ವಿಶ್ವ ಕನ್ನಡಿಗ ನ್ಯೂಸ್ (ಮಾಲೂರು): ಮಾಲೂರು ತಾಲ್ಲೂಕಿನ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ 2021-2022 ನೇ ಸಾಲಿನಲ್ಲಿ ಪಟ್ಟಣದ ವಿವೇಕಾನಂದ ಶಾಲೆ ಶೇ.99.2 ರಷ್ಟು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ವಿವೇಕಾನಂದ ಶಾಲೆಯಲ್ಲಿ ಒಟ್ಟು 112 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 110 ಜನ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಈ ಬಗ್ಗೆ ಮಾತನಾಡಿದ ವಿವೇಕಾನಂದ ಶಿಕ್ಷಣ ಸಂಸ್ಥೆಯ ಶೈಲೇಶ್ ಕುಮಾರ್ ರವರು “ನಮ್ಮ ಶಿಕ್ಷಣ ಸಂಸ್ಥೆಯ ನೇತ್ರಾವತಿ ಪಾಂಚಲ 620 ಅಂಕಗಳನ್ನು, ಕಮಲ್ ಪಂತ್ 619 ಅಂಕಗಳನ್ನು, ಕೀರ್ತನ ಎಂ.618 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿರುವುದು ನಮಗೆ ಸಂತಸ” ಎಂದಿದ್ದಾರೆ.
ಸ್ನೇಹಿತ್ ರವರು ಮಾತನಾಡಿ “ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಿಕ್ಷಕರು, ಮಕ್ಕಳು, ಹಾಗೂ ಪೋಷಕರ ಸಹಕಾರದಿಂದ ನಿತ್ಯ ನಿರಂತರ ಮಕ್ಕಳ ಶ್ರಮದಿಂದ ಇಂದು ಉತ್ತಮ ಫಲಿತಾಂಶ ಬಂದಿದೆ ಇದಕ್ಕೆ ಸಹಕಾರ ನೀಡಿ ಶ್ರಮಿಸಿದ ಎಲ್ಲಾರಿಗೂ ಅಭಿನಂದನೆ” ಎಂದರು.
ಶಾಲಾ ಆಡಳಿತ ಮಂಡಳಿಯ ಶೈಲೇಶ್ ಕುಮಾರ್, ಸ್ನೇಹಿತ್, ಮುಖ್ಯೋಪಾಧ್ಯಾಯರಾದ ರಹೀಂ, ದೈಹಿಕ ಶಿಕ್ಷಕ ಮಂಜುನಾಥ್, ಎಸ್.ಎಸ್.ಎಲ್.ಸಿ ಪಠ್ಯ ಭೋದನೆ ಮಾಡಿದ್ ಎಲ್ಲಾ ಶಿಕ್ಷಕರು, ಹಾಗೂ ಸಿಬ್ಬಂದಿ ಮಕ್ಕಳ ಉತ್ತಮ ಫಲಿತಾಂಶಕ್ಕೆ ಶುಭ ಹಾರೈಸಿದ್ದಾರೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.