ಚಿಕ್ಕಬಳ್ಳಾಪುರ.(ವಿಶ್ವಕನ್ನಡಿಗ ನ್ಯೂಸ್) : ಕನ್ನಡನಾಡಿನ ಜನಮಾನಸದ ಹೃದಯಗೀತೆ ಆಗಿರುವ ನಾಡಗೀತೆಯನ್ನು ಗೇಲಿಮಾಡಿ ವಿಕೃತಗೊಳಿಸಿ ನಾಡಗೀತೆಗೆ ಅವಮಾನ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಂತೆ ಮಾಡಿರುವ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ವಜಾಗೊಳಿಸಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹಳೇ ಪಠ್ಯ ಪುಸ್ತಕಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾ ಸಮಾನ ಮನಸ್ಕರ ವೇದಿಕೆ ಆಗ್ರಹಿಸಿದೆ.
ನಗರದ ಪತ್ರಕರ್ತರ ಭವನದಲ್ಲಿ ಸುಧ್ಧಿಗಾರರೊಂದಿಗೆ ಮಾತನಾಡಿದ ವೇದಿಕೆಯ ಪದಾಧಿಕಾರಿಗಳು ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಅವರನ್ನು ಅವಹೇಳನ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಷಯವನ್ನು ಹರಡಿಸಿ ವಿಕೃತವನ್ನು ಮೆರೆದಿರುವ ರಾಜ್ಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನು ಸಮಿತಿಯಿಂದ ವಜಾಗೊಳಿಸಿ ವಿದ್ಯಾರ್ಥಿಗಳ ಮನಸ್ಸನ್ನು ಕೆಡಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ಮನವಿ ಮಾಡಿದ್ದಾರೆ.
ಸರ್ವಜನಾಂಗದ ಶಾಂತಿಯ ತೋಟವೆಂದು ಹಾಡಿ ಭಾವೈಕ್ಯತೆಯನ್ನು ಮೂಡಿಸಿ ನಾಡಿನ ಜನತೆಯು ಹೆಮ್ಮೆ ಪಡುವಂತೆ ಮಾಡಿದ ಮೊದಲ ಜ್ಞಾನ ಪೀಠ ಪ್ರಶಸ್ತಿ ಪುರಸ್ಕøತರಾದ ರಾಷ್ಟ್ರಕವಿ ಕುವೆಂಪು ಅವರು ವಿಶ್ವಮಾನವ ಸಂದೇಶವನ್ನು ತಮ್ಮ ಕೃತಿಗಳ ಮೂಲಕ ನಾಡಿನ ಜನತೆಗೆ ಸಾರಿದ ಮಹಾನುಭಾವ ಅದೇರೀತಿ ಜಡ್ಡುಕಟ್ಟಿದ ಮೌಢ್ಯವನ್ನು ತೊರೆದು ವೈಚಾರಿಕ ಚಿಂತನೆಗಳನ್ನು ಜನಮಾನಸದಲ್ಲಿ ತುಂಬಿ ಸುಂದರ ಬದುಕಿಗೆ ನಾಂದಿ ಹಾಡಿದ ಕರ್ನಾಟಕದ ರತ್ನ ಕುವೆಂಪು ಅವರನ್ನು ಅವಹೇಳನ ಮಾಡಿರುವುದು ನಾಡಿಗೆ ಮಾಡಿದ ಅಪಚಾರವಾಗಿ ಎಂದು ವೇದಿಕೆಯ ಪದಾಧಿಕಾರಿಗಳು ಕಿಡಿಕಾರಿದ್ದಾರೆ.
