(www.vknews.in) : ಸತ್ಯಕ್ಕೆ ನ್ಯಾಯ ವಿಲ್ಲವೇ?, ಮುಸ್ಲಿಂ ಸಮುದಾಯಕ್ಕೆ ನ್ಯಾಯ ಒದಗಿಸುದರಲ್ಲಿ ನಮ್ಮ ನಾಯಕರು ಸೋತರೆ? ಸಮಾನತೆಯನ್ನು ಸಾರುವ ಮುಸ್ಲಿಂ ಸಮುದಾಯ ಅನ್ಯಾಯವನ್ನು ತಟ್ಟಿ ಕೇಳುವುದರಲ್ಲಿ ಹಿಂದೆ ಹೋಯಿತೇ? ಭಾರತೀಯ ಸಂವಿಧಾನ ಪ್ರಜಾಪ್ರಭುತ್ವದಲ್ಲಿ ಮುಸ್ಲಿಂಮರಿಗೆ ನ್ಯಾಯವಿಲ್ಲವೇ?
ಇದಕ್ಕೆಲ್ಲಾ ಉತ್ತರ ಸಿಗಬೇಕಾಗಿದೆ, ಏಕೆಂದರೆ ಮುಸ್ಲಿಂ ಸಮುದಾಯದಲ್ಲಿ ಹಲವಾರು ಗಣ್ಯ ನಾಯಕರಿದ್ದು ಪ್ರಯೋಜನವಾದರೇನು..? ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೂ ಮುಸ್ಲಿಂ ನಾಯಕರುಗಳು ಧ್ವನಿ ಮೊಳಗಿಸುತ್ತಿಲ್ಲ ಯಾಕೆ..? ಚುನಾವಣೆ ಸಮಯದಲ್ಲಿ ಸಮುದಾಯ, ಸಮುದಾಯ ಅಂತ ಬೊಬ್ಬೆ ಹಾಕಿ ಮತ ಪಡೆದು ಅರ್ಹವಾದ ಸ್ಥಾನದಲ್ಲಿ ಕುಳಿತ ಮೇಲೆ ಯಾಕೆ ಇವರು ಮೌನವಾಗುವುದು..? ನಾಯಕರುಗಳು ಬರೀ ನಮ್ಮನ್ನು ಅವರ ಲಾಭಕ್ಕೋಸ್ಕರ ಉಪಯೋಗಿಸುತ್ತಿರುವುದಾ..! ಅಥವಾ ಅವರಿಗೆ ಮತ ನೀಡಿ ಅವರಿಂದ ನಮಗೇನಾದರೂ ಲಾಭವಿದೆಯಾ..? ದೇಶದಲ್ಲಿ ಮುಸ್ಲಿಮರು ಹೀನಾಯ ಸ್ಥಿತಿಯಲ್ಲಿದ್ದು, ಮುಸ್ಲಿಮರ ಮೇಲೆ ಮಾರಣಾಂತಿಕ ಹಲ್ಲೆ, ಕೊಲೆ ಅತ್ಯಾಚಾರ ನಡೆಯುತ್ತಿದ್ದರೂ ಯಾಕೆ ನ್ಯಾಯ ದೊರಕುತ್ತಿಲ್ಲ…? ಭಾರತ ದೇಶ ಪ್ರಜಾಪ್ರಭುತ್ವ ದೇಶ ಹೌದ..? ಅಥವಾ ಒಂದು ಸಮುದಾಯಕ್ಕೆ ಸೀಮಿತವಾಗಿರುವ ದೇಶನಾ..?
