(www.vknews.in) : ಹಿರಿಯರಲ್ಲಿದ್ದ ಸಮುದಾಯ ಕಾಳಜಿ ಮತ್ತು ದೂರದೃಷ್ಠಿಯ ಯೋಜನೆಗಳನ್ನು ನವ ಪೀಳಿಗೆಯಲ್ಲಿ ಉತ್ತೇಜಿಸಲು ಕಮ್ಯೂನಿಟಿ ಸೆಂಟರ್ ಇಬ್ಬರು ಮಹನೀಯರ ಸ್ಮರಣಾರ್ಥ ವಿದ್ಯಾರ್ಥಿ ವೇತನವನ್ನು ನೀಡಲು ಉದ್ದೇಶಿಸಿದೆ. ಉಳ್ಳಾಲದಲ್ಲಿ ದೂರದೃಷ್ಠಿಯ ಸಂಕಲ್ಪ ದೊಂದಿಗೆ ಹಲವಾರು ಶೈಕ್ಷಣಿಕ ಮತ್ತು ಸಮಾಜಿಕ ಕೇಂದ್ರಗಳ ನಿರ್ಮಾಣಕ್ಕೆ ಕಾರಣರಾದ ಮತ್ತು ಸಮರ್ಥ ನೇತೃತ್ವ ನೀಡಿದ್ದ ಉಳ್ಳಾಲ ದರ್ಗಾದ ಮಾಜೀ ಅಧ್ಯಕ್ಷ ‘ಮರ್ಹೂಂ ಯು.ಕೆ. ಇಬ್ರಾಹಿಂ ಹಾಜಿ ಮೆಮೋರಿಯಲ್ ವಿದ್ಯಾರ್ಥಿ ವೇತನ’ ನಿಧಿಯನ್ನು ಉಳ್ಳಾಲ ಸಯ್ಯದ್ ಮದನಿ ದರ್ಗಾದ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಶೀದ್ ಹಾಜಿ ಉಳ್ಳಾಲ ಬಿಡುಗಡೆಗೊಳಿಸಿದರು.
ಪುತ್ತೂರಿನಲ್ಲಿ ಶೈಕ್ಷಣಿಕ ಪ್ರಗತಿಗೆ ತನ್ನ ಉದಾತ್ತ ಕೊಡುಗೆ ನೀಡಿದ, ಕಲಿಯಿರಿ – ಕಲಿಸಿರಿ ಎಂಬ ಘೋಷಣೆಯ ಮೂಲಕ ತಾಲೂಕಿನಲ್ಲಿ ಹಲವಾರು ಯೋಜನೆಗಳಿಗೆ ಅಡಿಪಾಯ ಹಾಕಿರುವ ಮರ್ಹೂಂ ಮಮ್ಮುಂಞ ಹಾಜಿಯವರ ಹೆಸರಿನ ವಿದ್ಯಾರ್ಥಿ ವೇತನದ ಘೋಷಣಾ ಪತ್ರವನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷರಾದ ಜನಾಬ್ ಮುಖ್ತಾರ್ ಪಠಾಣ ಮತ್ತು ಬಿಜೆಪಿ ರಾಷ್ಟ್ರೀಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಜನಾಬ್ ಜಮಾಲ್ ಸಿದ್ದೀಕಿ ಬಿಡುಗಡೆಗೊಳಿಸಿದರು.
ನಮ್ಮ ಹಿರಿಯರಲ್ಲಿ ಸಮುದಾಯ ಏಳಿಗೆ ಮತ್ತು ಸಾಮಾಜಿಕವಾಗಿ ಪ್ರಗತಿಪರ ಕಾಳಜಿಗಳಿತ್ತು. ಸಮಾಜದ ಆಗು- ಹೋಗುಗಳಿಗೆ, ನೋವು- ಸಂಕಷ್ಟಗಳಿಗೆ ಅವರು ಸ್ಪಂದಿಸುತ್ತಿದ್ದರು. ನಾಳೆಯ ಕುರಿತ ಅಭಿವೃದ್ಧಿಯ ಚಿಂತನೆಗಳೂ ಅವರಲ್ಲಿದ್ದವು, ಎಲ್ಲಾ ಕ್ಷೇತ್ರಗಳಲ್ಲೂ ಪೂರಕ ಕೊಡುಗೆಗಳನ್ನು ಅವರು ನೀಡುತ್ತಿದ್ದರು. ಆದರೆ ಇಂದಿನ ಜನರಲ್ಲಿ ಆ ಸಾಮಾಜಿಕ ಪ್ರಜ್ಞೆ ಮತ್ತು ಕಾಳಜಿ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅನುಕೂಲಕರ ವಾತಾವರಣದಲ್ಲಿ ಭೌತಿಕ ಆಯ್ಕೆಗಳಲ್ಲಿ ಅವರು ನಾನು ಮತ್ತು ನನಗೆ ಎಂಬ ಮನಸ್ಥಿತಿಯನ್ನಷ್ಟೇ ಬಹುತೇಕ ರು ಹೊಂದಿರುತ್ತಾರೆ. ಹಿರಿಯರನ್ನು ಸ್ಮರಿಸುವ ಅಥವಾ ಅನುಸರಿಸುವ ಗುಣಗಳೂ ಕಾಣ ಸಿಗುವುದಿಲ್ಲ. ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ತಮ್ಮ ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರ ಹೆಸರೂ ಅವರಿಗೆ ತಿಳಿರುವುದಿಲ್ಲ.
