(www.vknews.in) : ಉಡುಪಿ ಸ್ಕಾರ್ಪ್ ವಿವಾದವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಹರಿಸುವ ಪ್ರಯತ್ನದಲ್ಲಿ ಜಿ.ಎ ಬಾವಾರವರ ತಂಡವು ನಡೆಸಿದ ಮೊದಲ ಪ್ರಯತ್ನ ಯಶಸ್ವಿಯಾಗಿದೆ. ಈ ಮೊದಲು ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ ಬಾವಾರವರು ವಿದ್ಯಾರ್ಥಿನಿಯರೊಂದಿಗೆ ಸಮಾಲೋಚಿಸಿ ಅವರ ಅಭಿಪ್ರಾಯ ಸಂಗ್ರಹಿಸಿದರು. ಅನಂತರ ಈ ವಿವಾದವನ್ನು ಉಡುಪಿಯಲ್ಲೇ ಇತ್ಯರ್ಥ ಮಾಡಲು ನಿರಂತರ ಪ್ರಯತ್ನಿಸಿದ ಉಡುಪಿ ಮುಸ್ಲಿಂ ಒಕ್ಕೂಟದ ನಾಯಕರ ಜೊತೆಯೂ ಸಮಾಲೋಚಿಸಿದರು. ಅನಂತರ ಸಿ.ಎಫ್.ಐ ನ ವಿದ್ಯಾರ್ಥಿ ನಾಯಕರೊಂದಿಗೆ ಮೂರು ಸುತ್ತು ಕುಳಿತು ಸರಿಯಾದ ಮಾಹಿತಿ ಪಡೆದರು. ಜಿಲ್ಲಾಧಿಕಾರಿಯನ್ನು, ರೆವೆನ್ಯೂ ಅಧಿಕಾರಿಗಳನ್ನೂ, ಪೊಲೀಸ್ ಅಧಿಕಾರಿಗಳನ್ನೂ, ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೂ ಸಂಪರ್ಕಿಸಿ ಪ್ರಕರಣದ ಸುಖಾಂತ್ಯಕ್ಕೆ ಸಹಕರಿಸಲು ಮನವಿ ಮಾಡಿದರು. ಅವರೆಲ್ಲರ ಅಭಿಪ್ರಾಯ ಮತ್ತು ಸಹಕಾರ ಪಡೆದು ಕೊನೆಯಲ್ಲಿ ಉಡುಪಿ ಶಾಸಕರಾದ ರಘುಪತಿ ಭಟ್ಟ್ ಮತ್ತು ಉಡುಪಿ ಸರಕಾರಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕರ ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದರು.
ವಿದ್ಯಾರ್ಥಿಗಳ ಅನುಭವ ಮತ್ತು ಬೇಡಿಕೆ, ಅವರಿಗಾದ ತಾರತಮ್ಯ, ಅವಮಾನ ಮತ್ತು ಹಕ್ಕುಗಳ ಕುರಿತಂತೆಯೂ ಬಾವಾರವರು ಶಾಸಕರ ಸಭೆಯಲ್ಲಿ ಹೇಳಿದರು. ಈ ಸಂದರ್ಭ ಉಡುಪಿ ಮುಸ್ಲಿಂ ಒಕ್ಕೂಟದ ನಾಯಕರೂ ಸ್ಕಾರ್ಪ್ ಮತ್ತು ಬುರ್ಖಾದ ವ್ಯತ್ಯಾಸ, ಎಬಿವಿಪಿಯ ಮೆರವಣಿಗೆಯಲ್ಲಿ ವಿದ್ಯಾರ್ಥಿನಿಯರ ಸಮವಸ್ತ್ರದಲ್ಲೇ ಹಿಜಾಬ್ ಹಾಕಿಸಿ ಮೆರವಣಿಗೆ ನಡೆಸಿ ಆ ಪೊಟೋವನ್ನು ವೈರಲ್ ಮಾಡಿದ್ದು ಕಾಲೇಜಿನಲ್ಲೇ ಪ್ರೋತ್ಸಾಹ ಇತ್ತು, ಇನ್ನಿತರ ಧರ್ಮದ ಆಚರಣೆ ಕಾಲೇಜಿನಲ್ಲಿ ನಡೆಯುತ್ತಿದೆ ಆಗ ನಾವು ಗೌರವಿಸಿದ್ದೇವೆ, ನಮ್ಮ ತಲೆಯ ಶಾಲಿನಿಂದ ಸಮಸ್ಯೆ ಇರುವ ನೋವನ್ನು ವಿದ್ಯಾರ್ಥಿನಿಯರು ಹೇಳುವುದನ್ನೂ, ಒಕ್ಕೂಟದ ಮೂಲಕ ಹಲವು ಸುತ್ತಿನ ಮಾತುಕತೆ ನಡೆಸಿಯೂ ವಿದ್ಯಾರ್ಥಿನಿಯರು ತಮ್ಮ ಹಕ್ಕೊತ್ತಾಯ ನಿರ್ಧಾರದಲ್ಲಿ ಅಚಲವಾಗಿರುವುದಕ್ಕೆ ಕಾರಣವನ್ನೂ ವಿವರಿಸಿದರು.