ಮುಸ್ಲಿಂ ಸಮುದಾಯದ ಆಸ್ತಿಯಾದ ಬಾಬರಿ ಮಸೀದಿಯನ್ನು ವಶಪಡಿಸಿಕೊಳ್ಳಲಾಯಿತು.. ಮಂಗಳೂರಿನಲ್ಲಿ ಎರಡು ಸಹೋದರರನ್ನು ಪೋಲಿಸರು ಅನ್ಯಾಯವಾಗಿ ಗುಂಡಕ್ಕಿ ಕೊಂದರು.. ಹರಿಯಾಣದಲ್ಲಿ ಕುರ್ಆನ್ ಕಂಠಪಾಟ ಮಾಡಿದ ಜುನೈದ್ ಖಾನ್ ಎಂಬವರನ್ನು ರೈಲಿನಲ್ಲಿ ಬರ್ಬರವಾಗಿ ಕೊಲೆಮಾಡಲಾಯಿತು. ಜಾರ್ಖಂಡ್ ನಲ್ಲಿ ಮದುವೆಯಾಗಿ ಕೆಲವೇ ತಿಂಗಳುಗಳು ಕಳೆದಿದ್ದು ಪತ್ನಿ ಗರ್ಭಿಣಿಯಾಗಿದ್ದು ಪತಿ ತಬ್ರೇಝ್ ಅನ್ಸಾರಿ ಎಂಬ ಸಹೋದರರನ್ನು ಹೀನಾಯವಾಗಿ ಕೊಲೆ ಮಾಡಲಾಯಿತು. ರಾಜಸ್ಥಾನದಲ್ಲಿ ಫಹ್ಲುಲಾ ಖಾನ್ ಎಂಬವರ ಮನೆಯಲ್ಲಿ ದನದ ಮಾಂಸವಿದೆ ಎಂಬ ಕಾರಣವಿಟ್ಟು ಮನೆಯಲ್ಲಿಯೇ ಹತ್ಯೆ ನಡೆಸಲಾಯಿತು.. ಕಥುವಾ ಎಂಬ ಪ್ರದೇಶದಲ್ಲಿ ಪುಟಾಣಿ ಮಗುವಾದ ಅಸೀಫಾಳ ಮೇಲೆ ನರಹಂತಕರು ಅತ್ಯಾಚಾರವೆಸೆಗಿ ಕೊಲೆ ಮಾಡಲಾಯಿತು.. ಹಾಗೂ ಬಂಟ್ವಾಳ ತಾಲೂಕಿನ ಕಲ್ಪನೆ ಸಮೀಪ ಅಶ್ರಫ್ ಎಂಬ ಸಹೋದರನ್ನು ಬರ್ಬರವಾಗಿ ಹತ್ಯೆಗೆಯ್ಯಲಾಯಿತು.. ಹಾಗೆಯೇ ಬಳ್ಳಾರಿ ಜೈಲಿನಲ್ಲಿ ಮುಸ್ತಫಾ ಕಾವೂರನ್ನೂ ಕೂಡ ಹತ್ಯೆಗೆಯ್ಯಲಾಯಿತು. ಗುಜಾರತ್ ನಲ್ಲಿ ಮುಸ್ಲಿಮರ ಮೇಲೆ ದಬ್ಬಾಳಿಕೆ ಕೊಲೆ ಹಲ್ಲೆ ಹಲವು ರೀತಿಯಲ್ಲಿ ನಡೆಸಲಾಯಿತು… NRC ಯ ವಿರುದ್ಧ ಧ್ವನಿ ಎತ್ತಿದ ಒಂದೇ ಕಾರಣಕ್ಕೆ ಸಫೂರ ಎಂಬ ಗರ್ಭಿಣಿ ಸಹೋದರಿಯನ್ನು ಬಂಧಿಸಲಾಯಿತು.. ಮಂಗಳೂರಿನಲ್ಲಿ ಹನೀಫ್ ಎಂಬ ಸಹೋದರ ಮೇಲೆ ಗೋವು ವಿಷಯದಲ್ಲಿ ಮಾರಣಾಂತಿಕ ಹಲ್ಲೆ ನಡೆಸಲಾಯಿತು. ಅದು ಅಲ್ಲದೇ ಅವರ ಮೇಲೆ ಜಾಮೀನು ರಹಿತ ಕೇಸ್ ದಾಖಲು ಮಾಡಲಾಯಿತು.