ಕಮ್ಯೂನಿಟಿ ಸೆಂಟರ್ ಸುಮಾರು ಒಂದು ಸಾವಿರಕ್ಕಿಂತ ಹೆಚ್ಚು ಮಕ್ಕಳಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗಡೆ, ಸಾಲು ಮರದ ತಿಮ್ಮಕ್ಕ. ಸಂಶುಲ್ ಉಲಮ ಇಕೆ ಅಬುಬಕ್ಕರ್ ಮುಸ್ಲಿಯಾರ್, ಸುಲ್ತಾನುಲ್ ಉಲೆಮಾ ಎಪಿ ಅಬುಬಕ್ಕರ್ ಮುಸ್ಲಿಯಾರ್ ಮುಂತಾದ ಮಹನೀಯರ ಭಾವಚಿತ್ರ ತೋರಿಸಿ ಇವರ ಬಗ್ಗೆ ಗೊತ್ತಿದೆಯೇ ಎಂದು ಕೇಳಿದಾಗ ಶೇಖಡಾ 1% ವಿದ್ಯಾರ್ಥಿಗಳು ಕೂಡ ಸಮರ್ಪಕ ಉತ್ತರ ನೀಡಲಿಲ್ಲ. ಮನುಷ್ಯ ಬದುಕಿನ ಸಹಜಗುಣವಾಗಿರುವ ಕೃತಜ್ಞತಾ ಭಾವವೇ ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಮರೆಯಾಗ ಭಾರದೆಂಬ ಸಕಾಲಿಕ ಪ್ರಜ್ಞೆ ಯೊಂದಿಗೆ ನಾವು ಬಹಳ ಭವಿಷ್ಯದ ಪೀಳಿಗೆಗೆ ಗ್ರಾಂಥಿಕವಷ್ಟೇ ಅಲ್ಲದ ನೈಜ ಶಿಕ್ಷಣ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಈ ಮಹನೀಯರ ಹೆಸರಿನಲ್ಲಿ ಪುತ್ತೂರು ಕಮ್ಯೂನಿಟಿ ಸೆಂಟರ್ ಈ ವಿದ್ಯಾರ್ಥಿ ವೇತನ ಸೌಲಭ್ಯ ದ ಕೊಡುಗೆಯನ್ನು ಸಮರ್ಪಣೆ ಮಾಡಲು ಮುಂದಡಿ ಇಟ್ಟಿವೆ.
