ವಿ.ಕೆ.ನ್ಯೂಸ್ (ಸರ್ಜಾಪುರ): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರ ಹೋಬಳಿಯ ಮುಗಳೂರಿನ ಮಹರ್ಷಿ ವಿದ್ಯಾಲಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರರಷ್ಟು ಫಲಿತಾಂಶ ಪಡೆದು ವಿಶೇಷ ಸಾಧನೆ ಮಾಡುವ ಮೂಲಕ ಕೀರ್ತಿ ತಂದಿದ್ದಾರೆ.
ಮಹರ್ಷಿ ವಿದ್ಯಾಲಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿನಿ ಕುಮಾರಿ ಮದೀಹ ಬೇಗಂ 619 ಅಂಕ ಪಡೆದು ಶಾಲೆಗೆ ಹಾಗೂ ಪೋಷಕರಿಗೆ ಮಹತ್ತರ ಕೀರ್ತಿ ತಂದಿದ್ದಾರೆ. ಕುಮಾರಿ ಅನುಶ್ರೀ 604 , ಹಾಗೂ ಮನೀಶ್.ಪಿ 603 ಅಂಕ ಪಡೆಯುವ ಮೂಲಕ ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಲ್ಲಿ ಲಲಿತ ಜೆ 590, ಲಕ್ಷ್ಮೀ.ವೈ. 551, ರುಚಿತ.ಎ 541, ನಂದಿನಿ.ಕೆ 528, ಅಮೃತ.ಎಸ್ 523, ಚನ್ನಕೇಶವ.ವಿ. 512 , ಪವನ್ ಆರ್ 472, ಹಾಗೂ ತರುಣ್ ಎನ್ 446 ಅಂಕಗಳನ್ನು ಪಡೆದು ಶಾಲೆಗೆ ಹೆಮ್ಮೆಯ ಕೀರ್ತೀ ತಂದಿದ್ದಾರೆ ಇವರಿಗೆ ಶಾಲೆಯ ಆಡಳಿತ ಮಂಡಳಿ ವತಿಯಿಂದ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಮಹರ್ಷಿ ವಿದ್ಯಾಲಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ವಿದ್ಯಾರ್ಥಿಗಳಿಗೆ ಸಹಕಾರಿಯಾದ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಪೋಷಕರು ಹಾಗೂ ಎಲ್ಲಾ ಮಕ್ಕಳಿಗೆ ಹೃದಯಪೂರ್ವಕ ಧನ್ಯವಾದಗಳು ಹೇಳಬಯಸುವೆವು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.