ಪ್ರಾಂಶುಪಾಲರು ಉತ್ತರಿಸುತ್ತಾ, ಮುಸ್ಲಿಂ ಬಡ ವಿದ್ಯಾರ್ಥಿಗಳಿಗೆ ಸ್ಕ್ವಾಲರ್ಶಿಪ್ ನೀಡಿದ್ದೇವೆ. ಕೆಲವರ ಫೀಸು ಬರಿಸಿದ್ದೇವೆ. ಯಾರಿಗೂ ತಾರತಮ್ಯ ಮಾಡಿಲ್ಲಾ ಎಂದು ಹೇಳಿದರು. ಇದು ಮಹಿಳಾ ಕಾಲೇಜು, 700 ವಿದ್ಯಾರ್ಥಿನಿಯರು ಇಲ್ಲಿದ್ದಾರೆ. 75 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ ಈ 8 ವಿದ್ಯಾರ್ಥಿನಿಯರು ಮಾತ್ರವೇ ಹಿಜಾಬ್ ಗೆ ಬೇಡಿಕೆ ಇಟ್ಟಿರುವುದು ಉಳಿದವರಿಗೆ ಅದು ಧರ್ಮದ ವಿಷಯ ಆಗಿಲ್ಲಾ ಎಂದರು. ಈ ಸಂದರ್ಭ ಧರ್ಮದ ಪಾಲನೆ ಅವರಿಗೆ ಬಿಟ್ಟದ್ದು, ಅದರ ಬಗ್ಗೆ ಇಲ್ಲಿ ಚರ್ಚಿಸುವುದಿಲ್ಲ. ಅವರು ಯುನಿಫಾರ್ಮ್ ನಲ್ಲಿರುವ ಶಾಲನ್ನು ತಲೆಗೆ ಹಾಕಿದರೆ ದೊಡ್ಡ ಸಮಸ್ಯೆ ಆಗುವುದಿಲ್ಲ. ಆದರೂ ನಮ್ಮ ಈಗಿನ ಮೊದಲ ಪ್ರಶ್ನೆ ಮಕ್ಕಳ ಶಿಕ್ಷಣಕ್ಕೆ ತಡೆಯಾಗುತ್ತಿದೆ, ಹಾಜರಾತಿ ಇಲ್ಲ. ಸೌಹಾರ್ಧತೆಗೆ ದಕ್ಕೆಯಾಗುತ್ತಿದೆ.
ಅದಕ್ಕೆ ತಕ್ಷಣದ ಪರಿಹಾರ ಮಾಡಲು ನಾವೆಲ್ಲರೂ ಜವಾಬ್ದಾರರು ಎಂದು ಜಿ.ಎ ಬಾವಾ ರವರು ಹೇಳಿದಾಗ, ಶಾಸಕರಾದ ರಘುಪತಿ ಭಟ್ಟ್ ಅದಕ್ಕಾಗಿ ಮಕ್ಕಳ ಹಾಜರಾತಿ ಮತ್ತು ಆನ್ ಲೈನ್ ಶಿಕ್ಷಣ ವ್ಯವಸ್ಥೆಯನ್ನು ಮಾಡಲು ಪ್ರಾಂಶುಪಾಲರಿಗೆ ಸೂಚಿಸಿದರು. ನನ್ನ ಕ್ಷೇತ್ರದಲ್ಲಿ ಯಾರಿಗೂ ಸಮಸ್ಯೆ ಆಗಬಾರದು, ಪರಿಹಾರಕ್ಕಾಗಿ ಪರ್ಯಾಯ ಕ್ರಮವನ್ನೂ ಕೈಗೊಳ್ಳುತ್ತೇನೆ. ಸರಕಾರದ ಯಥಾಸ್ಥಿತಿಯ ಆದೇಶ ಇರುವಾಗ ಇದಕ್ಕಿಂತ ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ ಎಂದರು.