ಇಂತಹ ಹಲವು ರೀತಿಯ ಕೃತ್ಯ ಮುಸ್ಲಿಮರ ಮೇಲೆ ನಡೆದರು ಯಾಕೆ ನ್ಯಾಯ ಸಿಗುತ್ತಿಲ್ಲ?. ತನ್ನ ಉಮ್ಮತಿಗಳ ಬಗ್ಗೆ ಚಿಂತಿಸಿ ಕಣ್ಣೀರಿಟ್ಟ ಪ್ರವಾದಿ(ಸ.ಅ)ರ ಸಮುದಾಯವಲ್ಲವೇ ಮುಸ್ಲಿಂ ಸಮುದಾಯ, ಈವಾಗ ಮುಸ್ಲಿಂ ಸಮುದಾಯ ರಸ್ತೆ ಬದಿಯಲ್ಲಿ ಹೊಡೆತ ತಿನ್ನುವ ಸಮುದಾಯವಾಯಿತೇ ಎಂಬ ಪ್ರಶ್ನೇ ಕಾಡಲು ಶುರುವಾಗಿದೆ. ಇಂತಹ ದೌರ್ಜನ್ಯಗಳು ನಡೆಯುತ್ತಿದ್ದರೂ ಮೌನ ಪಾಲಿಸುತ್ತಿರುವ ಮುಸ್ಲಿಂ ನಾಯಕರೇ ನೀವು ಮನದಲ್ಲಿಡಬೇಕಾಗಿದೆ ಪರಲೋಕದಲ್ಲಿ ಅಲ್ಲಾಹನ ಬಳಿ ಇದಕ್ಕೆಲ್ಲ ಉತ್ತರ ನೀಡಬೇಕಾದೀತು. ತನ್ನ ನೆರೆಮನೆಯವನೂ ಯಾವುದೇ ಸಮುದಾಯದವನೇ ಆಗಲಿ ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನ ಸಮುದಾಯಕ್ಕೆ ಸೇರಿದವನಲ್ಲ ಎಂದು ಪ್ರವಾದಿ(ಸ.ಅ) ರು ಹೇಳಿದ್ದಾರೆ. ಹಾಗಿರುವಾಗ ತನ್ನದೇ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ದವಾಗಿ ಧ್ವನಿ ಎತ್ತದ ನಾಯಕರು ಚಿಂತಿಸಲೇಬೇಕಾದ ವಿಷಯವಾಗಿದೆ.
ಸಂಪತ್ತು ಎಲ್ಲಾ ಇದ್ದು ಮುಸ್ಲಿಂ ಸಮುದಾಯದ ಪರ ಧ್ವನಿ ಮೊಳಗಿಸಲು ಒಂದು ಟಿ.ವಿ ಚಾನೆಲ್ ಮಾಡಲು ಅಸಾಧ್ಯವಾಗಿರುವ ನಾಯಕರುಗಳು ನಮ್ಮಲ್ಲಿರುವುದು, ಮತ ಕೇಳುವಾಗ ಕಾಲಿಗೆ ಬೀಳುತ್ತೀರ ಕಣ್ಣಂಚಿನಲ್ಲಿ ಕಣ್ಣೀರು ಬರಲು ಶುರುವಾಗುತ್ತೇ. ಇವಾಗ ಮುಸ್ಲಿಂ ಸಮುದಾಯದ ಮೇಲೆ ದೌರ್ಜನ್ಯವಾಗುತ್ತಿರುವಾಗ ಯಾಕೆ ಕಣ್ಣಂಚಿನಲ್ಲಿ ನೀರು ಬರುತ್ತಿಲ್ಲ ನಿಮಗೆಲ್ಲ? . ಏಕೆ ಈ ಮೌನ? ನಾಟಕೀಯ ಜಗತ್ತಿನಲ್ಲಿ ನಾಟಕೀಯ ನಡವಳಿಕೆಯಾದರೆ ಇಂಷಾ ಅಲ್ಲಾಹ್ ಒಂದು ದಿವಸ ಇದಕ್ಕೆಲ್ಲಾ ಪೂರ್ಣ ವಿರಾಮ ಹಾಕಿ ಅಲ್ಲಾಹನ ನ್ಯಾಯಲಯದಲ್ಲಿ ಉತ್ತರ ನೀಡಬೇಕಾಗಿ ಬರುತ್ತೆ ನೆನಪಿರಲಿ..
– ಅನೀಸ್ ಕುಕ್ಕಾಜೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.