“ಕೋಮುವಾದಿ ಬಿಜೆಪಿಗೆ ಅನುಕೂಲವಾಗದಿರಲು ಕಾಂಗ್ರೆಸ್ ಕೂಡಲೇ ತನ್ನ ಮೊದಲ ಅಥವಾ ಎರಡನೇ ಅಭ್ಯರ್ಥಿಯನ್ನು ಕಣದಿಂದ ಹಿಂದಕ್ಕೆ ಸರಿಸಿ, ಜೆಡಿಎಸ್’ಗೆ ಬೆಂಬಲ ನೀಡಬೇಕು” ಎಂದು ಆಗ್ರಹಿಸಿದ Maardani Social Service-Party
(www.vknews.in) : ಕರ್ನಾಟಕದಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನಗತ್ಯವಾಗಿ ಹೆಚ್ಚುವರಿ ಅಭ್ಯರ್ಥಿಯಾಗಿ ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸಿದ್ದು, ಆದರೆ ಅವರು ಗೆಲುವು ಹೊಂದುವುದಕ್ಕೆ ಅಗತ್ಯವಾದ ಶೇಕಡಾ 50ರಷ್ಟು ಶಾಸಕರ ಕೂರತೆ ಎದುರಾಗುತ್ತದೆ. ಮನ್ಸೂರ್ ಖಾನ್ ಅವರನ್ನು ಹರಕೆಯ ಕುರಿಯನ್ನಾಗಿಸಿರುವ ಹಾಗೂ ತನ್ಮೂಲಕ ಕುದುರೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿರುವ ಕಾಂಗ್ರೆಸ್’ನ ಉದ್ದಟತನದ ಹಾಗೂ ಮೂರ್ಖತನದ ನಿಲುವನ್ನು MSS (ಮಾರ್ದನಿ ಸಮಾಜ ಸೇವಾ-ಪಕ್ಷ) ದಕ್ಷಿಣ ಭಾರತ ಘಟಕ ಖಂಡಿಸಿದೆ.
ತನ್ಮೂಲಕ ಪರೋಕ್ಷವಾಗಿ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿರುವ ಕಾಂಗ್ರೆಸ್ & ವಿಪಕ್ಷ ನಾಯಕ ಸಿದ್ದರಾಮಯ್ಯನವರ ಉದ್ದಟತನದ ನಿಲುವು-ಪ್ರತಿಕ್ರಿಯೆಗಳು ಮೂರ್ಖತನದಿಂದ ಕೂಡಿದ್ದು ಎಂದು ಎಮ್ಮೆಸ್ಸೆಸ್ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಮಾರ್ದನಿ ಸಮಾಜ ಸೇವಾ ಪಕ್ಷದ ದಕ್ಷಿಣ ಭಾರತ ಘಟಕದ ಮಹಾಪ್ರಧಾನ ಕಾರ್ಯದರ್ಶಿ Journalist ಎ.ಕೆ. ಉಮರುಲ್ ಫಾರೂಖ್ ಬಿಕ್ಕೋಡು, ಹಾಸನ ಅವರು: “2019ರಲ್ಲಿ CongRSS ಪಕ್ಷದ 15% ಶಾಸಕರು ಬಿಜೆಪಿಗೆ ಮಾರಾಟಗೊಂಡು, ಸಂಘಪರಿವಾರ ನಿಯಂತ್ರಿತ ನೀಚ-ಮತಿಗೆಟ್ಟ ಸರ್ಕಾರ ಅಸ್ತಿತ್ವಗೊಳ್ಳಲು ಕಾರಣರಾಗಿರುವುದರ ನೇರ ಹೊಣೆ ಹೊರಬೇಕಾಗಿರುವುದು ಕಾಂಗ್ರೆಸ್ & ಸಿದ್ದರಾಮಯ್ಯನವರೇ. ಇದೀಗ ಅವರ ಪಕ್ಷವು ಪುನಃ ಕೋಮುವಾದಿ ಪಕ್ಷಕ್ಕೆ ಪರೋಕ್ಷ ಬೆಂಬಲ ನೀಡಿದಂತಾಗಿದೆ. ಅವರಿಗೆ & ಕಾಂಗ್ರೆಸ್’ಗೆ ಬಿಜೆಪಿ ಸೋಲುವುದಕ್ಕಿಂತಲೂ ಹೆಚ್ಚಾಗಿ ಜಾತ್ಯತೀತ ಪಕ್ಷ ಜೆಡಿಎಸ್ ಸೋಲಬೇಕಿದೆ” ಎಂಬಂಥ ಕಾಂಗ್ರೆಸ್’ನ ಸೈದ್ಧಾಂತಿಕ ವಿರೋಧಿ ಹೆಜ್ಜೆಯನ್ನು ಎಮ್ಮೆಸ್ಸೆಸ್ ವಿರೋಧಿಸುತ್ತದೆ.
