(ವಿಶ್ವ ಕನ್ನಡಿಗ ನ್ಯೂಸ್):
ಭೀಮ ಧ್ವನಿ
ಒಂದೇ ಒಂದು ಶತಮಾನದ ಕಿಡಿ ಈ ಸೃಷ್ಟಿಯನ್ನೇ ಆವರಿಸಿದೆ. ಅದು ಜಗದಗಲ ಮುಗಿಲಗಲ ನೊಂದುಬೆಂದವರ ಮನದಗಲ!
ಅದು ಒಂದೇ ಒಂದು ಕಿಡಿ ಶೋಷಿತರ ಧಮನಿ ಧಮನಿಗಳಲ್ಲಿ ಜೀವ ಚೈತನ್ಯದ ಮರುಜೀವಣೆಯಾಗಿ ಆವರಿಸಿ; ಜೀವದುಸಿರಿಗೆ ಅಂತಃಕರಣವಾಗಿ, ಜನಿವಾರಗಳ ಜೀವದಾಹಕ್ಕೆ ಬರಸಿಡಿಲಾಗಿ ಬಡಿದು ವಜ್ರಶಂಖ ಧ್ವನಿಯಾಗಿ ನಿಂತದ್ದು!
ಒಂದೇ ಒಂದು ಕಿಡಿ ಸಮಾನತೆಯ ಮಿಂಚಾಗಿದ್ದು, ಭಾಷೆಯ ಭವಿಷತ್ತಿಗೆ ಮುನ್ನುಡಿಯಾಗಿದ್ದು, ಬಡವನ ಬೆವರಿಗೆ ಜೀವತುಂಬಿದ್ದು, ಪ್ರತಿ ಹೆಣ್ಣಿನ ಬಾಳಿಗೆ ಸಂಜೀವಿನಿಯಾಗಿದ್ದು, ಭವಿಷತ್ತಿನ ಭೀಮಧ್ವನಿಯಾಗಿ ಅಖಂಡ ಭೂಮಂಡಲವನ್ನು ಆವರಿಸಿದ್ದು!
ಅದು ಒಂದೇ ಒಂದು ಕಿಡಿ ಬಿಸಿ ನೆತ್ತರಿಗೆ ಕೆಂಪು ಬಣ್ಣವಾಗಿದ್ದು, ಅಶೋಕನ ಚಕ್ರಕ್ಕೆ ಶಕ್ತಿ ತುಂಬಿದ್ದು, ಜ್ಞಾನ ಜ್ಯೋತಿಯಾಗಿ ನಿರಂತರ ಬೆಳಗುತ್ತಿರುವ ಸೂರ್ಯಕಿಡಿಯಾದದ್ದು;
ಒಂದೇ ಒಂದು ಕಿಡಿ ಪ್ರಚಂಡ ಮಾರುತವಾಗಿ ಬೀಸಿ ಜಗದ ಕತ್ತಲನ್ನು ಕಳೆಚಿದ್ದು; ಕಾರಿರುಳು ಕಾರುವ ಕಂಬನಿಗೆ ಅಂಬೇಡ್ಕರ್ ರೂಪವಾಗಿ ಬಂದು ನರನಾಡಿಗಳಿಗೆ ಶಕ್ತಿ ತುಂಬಿದ್ದು.
✍️ ಡಾ.ನಾ.ಮುನಿರಾಜು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.