ಮಂಚಿ(ವಿಶ್ವಕನ್ನಡಿಗ ನ್ಯೂಸ್):ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ ಫಾರಂ ಮಂಚಿ ಹಾಗೂ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಮಂಚಿ ನೂಜಿಬೈಲು ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾ.13 ರಂದು ನಡೆಸಲಾಯಿತು.ಈ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಸುಮಾರು 76 ಯೂನಿಟ್ ರಕ್ತ ಸಂಗ್ರಹವಾಗಿದೆ.
ಇದೇ ಸಂದರ್ಭದಲ್ಲಿ ಮಂಚಿ ಗ್ರಾಮ ಪಂಚಾಯ್ತಿಯ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಪುಷ್ಪಲತಾ ಹಾಗೂ ಕೊಳ್ನಾಡು ಗ್ರಾಮ ಪಂಚಾಯಿತಿ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಗೀತಾ ಕೇಶವ್ ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಮಂಚಿ ಇದರ ಅಧ್ಯಕ್ಷರಾದ ಬಶೀರ್ MK ವಹಿಸಿಕೊಂಡಿದ್ದರು.ಉದ್ಘಾಟನೆಯನ್ನು ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಂಚಿ ಇದರ ಸಂಚಾಲಕರಾದ ಶ್ರೀ ನಾರಾಯಣ ಭಟ್ ನೂಜಿಬೈಲು ನೆರವೇರಿಸಿದರು.PFI ಕಲ್ಲಡ್ಕ ಡಿವಿಷನ್ ಅಧ್ಯಕ್ಷರಾ ಸಿದ್ದೀಕ್ ಕಲ್ಲಡ್ಕ ದಿಕ್ಸೂಚಿ ಭಾಷಣಗೈದರು.ನಿತ್ಯಾಧರ್ ಸಾಲೆತ್ತೂರು ಇದರ ಧರ್ಮಗುರುಗಳಾದ ಹೆಂಡ್ರಿ ಡಿಸೋಜಾ SFX ,ಮೆಲ್ಕಾರ್ ಮಹಿಳಾ ಪದವಿ ಕಾಲೇಜು-ಮಾರ್ನಬೈಲು ಸಹ ಉಪನ್ಯಾಸಕರಾದ MD ಮಂಚಿ ,SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಅಶ್ರಫ್ ಮಂಚಿ,APCR ದ.ಕ. ಜಿಲ್ಲೆ ಪ್ರಧಾನ ಕಾರ್ಯದರ್ಶಿ ಅರಫಾ ಮಂಚಿ , ಕಾಂಗ್ರೆಸ್ ಕೊಲ್ನಾಡು ಗ್ರಾಮ ಸಮಿತಿ ಅಧ್ಯಕ್ಷರಾದ ಖಾದರ್ ಮೂಸ ಹಾಗೂ ಶಮೀಮಾ ಮರಿಯಂ ಹಳೆಯಂಗಡಿ ಕೌನ್ಸಿಲ್ ಮೆಂಬರ್ ನ್ಯಾಷನಲ್ ವಿಮೆನ್ಸ್ ಫ್ರಂಟ್ ಹಳೆಯಂಗಡಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.
ರಾಜೇಶ್ ಕೊಟ್ಟಾರಿ, ಮಹಮ್ಮದ್ ಕೋಕಲ, MA ಹನೀಫ್ ,ಫೈಝಲ್ ಮಂಚಿ ಅಬೂಬಕ್ಕರ್ ನಿರ್ಬೈಲು ,ಕೊಲ್ನಾಡು ಗ್ರಾಮ ಪಂಚಾಯತಿನ ಸದಸ್ಯರಾದ ಮಹಮ್ಮದ್ ಮಂಚಿ ಹಾಗು ಸ್ಥಳೀಯ ಸಂಘ ಸಂಸ್ಥೆಗಳ ನಾಯಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು D N ಫಾರೂಕ್ ಮಂಚಿ ನೆರವೇರಿಸಿದರು, ಇಕ್ಬಾಲ್ ಮಂಚಿ ನಿರೂಪಿಸಿ ಹಾಗೂ ಧನ್ಯವಾದವನ್ನು ಸಲ್ಲಿಸಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.