ಕೊಡ್ಲಿಪೇಟೆ(www.vknews.in): ವಿಜ್ಞಾನ, ವಿನಯ, ಸೇವೆ ಎಂಬ ಧ್ಯೇಯ ವಾಕ್ಯದಡಿ ಪ್ರಶ್ನಾತೀತ ಚಟುವಟಿಕೆಗಳೊಂದಿಗೆ, ರಾಜಿಯಾಗದ ಸ್ವಾಭಿಮಾನದೊಂದಿಗೆ ಮೂರು ದಶಕಗಳ ಹಾದಿ ಕ್ರಮಿಸಿ ಮುಂದೆ ಸಾಗುತ್ತಿರುವ SKSSF ವಿದ್ಯಾರ್ಥಿ ಸಂಘಟನೆಯ ಸ್ಥಾಪನಾ ದಿನದ ಅಂಗವಾಗಿ ಕೊಡ್ಲಿಪೇಟೆ ಶಾಖಾ ಕಛೇರಿಯ ಮುಂಭಾಗ ಧ್ವಜಾರೋಹಣ ನಡೆಸಲಾಯಿತು.
ಸರಳ ಧ್ವಜಾರೋಹಣ ಕಾರ್ಯಕ್ರಮವನ್ನು SKSSF ಕೊಡ್ಲಿಪೇಟೆ ಶಾಖಾಧ್ಯಕ್ಷರಾದ ಬಾಸಿತ್ ಹಾಜಿ ಹಾಗೂ GCC ಸೌದಿ ಅರೇಬಿಯಾ ಚಾಪ್ಟರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಶರೀಫ್ ಕೊಡ್ಲಿಪೇಟೆ ಜಂಟಿಯಾಗಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ತಫ್ಸೀರ್, ವಿಖಾಯ ಕಾರ್ಯದರ್ಶಿ ಅಬ್ದುಲ್ ರವೂಫ್ ಹಾಗೂ ಶಾಖೆಯ ಇತರ ಸದಸ್ಯರು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.