ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕದಲ್ಲಿ ಜೈನಧರ್ಮ ಫೇಸ್ಬುಕ್ ಬಳಗದ ವತಿಯಿಂದ ಶುಕ್ರವಾರ ಜೈನಧರ್ಮದ 23ನೇ ತೀರ್ಥಂಕರರಾದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಜನ್ಮ ಕಲ್ಯಾಣೋತ್ಸವದ ಅಂಗವಾಗಿ ಅನ್ ಲೈನ್ ಮೂಲಕ ಧಾರ್ಮಿಕ ಸಭೆ ಹಾಗೂ ಜಿನ ಭಜನೆ ಕಾರ್ಯಕ್ರಮ ನಡೆಸಲಾಯಿತು.
ಮೂಡುಬಿದಿರೆ ಜೈನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ.ಪ್ರಭಾತ್ ಬಲ್ನಾಡು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ನಡೆದ ಜಿನ ಭಜನಾ ಕಾರ್ಯಕ್ರಮ ದಲ್ಲಿ ಪದ್ಮಪ್ರಿಯಾ ಕೇಳ ಮೂಡುಬಿದಿರೆ, ವಸಂತ್ ಕುಮಾರ್ ಬಂಗ ಕಾರ್ಕಳ, ಮಹಾವೀರ ಪ್ರಸಾದ್ ಹೊರನಾಡು, ಸೌಮ್ಯ ಎಸ್. ಜೈನ್ ಬಲಿಗೆ, ಶ್ರೀಮನ್ಮ ಬಲ್ಲಾಳ್ ಪದ್ಮುಂಜ, ಸುಶ್ಮಿತಾ ಡಿ.ಜೈನ್ ಹೊರನಾಡು, ನಿತ್ಯ ಡಿ.ಜೈನ್ ಹೊರನಾಡು, ಚಿಂತನಾ ಡಿ. ಜೈನ್ ಹೊರನಾಡು ಇಂದುಮತಿ ಡಿ.ಜೈನ್ ಹೊರನಾಡು, ಜ್ಯೋತಿ ಡಿ.ಜೈನ್ ಹೊರನಾಡು, ಶ್ರೀಯಾಳ ಡಿ.ಜೈನ್ ಹೊರನಾಡು ಭಾಗವಹಿಸಿದ್ದರು.
ನಿರಂಜನ್ ಜೈನ್ ಕುದ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಮಾಳ ಹರ್ಷೇಂದ್ರ ಜೈನ್ ಬೆಂಗಳೂರು, ಜಿತ್ತಾ ಜಿನೇಂದ್ರ ಬೆಂಗಳೂರು, ವಜ್ರ ಕುಮಾರ್ ಬೆಂಗಳೂರು, ಸ್ಪೂರ್ತಿ ಜೈನ್ ಕುಣಿಗಲ್, ಅಕ್ಷಯ್ ಜೈನ್ ಕೆರ್ವಶೆ, ಅರ್ಚಿತ್ ಎ. ಜೈನ್ ಸಂಸೆ, ಸುದೇಶ್ ಜೈನ್ ಮಕ್ಕಿಮನೆ, ಶ್ವೇತಾ ಎಸ್.ಜೈನ್ ವೇಣೂರು, ಚಂದನ ವಿ.ಜೈನ್ ಬೆಂಗಳೂರು ಮೊದಲಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.