ಶಿರಿಯ (www.vknews.in) : ಸಮಸ್ತ ಕೇಂದ್ರ ಮುಶಾವರ ಉಪಾಧ್ಯಕ್ಷರೂ, ಖಾಝಿಯೂ, ಹಲವಾರು ವಿದ್ವಾಂಸರ ಗುರುವೂ, ಸೂಫಿವರ್ಯರೂ ಆದ ಅಲಿ ಕುಂಞಿ ಉಸ್ತಾದ್ ಮಖಾಂ ಉರೂಸ್ ಇಂದು ಪ್ರಾರಂಭಗೊಳ್ಳಲಿದೆ.
ಸಂಜೆ 3 ಗಂಟೆಗೆ ಒಳಯಂ, ಮುಟ್ಟಂ, ಶಿರಿಯ, ತಾಜುಶ್ಶರೀಅ ಮಖಾಮುಗಳ ಝಿಯಾರತಿಗೆ ಸಯ್ಯಿದ್ ಅಬ್ದುಸ್ಸಲಾಂ ಅಮಾನಿ ಆದೂರು, ಸಯ್ಯಿದ್ ನುಅಮಾನ್ ಅಸ್ಸಖಾಫಿ, ಸಯ್ಯಿದ್ ಶರಫುದ್ದೀನ್ ಅಹ್ಸನಿ, ಸಾದಾತ್ ತಂಙಳ್ ಗುರುವಾಯನಕೆರೆ ನೇತೃತ್ವ ನೀಡುವರು.
ಸಯ್ಯಿದ್ ಕೆಎಸ್ ಆಟ್ಟಕ್ಕೋಯ ತಂಙಳ್ ಕುಂಬೋಳ್ ಧ್ವಜಾರೋಹಣ ನಡೆಸುವರು. ಉದ್ಘಾಟನಾ ಸಮ್ಮೇಳನವನ್ನು ಸಯ್ಯಿದ್ ಕುಂಬೋಳ್ ಕೆ.ಎಸ್ ಅಲಿ ತಂಙಳ್ರವರ ಅಧ್ಯಕ್ಷತೆಯಲ್ಲಿ ಕೆ ಆಲಿಕುಟ್ಟಿ ಮುಸ್ಲಿಯಾರ್ ಉದ್ಘಾಟಿಸುವರು. ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ ಮಳ್ಹರ್ ಪ್ರಾರ್ಥನೆಗೆ ನೇತೃತ್ವ ನೀಡುವರು.
ಸಯ್ಯಿದ್ ಅಶ್ರಫ್ ತಂಙಳ್ ಆದೂರು, ಕಾಟ್ಟಿಪ್ಪಾರ ಅಬ್ದುಲ್ ಖಾದಿರ್ ಸಖಾಫಿ, ಸಿ ಎನ್ ಜಾಫರ್, ಅಬ್ದುಲ್ ಸತ್ತಾರ್ ಮದನಿ, ಕಲಂದರ್ ಸಖಾಫಿ, ಶಾಫಿ ಸಅದಿ, ರಾಜ್ ಮೋಹನ್ ಉಣ್ಣಿತ್ತಾನ್ ಎಂಪಿ, ಎ ಕೆ ಎಂ ಅಶ್ರಫ್ ಎಂ ಎಲ್ ಎ, ಸಿ ಎಚ್ ಕುಂಞಂಬು ಎಂ ಎಲ್ ಎ, ಸಾಯಿರಾಂ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಅಬ್ಬಾಸ್ ಓಣಂದ, ಇಬ್ರಾಹಿಂ ಮಹ್ಮೂದ್ ಪುದಿಯಂಙಾಡಿ ಉಪಸ್ಥಿತರಿರುವರು.
ಪಾತೂರು ಮುಹಮ್ಮದ್ ಸಖಾಫಿ ಸ್ವಾಗತಿಸುವರು. ರಾತ್ರಿ ಏಳಕ್ಕೆ ಡಾ.ಮುಹಮ್ಮದ್ ಫಾರೂಕ್ ನಈಮಿ ಕೊಲ್ಲಂ, ಹಂಝ ಮಿಸ್ಬಾಹಿ ಓಟಪ್ಪಡವು ಪ್ರಭಾಷಣೆ ನಡೆಸುವರು. ರಾತ್ರಿ ಒಂಬತ್ತು ಗಂಟೆಗೆ ನಡೆಯುವ ಬುರ್ದಾ ಮಜ್ಲಿಸಿಗೆ ಸಯ್ಯಿದ್ ತ್ವಾಹ ತಂಙಳ್ ಪೂಕೋಟೂರು, ಸಯ್ಯಿದ್ ಅಝ್ಹರ್ ತಂಙಳ್, ಅಬ್ದುಸ್ಸಮದ್ ಅಮಾನಿ ಪಟ್ಟುವಂ, ಹಾಫಿಝ್ ಸ್ವಾದಿಕಲಿ ಫಾಳಿಲಿ ಗೂಡಲ್ಲೂರು, ಅಬ್ದುಶುಕೂರ್ ಇರ್ಫಾನಿ, ಅಫ್ಸಲ್ ಕಣ್ಣೂರ್ ಭಾಗವಹಿಸುವರು. ಸಯ್ಯಿದ್ ಸುಹೈಲ್ ಅಸ್ಸಖಾಫ್ ಮಡಕ್ಕರ ಸಮಾರೋಪ ಸಾಮೂಹಿಕ ದುಆಕ್ಕೆ ನೇತೃತ್ವ ನೀಡುವರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.