ಕಾರ್ಯಕ್ರಮದಲ್ಲಿ ಉಳ್ಳಾಲ ಸಯ್ಯದ್ ಮದನಿ ದರ್ಗಾದ ಆಡಳಿತ ಸಮಿತಿ ಅಧ್ಯಕ್ಷರಾದ ಜನಾಬ್ ರಶೀದ್ ಹಾಜಿ ಉಳ್ಳಾಲ್ ರವರು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿ ಸುಧಾರಣೆ ತರಲು ಕಮ್ಯೂನಿಟಿ ಸೆಂಟರ್ ಅತ್ಯುತ್ತಮ ಮಾದರಿಯನ್ನು ಸಮಾಜದ ಮುಂದಿಡುತ್ತಿವೆ. ಇದೊಂದು ಇತರರಿಗೂ ಪ್ರೇರಣೆಯಾಗ ಬಲ್ಲ ಪದ್ದತಿಯಾಗಿದೆ. ನಮ್ಮ ಸಮಿತಿ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಸಮಾಜ ಮುಖಿ ಚಟುವಟಿಕೆಗಳಿಗೆ ಆಕರ್ಶಿತರಾಗಿದ್ದೇವೆ. ಈಗಾಗಲೇ 2 ಕೋಟಿಯಷ್ಟು ಹಣವನ್ನು ನಾವು ಉಳ್ಳಾಲ ದರ್ಗಾ ವತಿಯಿಂದ ಶೈಕ್ಷಣಿಕ ವೆಚ್ಛಕ್ಕಾಗಿ ಭರಿಸಿದ್ದೇವೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ವೇತನ ನೀಡುವ ಇರಾದೆಯನ್ನೂ ಹೊಂದಿದ್ದೇವೆ. ಜಿಲ್ಲೆಯ ಸಾಧಕರ ಹೆಸರಿನಲ್ಲಿ ವಿದ್ಯಾರ್ಥಿ ವೇತನ ಕೊಡುವ ನಿರ್ಧಾರವನ್ನಿಟ್ಟು ಕೊಂಡಿದ್ದೇವೆ. ಭವಿಷ್ಯದ ತಲೆಮಾರು ಹಿರಿಯರನ್ನು ಸ್ಮರಿಸುವ ಸುಶಿಕ್ಷಿತ ಸಮಾಜವನ್ನು ಕಾಣುವ ಕಮ್ಯೂನಿಟಿ ಸೆಂಟರ್ ನ ಆಶಯದೊಂದಿಗೆ ನಾವು ಸದಾ ಜೊತೆಗಿರುವೆವು ಎಂದು ಹೇಳಿದರು.
ನಾವು ವೈಜ್ಞಾನಿಕವಾಗಿ ಚಿಂತಿಸುವ ಕಾಲಘಟ್ಟದಲ್ಲಿ ಇದ್ದೇವೆ. ಡಾಕ್ಟರ್, ಇಂಜಿನಿಯರ್ ಹೊರತು ಪಡಿಸಿ ಆಲೋಚಿಸುವ ಸಾಮರ್ಥ್ಯ ನಮ್ಮ ಮಕ್ಕಳಿಗೆ ನೀಡಬೇಕು ಎಂದೂ ತಿಳಿಸಿದ ರಶೀದ್ ಹಾಜಿ ಉಳ್ಳಾಲರವರು, ಕಮ್ಯೂನಿಟಿ ಸೆಂಟರ್ ಬಗ್ಗೆ ರಾಜ್ಯ ಸರಕಾರದ ಇಲಾಖೆಯ ಅಧಿಕಾರಿಗಳೂ ನನ್ನಲ್ಲಿ ಪ್ರಶಂಸೆ ವ್ಯಕ್ತಪಡಿಸಿ ಮಾತಾಡಿದ್ದನ್ನು ಸ್ಮರಿಸಿ ಕೊಂಡರು.
ಜಿಲ್ಲಾ ಕಾಂಗ್ರೆಸ್ಸ್ ನ ವಕ್ತಾರರಾದ ಜನಾಬ್ ಫಾರೂಕ್ ಉಳ್ಳಾಲ್ ಮಾತನಾಡಿ, ಉನ್ನತ ವ್ಯಾಸಾಂಗ ಮಾಡಿ ಅನುಕೂಲತೆಯೊಂದಿಗೆ ತಮ್ಮ ಪಾಡಿಗೆ ಇರುವ ಪೀಳಿಗೆಯನ್ನು ಸಮಾಜ ಮತ್ತು ಸಮುದಾಯ ಕಾಳಜಿಯ ಜೊತೆಗೆ ಮೌಲ್ಯಧಾರಿತ ಬದುಕು ರೂಪಿಸಲು ನಾವು ಉತ್ತೇಜಿಸಬೇಕು. ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿ ಕೊಳ್ಳುವಂತೆ ಪ್ರೇರೇಪಿಸಬೇಕು, ಈ ನಿಟ್ಟಿನಲ್ಲಿ ಕಮ್ಯೂನಿಟಿ ಸೆಂಟರ್ ರಚನಾತ್ಮಕ ಕಾರ್ಯತಂತ್ರಗಳನ್ನು ಅಳವಡಿಸಿದ್ದು ಶ್ಲಾಘನೀಯ ಎಂದರು.