ಲಕ್ಷ್ಮಣ್ ಆಕಾಶೆ ಕಾರ್ಕಳ ಎಂಬ ವ್ಯಕ್ತಿ ರಾಷ್ಟ್ರಕವಿ ಕುವೆಂಪು ಅವರನ್ನು ಅತ್ಯಂತ ಕೆಟ್ಟ ಭಾಷೆ ಬಳಸಿ ನಿಂಧಿಸಿದ್ದಾನೆ ಈತನ ಬರಹಕ್ಕೆ ರೋಹಿತ್ ಚಕ್ರತೀರ್ಥರ ಕುಮ್ಮಕ್ಕು ಇರುವುದು ಲಕ್ಷ್ಮಣ ಆಕಾಶೆ ಬರಹದಲ್ಲಿ ವ್ಯಕ್ತವಾಗಿದೆ ಕುವೆಂಪು ಅವರನ್ನು ಅತ್ಯಂತ ಅಮಾನವೀಯ ಭಾಷೆಯಲ್ಲಿ ನಿಂಧಿಸಲಾಗಿದೆ ಕುವೆಂಪು ಅವರ ಸಾಹಿತ್ಯವನ್ನು ಓದಿಕೊಂಡು ಬೆಳೆದ ನಾಡಿನ ಪ್ರತಿಯೊಬ್ಬರಿಗೂ ಬಹಳ ನೋವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಹಿತ್ ಚಕ್ರತೀರ್ಥ ಮತ್ತು ಲಕ್ಷ್ಮಣ್ ಆಕಾಶೆ ಕಾರ್ಕಳ ಅವರ ಬರಹಗಳು ದುರುದ್ದೇಶದಿಂದ ಕೂಡಿದ್ದು ನಾಡಿನ ಜನತೆಯ ಸಹನೆ ಸೌಹಾರ್ಧತೆಯನ್ನು ಕೆಡಿಸುವಂತಹ ಉದ್ದೇಶದಿಂದಲೇ ಬರೆಯಲಾಗಿದ್ದು ಶಾಂತಿಯಲ್ಲಿರುವ ನಾಡಿನಲ್ಲಿ ಈ ರೀತಿಯ ಸಾಮರಸ್ಯ ಕದಡುವ ಬರಹಗಳು ಹಿಂಸೆಗೆ ಪ್ರಚೋದಿಸುವಂತಾಗಿದ್ದು ರಾಷ್ಟ್ರಕವಿಯನ್ನು ಅವಮಾನಿಸಿರುವ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ಕೂಡಲೇ ಕೈಬಿಡಬೇಕು ಮತ್ತು ಈ ತಿಂಗಳ ಅಂತ್ಯದೊಳಗೆ ರೋಹಿತ್ ಚಕ್ರತೀರ್ಥ ಕ್ಷಮೆಯಾಚಿಸಬೇಕು ಇಲ್ಲದಿದ್ದ ಪಕ್ಷದಲ್ಲಿ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ಸುಧ್ಧಿಗೋಷ್ಟಿಯಲ್ಲಿ ಸಮಾನ ಮನಸ್ಕರ ವೇದಿಕೆಯ ಜಿಲ್ಲಾ ಪದಾಧಿಕಾರಿಗಳಾದ ಯಲುವಹಳ್ಳಿ ರಮೇಶ್, ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ, ಕೆ.ಆರ್. ರೆಡ್ಡಿ, ಕಾಮರೆಡ್ಡಿ ಲಕ್ಷ್ಮಯ್ಯ, ಚಿಕ್ಕಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೊಣ್ಣೇಗೌಡ, ಕ್ರೀಡಾಪಟು ಶ್ರೀನಿವಾಸ್, ಹನುಮಂತಪ್ಪ, ಆನಂದ್, ವೆಂಕಟಾಚಲುವರಾಜ್, ಲಕ್ಷ್ಮಣ್, ಕಲುವಾರ ಶ್ರೀಧರ್, ನಾಗಭೂಷಣ್ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಬಾಕ್ಸ್: ರಾಷ್ಟ್ರಕವಿ ಕುವೆಂಪು ಅವರ ವಿರುದ್ದ ಅವಹೇಳನೆ ಮಾಡಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುವ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಖಂಡನಾ ನಿರ್ಣಯವನ್ನು ತೆಗೆದುಕೊಳ್ಳುತ್ತೇವೆ ಎಂದು ಕಸಾಪ ಚಿಕ್ಕಬಳ್ಳಾಪುರ ಅಧ್ಯಕ್ಷ ಯಲುವಹಳ್ಳಿ ಸೊಣ್ಣೆಗೌಡ ಸ್ಪಷ್ಟಪಡಿಸಿದರು.
ವರದಿ : ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.