತ್ತಿಗೆ, ಪುಲಿಮಾರು, ಅದಮಾರು, ಶಿರೂರು, ಪೇಜಾವರ, ಸೋಧೆ, ಕಣಿಯೂರು ಮತ್ತು ಕೃಷ್ಣಪುರ ಇವು ಈ ಎಂಟು ಮಠಗಳಾಗಿವೆ. ಪ್ರತಿ ಮಠದ ನೇತೃತ್ವವನ್ನು ಸ್ವಾಮೀಜಿಗಳು ನಿರ್ವಹಿಸುತ್ತಾರೆ. ಪ್ರತಿ ಮಠವು ಎರಡು ವರ್ಷಗಳ ಕಾಲ ಶ್ರೀ ಕೃಷ್ಣ ದೇವಸ್ಥಾನದ ಉಸ್ತುವಾರಿ ನಿರ್ವಹಿಸಿ ಪರ್ಯಾಯ ಉತ್ಸವದ ವೇಳೆ ಇನ್ನೊಂದು ಮಠಕ್ಕೆ ಹಸ್ತಾಂತರಿಸುತ್ತಾರೆ.
ಪರ್ಯಾಯ ಉತ್ಸವ: ಪರ್ಯಾಯ ಉತ್ಸವದ ಆಚರಣೆಗಳು ಮುಂಜಾನೆಯಿಂದಲೇ ಪ್ರಾರಂಭವಾಗುತ್ತವೆ. ದೇವಾಲಯದ ನಿರ್ವಹಣೆಯನ್ನು ವಹಿಸಿಕೊಳ್ಳಲಿರುವ ಮಠದ ಸ್ವಾಮೀಜಿಗಳು ಪುಷ್ಕರಿಣಿಯಲ್ಲಿ ಪವಿತ್ರ ಸ್ನಾನ ಮಾಡಿ ಶ್ರೀ ಕೃಷ್ಣ ದೇವಸ್ಥಾನಕ್ಕೆ ಪಲ್ಲಕ್ಕಿಯಲ್ಲಿ ಸಾಗುತ್ತಾರೆ. ಮೆರವಣಿಗೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಜೊತೆಗಿರುತ್ತವೆ. ಶ್ರೀ ಕೃಷ್ಣ ದೇವಸ್ಥಾನದಲ್ಲಿ, ನಿರ್ವಹಣೆಯನ್ನು ಹಸ್ತಾಂತರಿಸಬೇಕಾದ ಪ್ರಸ್ತುತ ಸ್ವಾಮೀಜಿಗಳು ಅನೇಕ ಆಚರಣೆಗಳನ್ನು ಮಾಡುತ್ತಾರೆ ಮತ್ತು ದೇವಾಲಯದ ಕೀಲಿಗಳು, ಅಕ್ಷಯ ಪಾತ್ರೆ ಮತ್ತು ಇತರ ಪೂಜಾ ಸಾಮಗ್ರಿಗಳನ್ನು ನೀಡಿ ಅಧಿಕಾರ ಹಸ್ತಾಂತರಿಸುತ್ತಾರೆ. ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರ ಅನುಕೂಲಕ್ಕಾಗಿ ಸಾರ್ವಜನಿಕ ಸೇವೆ ಮತ್ತು ದರ್ಬಾರ್ ಅನ್ನು ಆಮೇಲೆ ನಡೆಸಲಾಗುತ್ತದೆ.
ಆಚರಣೆಗಳು: ಪರ್ಯಾಯ ಉತ್ಸವ ಸಮಯದಲ್ಲಿ ಉಡುಪಿ ನಗರವು ಅತ್ಯುತ್ತಮವಾಗಿ ಶೃಂಗರಿಸಿಕೊಂಡು ಮದುವಣಗಿತ್ತಿಯಂತೆ ಕಾಣುತ್ತದೆ. ಪರ್ಯಾಯ ಉತ್ಸವ ಅಂಗವಾಗಿ ಹಲವಾರು ಶಾಪಿಂಗ್, ಆಹಾರ ಉತ್ಸವ ಮತ್ತು ಮನರಂಜನಾ ಕಾರ್ಯಕ್ರಮಗಳು ಸಂದರ್ಶಕರಿಗೆ ಲಭ್ಯವಿರುತ್ತವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.