ಕೋಲಾರ ( ವಿಶ್ವಕನ್ನಡಿಗ ನ್ಯೂಸ್ ): ಇತ್ತೀಚಿನ ದಿನಗಳಲ್ಲಿ ಟಿ.ಡಿ.ಎಸ್. ಅನ್ನು ಸರಿಯಾದ ಸಮಯಕ್ಕೆ ಪಾವತಿಸದೆ ಸಮಯ ಮೀರಿದ ನಂತರ ದಂಡದ ಮೂಲಕ ಈ ಮೂಲದಲ್ಲಿ ತೆರಿಗೆ ಮುರುಗಡೆಯನ್ನು ಪಾವತಿಸುತ್ತಿದ್ದಾರೆ . ಮೂಲದಲ್ಲಿ ತೆರಿಗೆ ಮುರುಗಡೆಯನ್ನು ಸರಿಯಾದ ಸಮಯಕ್ಕೆ ಪಾವತಿಸಲು ಈ ಕಾರ್ಯಾಗಾರದ ಮಾಹಿತಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಜಂಟಿ ಆಯುಕ್ತರಾದ ಎಸ್.ಪ್ರತಾಪ್ ಕುಮಾರ್ ಅವರು ತಿಳಿಸಿದರು.
ಇಂದು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ವಾಣಿಜ್ಯ ತೆರಿಗೆ ಇಲಾಖೆ , ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ -180 , ಕೋಲಾರ ವತಿಯಿಂದ ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ಮೂಲದಲ್ಲಿ ತೆರಿಗೆ ಮುರುಗಡೆ ( ಟಿ.ಡಿ.ಎಸ್ ) ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಇಲಾಖೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ನಿಮ್ಮ ತೆರಿಗೆಯನ್ನು ಪಾವತಿ ಮಾಡಿ ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸ್ಥಾಪಿತ ಸಂಸ್ಥೆಗಳು ಇದರ ಅಧೀನದಲ್ಲಿ ಬರುತ್ತದೆ. ಟಿ.ಡಿ.ಎಸ್ ಎಂದರೆ ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸುವುದು ಎಂದರ್ಥ . 2.5 ಲಕ್ಷ ಆದಾಯ ಮೀರಿದರೆ ಅಂತವರು ಕಾಯ್ದೆ 51 ರಡಿ ಕಟ್ಟಬೇಕು . ಟಿ.ಡಿ.ಎಸ್ ದರ ಕೇಂದ್ರ ತೆರಿಗೆ 1 % , ರಾಜ್ಯ ತೆರಿಗೆ 1 % ತೆರಿಗೆಯನ್ನು ಪಾವತಿ ಮಾಡಬೇಕು .
2017 ರಲ್ಲಿ ಜಿ.ಎಸ್.ಟಿ ಕಾಯ್ದೆ ಜಾರಿಗೆ ಬಂದ ನಂತರ ಮೌಲ್ಯವರ್ಧಿತ ತೆರಿಗೆಯನ್ನು ವಿಲೀನಗೊಳಿಸಿ ಒಂದು ದೇಶ ಒಂದು ತೆರಿಗೆ ಎಂದು ಜಿ.ಎಸ್.ಟಿ ದೇಶಾದ್ಯಂತ ಜಾರಿಗೆ ಬಂತು ಎಂದು ಅವರು ತಿಳಿಸಿದರು . ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ವಸಂತ್ ಕುಮಾರ್ ಅವರು ಮಾತನಾಡಿ ಈ ಕಾರ್ಯಾಗಾರ ಬಹಳ ವಿಶಿಷ್ಟವಾದ ಎಲ್ಲಾ ಇಲಾಖೆಗಳಿಗೆ ಉಪಯುಕ್ತವಾದ ಕಾರ್ಯಕ್ರಮವಾಗಿದೆ . 2017 ರ ತೆರಿಗೆಯಲ್ಲಿ ಆದ ಬದಲಾವಣೆ ಜಿ.ಎಸ್.ಟಿ ಕರ್ನಾಟಕ ಸರ್ಕಾರದ ಆದೇಶದಡಿ 2018 , ಅಕ್ಟೋಬರ್ 2 ರಿಂದ ಜಿ.ಎಸ್.ಟಿ ಯನ್ನು ಜಾರಿಗೆ ತಂದಿದ್ದು , ಎಲ್ಲರೂ ಇದರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು .
ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾದ ಎಂ.ವಿ.ಶ್ರೀಧರ್ ಅವರು ಮೂಲದಲ್ಲಿ ತೆರಿಗೆ ಮುರುಗಡೆ ( ಟಿ.ಡಿ.ಎಸ್ ) ಬಗ್ಗೆ ಸವಿಸ್ತಾರವಾದ ಪಿ.ಪಿ.ಟಿಯ ಬಗ್ಗೆ ಉಪನ್ಯಾಸ ನೀಡಿದರು . ಕಾರ್ಯಾಗಾರದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ರಾಜೀವ್ , ಅಮೃತ ಕಿತ್ತೂರು , ಆದಾಯ ತೆರಿಗೆ ಅಧಿಕಾರಿಗಳಾದ ಮಧುಸೂದನ್ , ಕೋಲಾರ ಜಿಲ್ಲಾ ಖಜಾನೆ ಉಪನಿರ್ದೇಶಕರಾದ ವಿ.ವಿಜಯೇಂದ್ರ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ಚಂದ್ರಶೇಖರಾಚಾರ್ , ಬಿ.ಎಂ.ಮಂಜುನಾಥ್ , ಎಂ.ಮಂಜುಳಾ ಮತ್ತು ಕುಮಾರಿ ಮಾಲತಿ ದೇವಿ ಸೇರಿದಂತೆ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು .
ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.