ರಾಜ್ಯಸಭಾ ಚುನಾವಣೆಯ ಕಾಂಗ್ರೆಸ್’ನ ಮೊದಲ ಅಭ್ಯರ್ಥಿ ಜೈರಾಂ ರಮೇಶ್ ಅವರಿಗೆ ಪ್ರಾಪ್ತವಾಗುವ ಮತಗಳ ತರುವಾಯ ಆ ಪಕ್ಷದಲ್ಲಿ ಉಳಿಯುವ ಹೆಚ್ಚುವರಿ ಮತಗಳು 20ರಿಂದ 22ರಷ್ಟು ಮಾತ್ರವೇ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರಿಗೆ 32 ಜೆಡಿಎಸ್ ಶಾಸಕರ ಬೆಂಬಲವಿದೆ. ಕಾಂಗ್ರೆಸ್ ಪಕ್ಷಕ್ಕೆ ಅವಕಾಶವಾದಿತನದ ಬದಲಾಗಿ ನಿಜವಾದ ಸೈದ್ಧಾಂತಿಕ ಬದ್ದತೆಯಿದ್ದಿದ್ದರೆ, ಖಚಿತ ಸೋಲು ಹೊಂದಲೇಬೇಕಾಗಿರುವ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರಲಿಲ್ಲ. ಅಲ್ಲದೆ, ಜೆಡಿಎಸ್ ಪಕ್ಷವೇ ತನಗೆ ಬೆಂಬಲ ನೀಡಬೇಕೆಂದು ಹಪಹಪಿಸುತ್ತಿರುವ ಕಾಂಗ್ರೆಸ್’ನ ಧೋರಣೆ ಅಸಹ್ಯ ಹುಟ್ಟಿಸುವಂತದ್ದು. ಹೀಗೆ ಯಾರು ಯಾರನ್ನು ಬೆಂಬಲಿಸುವುದು ಸೂಕ್ತವೆಂಬ ಕನಿಷ್ಠ ತಿಳುವಳಿಕೆಯೂ ಕಾಂಗ್ರೆಸ್’ಗೆ ಇಲ್ಲದಿರುವುದು ದುರಂತ. ಈ ದಿಸೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡ ಸಮಯಸಾಧಕತನದ ನಿಲುವು ಪ್ರದರ್ಶಿಸುತ್ತಿರುವ ಅಂಶವು ಹಸ್ತ ಪಕ್ಷದ ಬೌದ್ಧಿಕ ದಿವಾಳಿತನ, ಅಪ್ರಬುದ್ದತೆ ಹಾಗೂ ಅವಕಾಶವಾದಿತನದ ನಿದರ್ಶನವಾಗಿದೆ ಎಂದು ಉಮರ್ ಫಾರೂಖ್ ಬಿಕ್ಕೋಡು ಕಾಂಗ್ರೆಸ್ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನ್ನ ಅಪ್ರಬುದ್ಧ ನಡೆಗಳ ಮೂಲಕ ಶಾಸಕರ ಖರೀದಿಗೆ ಅರ್ಥಾತ್, ಕುದುರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿರುವ ಕಾಂಗ್ರೆಸ್ ಪಕ್ಷದ ಎಡಬಿಡಂಗಿತನದ ನಿಲುವನ್ನು ಮಾರ್ದನಿ ಸಮಾಜ ಸೇವಾ ಪಕ್ಷ (Maardani Social Service-Party) ದಕ್ಷಿಣ ಭಾರತ ಘಟಕವು ಆಕ್ಷೇಪಿಸುತ್ತದೆ. “ಇಬ್ಬರ ಜಗಳ, ಮೂರನೆಯವನಿಗೆ ಲಾಭ” ಎಂಬಂತೆ ಮತಾಂಧ ಪಕ್ಷ ಬಿಜೆಪಿಗೆ ಅನುಕೂಲವಾಗದಿರಲು ಕಾಂಗ್ರೆಸ್ ಕೂಡಲೇ ತನ್ನ ಮೊದಲ ಅಭ್ಯರ್ಥಿ ಜೈರಾಮ್ ರಮೇಶ್ ಅಥವಾ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರನ್ನು ಕಣದಿಂದ ಹಿಂದಕ್ಕೆ ಸರಿಸುವ ಮೂಲಕ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲಿ ಎಂದು ಅವರು MSS ಪಕ್ಷದ ವರಿಷ್ಠ ಮಂಡಳಿ ಪರವಾಗಿ ಸೂಚ್ಯಪಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.