(www.vknews.in) ;
ನಿಲ್ದಾಣ ಬಂದಾಗ ನಾನಿಳಿದು ನನ್ನ ದಾರಿ ಹಿಡಿದೆ ಚಪ್ಪಲಿ ಸವೆದಾಗ ಹಿಂದಿರುಗಿ ನೋಡಿದೆ ಬಲು ದೂರ ಬಂದಿದ್ದೆ ಈ ನಡೆಗೆ ದಿಕ್ಕು ಇದೆಯೇ? ಇನ್ನು ತಿಳಿದಿಲ್ಲ ಮನವೆ
ನುಡಿಯಲ್ಲೂ ಅಷ್ಟೆ ನನ್ನ ಸರದಿ ಬಂದಾಗ ಎದ್ದು ನಿಂತು ನುಡಿಯಲಾರಂಭಿಸಿದಾಗ ಆರಂಭಕ್ಕೂ, ಅಂತ್ಯಕ್ಕೂ ಸಂಬಂಧವೇ ಇಲ್ಲ ಆದರೂ ನನ್ನೊಳಗೊಂದು ಅಭಿಮಾನ, ಸ್ವಾಭಿಮಾನ ನಡೆ-ನುಡಿ ನೇರವಾಗಿಯೇ ಇದೆ ಮೂಕಾಭಿಮಾನಕ್ಕೆ ನಾಂದಿ ಹಾಡಬೇಕಿದೆ
ನಡೆದರೆ, ನುಡಿದರೆ ದೇವರೇ ಮೆಚ್ಚಬೇಕು ಬಸವಣ್ಣನ ನುಡಿ ಮನದಲ್ಲಿ ಅಚ್ಚಳಿಯದೆ ಉಳಿದಿದೆ
ಇಲ್ಲಿನ ದಾರಿಹೋಕ ನಾನು ನಡೆಯಲೇ ಬೇಕು ನುಡಿಯಲೇ ಬೇಕು ಇಲ್ಲಿ ನಡೆದಷ್ಟು-ನುಡಿದೆಷ್ಟು ಪ್ರಯೋಜನವೆಷ್ಟು? ನನ್ನ ನಡೆ-ನುಡಿಗಳೆಲ್ಲವೂ ಅನಾವರಣ ಮಾಡುತ್ತಿವೆ ನನ್ನ ವ್ಯಕ್ತಿತ್ವವನ್ನು ನಾನು ವಿರಮಿಸುವೆ ನನ್ನ ನಡೆ-ನುಡಿಗೆ ನಾಂದಿ ಹಾಡಿ ಅಲ್ಲ ವಿದಾಯ ಹೇಳಿ ಮತ್ತೆ ನೇರ ನಡೆ ನುಡಿಯ ದಾರಿ ಹಿಡಿಯಲು…
– ಆಮಿರ್ ಬನ್ನೂರು ರಾಜ್ಯ ಸಂಚಾಲಕರು ಖಿದ್ಮಾ ಫೌಂಡೇಶನ್ ಕರ್ನಾಟಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.