ಇಂದಿನ ಅಪಾಯಕಾರಿ ಮತ್ತು ಭಯಗ್ರಸ್ತ ವಾತಾವರಣವನ್ನು ಹೋಗಲಾಡಿಸಲು ಭಾರತೀಯರೆಲ್ಲರೂ ಒಗ್ಗಟ್ಟಾಗಿ ಸಂವಿಧಾನ ಸಂರಕ್ಷಣೆಗೆ ಮುಂದಾಗೋಣ – ಅಡ್ವಕೇಟ್ ಹನೀಫ್ ಹುದವಿ
ಮಾಡನ್ನೂರು (ವಿಶ್ವ ಕನ್ನಡಿಗ ನ್ಯೂಸ್) : ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಕಾನೂನು ಬದ್ಧ ಬಾಳ್ವೆಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಅವಕಾಶ ಕೊಟ್ಟಿದೆ. ವಿವಿಧ ದೇಶಗಳ ಸಂವಿಧಾನಗಳಲ್ಲಿನ ಆಯ್ಕೆಮಾಡಲ್ಪಟ್ಟ ಮೌಲ್ಯಯುತ ವೈಚಾರಿಕ ಅಂಶಗಳಿಂದ ಸಿಧ್ಧಪಡಿಸಿರುವ ಸಂವಿಧಾನವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸುಭದ್ರ ಬುನಾದಿ ಮತ್ತು ಅಡಿಪಾಯವಾಗಿದೆ. ಬಹುಮುಖದಲ್ಲಿ ಏಕತೆಯನ್ನು ಕಂಡಭಾರತವನ್ನು ಏಕಮುಖ ಭಾರತವಾಗಿ ಪರಿವರ್ತಿಸಲು ಗುರಿ ಹೊಂದಿರುವವರಿಂದ ಸಂವಿಧಾನ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದು, ಸಂವಿಧಾನ ಪ್ರತಿಪಾದಿಸುವ ಸ್ವಾತಂತ್ರ್ಯ,ಸಮಾನತೆ ಅಪಾಯವನ್ನೆದುರಿಸುತ್ತಿರುವಾಗ ಭಾರತೀಯರೆಲ್ಲರೂ ಒಟ್ಟಾಗಿ ಸಂವಿಧಾನದ ಆಶಯದಂತೆ ಬಾಳಿದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಸಬಲಗೊಳಿಸಬಹುದು.
ದಬ್ಬಾಳಿಕೆ, ದೌರ್ಜನ್ಯ, ಮೂಲಭೂತವಾದ,ಆತಂಕ,ಶೋಷಣೆ,ಹಿಂಸೆ, ಕ್ರೌರ್ಯ ಗಳಿಂದ ಉಂಟಾದ ಭಯಗ್ರಸ್ತ ವಾತಾವರಣಕೊನೆಗೊಂಡು ನೆಮ್ಮದಿಯ ನಾಳೆಗಳು ನಮ್ಮದಾಗಲಿವೆ ಎಂದು ನೂರುಲ್ ಹುದಾ ಅಕಾಡೆಮಿ ಪ್ರಾಂಶುಪಾಲರಾದ ಬಹು ಅಡ್ವಕೇಟ್ ಹನೀಫ್ ಹುದವಿ ಮಾಡನ್ನೂರು ಮಸೀದಿ ವಠಾರದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಂದೇಶ ನೀಡುತ್ತಾ ನುಡಿದರು.
ಮಸೀದಿ ಅಧ್ಯಕ್ಷರಾದ ಕೆ .ಕೆ.ಇಬ್ರಾಹೀಂ ಹಾಜಿ ಧ್ವಜಾರೋಹಣ ಗೈದು ಗಣರಾಜ್ಯ ದಿನದ ಶುಭಾಶಯ ಕೋರಿದರು.ಬಹು ಸಯ್ಯಿದ್ ಬುರ್ಹಾನ್ ತಂಙಳ್ ಮಖಾಂ ಝಿಯಾರತ್ ನೇತೃತ್ವ ವಹಿಸಿದರು.ಮದ್ರಸ ಮುಖ್ಯೋಪಾಧ್ಯಾಯರಾದ ಬಹು ಇಮ್ರಾನ್ ದಾರಿಮಿ ಪ್ರತಿಜ್ಞಾವಿಧಿ ಬೋಧಿಸಿದರು.
ನೂರುಲ್ ಹುದಾ ಅಕಾಡೆಮಿ ಹಾಗೂ ಮದ್ರಸ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಗೂ ದೇಶಭಕ್ತಿ ಗೀತೆ ಹಾಡಿದರು. ಸ್ಥಳೀಯ ಖತೀಬರಾದ ಸಿರಾಜುದ್ದೀನ್ ಫೈಝಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಜಮಾಅತ್ ಬಾಂಧವರು ನೂರುಲ್ ಹುದಾ ಅಕಾಡೆಮಿ ಪ್ರಾಧ್ಯಾಪಕರು ಮದ್ರಸ ಅಧ್ಯಾಪಕರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.