ಜಿ.ಎ.ಬಾವಾರ ನೇತೃತ್ವದ ಮುಸ್ಲಿಂ ಮುಖಂಡರೊಂದಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಶಾಸಕರು, ಎಲ್ಲಾ ಸಾಧ್ಯತೆಗಳನ್ನು ಮತ್ತು ಸಹಮತವನ್ನು ದಾಟಿ ವಿಷಯ ಗಂಭೀರತೆ ಪಡೆದಿದೆ ಎಂದರು ವಿದ್ಯಾರ್ಥಿನಿಯರು ಯಾವುದೇ ಕಾರಣಕ್ಕು ಸ್ಕಾರ್ಪ್ ತೆಗೆದು ಕಾಲೇಜು ಪ್ರವೇಶಿಸಲು ಕೇಳುತ್ತಿಲ್ಲ. ಹಾಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ನಾವು ಪರ್ಯಾಯ ಕ್ರಮ ಮಾಡಲೇ ಬೇಕಿದೆ. ಅವರ ಹಕ್ಕು ಮತ್ತು ಧಾರ್ಮಿಕ ವಿಷಯದ ಕುರಿತು ಚರ್ಚಿಸುವ ವೇದಿಕೆ ಇದಲ್ಲ. ಅದಕ್ಕೆ ಅದರದೇ ಆದ ಕ್ರಮಗಳಿದೆ. ಮುಂದಿನ ನಡೆಯು ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ. ನಿಮ್ಮ ಸ್ಪಂದನೆ ಖುಷಿ ನೀಡಿದೆ ಎಂದು ಹೇಳಿ ಮುಸ್ಲಿಂ ಮುಖಂಡರು ಅಲ್ಲಿಂದ ನಿರ್ಗಮಿಸಿದರು.
ಇಂದು, ಶಾಸಕರು ಮಾದ್ಯಮದಲ್ಲಿ ನಿನ್ನೆಯ ಸಮಲೋಚನೆಯ ಕುರಿತಂತೆ ಹೇಳಿಕೆ ನೀಡಿದ್ದು, ಅವರ ಅಭಿಪ್ರಾಯವನ್ನು ಕೇಳಿದ ನಂತರ ವಿದ್ಯಾರ್ಥಿನಿಯರು ನಾಳೆ ಯಾವ ತೀರ್ಮಾನ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಬಾವಾರವರು ಹಲವು ಸಂಘಟನೆಯ ನಾಯಕರೊಂದಿಗೆ ಮಾತನಾಡಿದ್ದು, ಯಾವುದೇ ಪ್ರಕರಣ ಅಥವಾ ಘಟನೆಯ ಬಗ್ಗೆ ತಕ್ಷಣ ರಿಯಾಕ್ಟ್ ಮಾಡದೇ ಜಾಗೃತೆಯಿಂದ ಹೆಜ್ಜೆ ಇಡಬೇಕು. ಎಲ್ಲವೂ ಮಾತುಕತೆಯಿಂದ ಇತ್ಯರ್ಥ ಆಗುವಂತದ್ದು, ಅದಕ್ಕೆ ರೀತಿಗಳಿದೆ. ಸಮಾಲೋಚನೆ, ಸಂಧಾನ ಕೊನೆಯಲ್ಲಿ ಸಂವಿಧಾನ ನೀಡಿದ ಅವಕಾಶ ನಮ್ಮ ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ರಕ್ಷಿಸಲು ಸಾಕು ಎಂದು ಭರವಸೆ ನೀಡಿದರು.
✍🏻 ಸುನ್ನೀಟುಡೇ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.