ಮರ್ಹೂಂ ಮಮ್ಮುಂಞ ಹಾಜಿಯವರ ಸ್ಮರಣಾರ್ಥ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಮೈನಾರಿಟಿ ಮೋರ್ಚಾದ ಅಧ್ಯಕ್ಷರಾದ ಜನಾಬ್ ಜಮಾಲ್ ಸಿದ್ದೀಕಿಯವರು ರಾಷ್ಟ್ರದ ಯುವಪೀಳಿಗೆಯನ್ನು ಸೆಂಟರ್ ಸರಿಯಾದ ದಿಕ್ಕಿನಲ್ಲಿ ತರಬೇತುಗೊಳಿಸುತ್ತಿದೆ, ಈ ಯೋಚನೆಯು ದೇಶದಾದ್ಯಂತ ಹರಡಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿ ವೇತನದ ನಿಬಂಧನೆಯ ಪ್ರಕಾರ ಪಿಯುಸಿ ಮತ್ತು ಪಿಯುಸಿ ನಂತರದ ವಿದ್ಯಾರ್ಥಿಗಳು ಈ ಇಬ್ಬರೂ ಮಹನೀಯರಲ್ಲಿ ಒಬ್ಬರ ಕುರಿತು ಪ್ರಬಂಧ ಬರೆಯಬೇಕು. ಇಲ್ಲವೇ ಕೌನ್ಸಿಲಿಂಗ್ ನಲ್ಲಿ ಭಾಗವಹಿಸಿ ಕೌನ್ಸಿಲರ್ ಪರಿಚಯಿಸುವ ಮಹನೀಯರ ಕುರಿತಂತೆ ತಮಗೆ ತಿಳಿದ ಜ್ಞಾನವನ್ನು ಹಂಚಬೇಕು. ಒಟ್ಟು 50 ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಸೆಂಟರ್ ಆಯ್ಕೆ ಮಾಡಲಿದೆ. ಈ ಮೊದಲು ಸೆಂಟರ್ ಎಸ್.ಎಸ್.ಎಲ್.ಸಿ ಯ ವಿದ್ಯಾರ್ಥಿಗಳಿಗೆ ನಡೆಸಿದ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯು ನಮ್ಮ ಸಂಸ್ಥೆಯು ನೀಡಿದ್ದ ಅರ್ಹತಾ ಅಂಕ ಗಳಿಸಿಲ್ಲ. ಹಾಗಾಗಿ ಅವರ ಎಸ್.ಎಸ್.ಎಲ್.ಸಿ ಅಂಕ ಆದರಿಸಿ 28 ವಿದ್ಯಾರ್ಥಿಗಳಿಗೆ ಉಚಿತ ಸೀಟನ್ನು ನೀಡಿದೆ. ಬರಕ ಇಂಟರ್ ನ್ಯಾಶನಲ್ ಸ್ಕೂಲ್, ಕಣಚೂರು ಪಿಯು ಕಾಲೇಜು, ಶಾಹೀನ್ ಪಾಲ್ಕನ್ ಬೆಂಗಳೂರು ಮತ್ತು ಮಂಗಳೂರು. ಅಲೋಶಿಯಸ್, ಫಿಲೋಮಿನ ಕಾಲೇಜು ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ದಾಖಲಾತಿ ನೀಡಿದೆ.
ಮಹನೀಯರನ್ನು ಸ್ಮರಿಸಿರಿ ವಿದ್ಯಾರ್ಥಿ ವೇತನ ಪಡೆಯಿರಿ ಎನ್ನುವ ಈ ಎರಡನೆಯ ಯೋಜನೆಯ ಕೌನ್ಸಿಲಿಂಗ್ ಜೂನ್ 17 ನೇ ತಾರೀಕಿನಿಂದ ಮಂಗಳೂರು, ಪುತ್ತೂರು, ವಿಟ್ಲ ಕಮ್ಯೂನಿಟಿ ಸೆಂಟರ್ ನಲ್ಲಿ ಜೂನ್ 30 ರವರೆಗೆ ನಡೆಯಲಿದೆ. ಈ ಇಬ್ಬರು ಮಹನೀಯರ ಹೆಸರಿನಲ್ಲಿ ಪ್ರಬಂಧ ಬರೆದು ಸೆಂಟರಿಗೆ ತಲುಪಿಸಲು ಜೂನ್ 30 ರವರೆಗೆ ಕಾಲಾವಕಾಶ ನೀಡಲಾಗಿದೆ.
ಯೋಜನೆಯ ಘೋಷಣಾ ಪತ್ರದ ಬಿಡುಗಡೆ ಮಂಗಳೂರಿನ ಕಾರ್ಯಕ್ರಮದಲ್ಲಿ ಉಳ್ಳಾಲ ದರ್ಗಾದ ಉಪಾಧ್ಯಕ್ಷ ರುಗಳಾದ ಯು.ಕೆ.ಮೋನು ಇಸ್ಮಾಯಿಲ್, ಹಾಜಿ ಬಾವ ಮುಹಮ್ಮದ್, ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಎ.ಕೆ.ಮೊಯ್ದಿನ್ ಹಾಜಿ, ಸಮಿತಿ ಸದಸ್ಯರುಗಳಾದ ಹಮ್ಮಬ್ಬ ಕೋಟೆಪುರ, ಇಬ್ರಾಹಿಂಹಾಜಿ, ಅಲಿಮೋನು, ಹಸೈನಾರ್ , ಹಸನಬ್ಬ.
ಬೆಂಗಳೂರಿನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಜೆಪಿ ಮೈನಾರಿಟಿ ಮೋರ್ಚಾದ ಉಪಾದ್ಯಕ್ಷರಾದ ಶ್ರೀ ಅಬ್ದುಲ್ ಸಲಾಂ ಮತ್ತು ಮೇಥ್ಯು, ರಾಜ್ಯ ಉಪಾದ್ಯಕ್ಷರಾದ ನೂರ್ ಬಾಷಾ ಮತ್ತು ಜನಾಬ್ ಫೀರ್ ಝಾದೆ, ಬಿಜೆಪಿ ಮೈನಾರಿಟಿ ಮೋರ್ಚಾ ಮಾಜಿ ರಾಜ್ಯಾಧ್ಯಕ್ಷರಾದ ಪೀರ್ ಹುಸೈನ್, ಕೆ.ಎಂ.ಡಿ.ಸಿ ನಿರ್ಧೇಶಕರಾದ ಸಿರಾಜುದ್ದೀನ್, ಶಿಕ್ಷಣ ತಜ್ಞರಾದ ಮಹಮ್ಮದ್ ಬ್ಯಾರಿ, ಕಮ್ಯೂನಿಟಿ ಸೆಂಟರ್ ನ ಮುನೀರ್ ವಿಟ್ಲ, ಸಂಶುದ್ದೀನ್ ಬೈರಿಕಟ್ಟೆ, ಇಮ್ತಿಜಾಝ್ ಪಾರ್ಲೆ ಮತ್ತು ಹನೀಫ್ ಪುತ್ತೂರು ಉಪಸ್ಥಿತರಿದ್ದರು..
ಈ ಇಬ್ಬರು ಮಹನೀಯ ಹೆಸರಿನಲ್ಲಿ ಪ್ರಬಂಧ ಒಂದು ಪುಟಕ್ಕಿಂತ ಹೆಚ್ಚಿರಬೇಕು. ಖಡ್ಡಾಯವಾಗಿ ಪೇಪರಿನಲ್ಲೇ ಬರೆದು ಪಿಡಿಎಫ್ ಅಥವಾ ಸ್ಕ್ಯಾನ್ ಮಾಡಿ ಕಳುಹಿಸಬೇಕು. ಅಥವಾ ನೇರವಾಗಿ ಸೆಂಟರಿಗೆ ತಲುಪಿಸಬಹುದು. ಇಂಗ್ಲೀಷ್, ಕನ್ನಡ , ಬ್ಯಾರಿ ಭಾಷೆಯಲ್ಲೂ ಬರೆಯಬಹುದು.
ಪಿಡಿಎಫ್ ಅಥವಾ ಸ್ಕ್ಯಾನ್ ಮಾಡಿ ಕಳುಹಿಸುವ ಮೇಲ್ ಐಡಿ [email protected] ಮತ್ತು ವಾಟ್ಸಾಪ್ ನಂ- 7259115313, 8867073888, 9845899107
ನೇರವಾಗಿ ತಲುಪಿಸುವ ವಿಳಾಸ-:
ಪುತ್ತೂರು ಕಮ್ಯೂನಿಟಿ ಸೆಂಟರ್ AM ಶಾಲಿಮಾರ್ ಕಾಂಪ್ಲೆಕ್ಸ್, 2ನೇ ಮಹಡಿ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಮುಂಬಾಗ, ಪುತ್ತೂರು.
ಮಂಗಳೂರು ಕಮ್ಯೂನಿಟಿ ಸೆಂಟರ್ ಇನ್ಸೆಪ್ಟ್ರಾ ಸಿಸ್ಟಂ, 3ನೇ ಮಹಡಿ ಪ್ರೆಸಿಡೆಂನ್ಸಿ ಝೋನ್, ಬೆಂದೂರ್ ವೆಲ್, ಮಂಗಳೂರು
ವಿಟ್ಲ ಕಮ್ಯೂನಿಟಿ ಸೆಂಟರ್ ಹಿರಾ ಟವರ್, 2ನೇ ಮಹಡಿ ಸರ್ವಿಸ್ ಬಸ್ಸ್ ನಿಲ್ದಾಣ, ವಿಟ್ಲ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.