ಕಾಂತಪುರಂ ಎ.ಪಿ ಅಬುಬಕ್ಕರ್ ಮುಸ್ಲಿಯಾರ್ ಅವರು ಮಾತು ನೋಡಿ ಸಂತೋಷವಾಯಿತು..
(ವಿಶ್ವ ಕನ್ನಡಿಗ ನ್ಯೂಸ್) : ಕಾಂತಪುರಂ ಎ.ಪಿ ಅಬುಬಕ್ಕರ್ ಮುಸ್ಲಿಯಾರ್ ಅವರು ಮಾತು ನೋಡಿ, ಯಾರೋ ಒಬ್ಬರು ಮಾಡಿದ ತಪ್ಪಿಗೆ ಹಿಂದೂ ಸಮುದಾಯಕ್ಕೆ ನೋವು ಆಗಬಾರದು, ಅವರ ಉದ್ಯೋಗಕ್ಕೆ ಪೆಟ್ಟು ಬೀಳಬಾರದು, ಈ ಮಾತು ಕೇಳಿದಾಗ ಬಹಳ ಸಂತೋಷವಾಯಿತು.
ಕೇವಲ ಹಿಂದೂ, ಮುಸ್ಲಿಂ ಎಂಬ ಧೋರಣೆ ಸರಿಯಲ್ಲ. ಮುಸ್ಲಿಂ ರಾಷ್ಟ್ರಗಳಿಂದ ನಮ್ಮ ದೇಶಕ್ಕೆ ಪೆಟ್ರೋಲ್ ಬರದ್ದೀದ್ದರೆ ನಾವು ಏನು ಮಾಡಬೇಕು? ಪ್ರವಾದಿ ಮುಹಮ್ಮದ್ (ಸ.ಅ) ಅವರನ್ನು ನಿಂದನೆ ಮಾಡಿದ್ದು ತಪ್ಪು ಮತ್ತು ಮುಸ್ಲಿಂ ಧರ್ಮದವರನ್ನು ಈ ಜಾತ್ಯತೀತ ದೇಶವಾದ ಭಾರತದಲ್ಲಿ ನಿಂದನೆ ಮಾಡುವುದು ಸರಿಯಲ್ಲ. ನಮ್ಮ ಧರ್ಮವನ್ನು ಪೂಜಿಸುವ ಮೂಲಕ ಬೇರೆ ಧರ್ಮವನ್ನು ಗೌರವದಿಂದ ಕಾಣಬೇಕಾಗಿದೆ.
ನಾವು ಶಾಲೆ, ಕಾಲೇಜಿಗಳಿಗೆ ಹೋಗುವಾಗ ನೀನು ಹಿಂದೂ, ನೀನು ಮುಸ್ಲಿಂ ಎಂದು ಯಾರ ಬಾಯಿಯಿಂದ ಬಂದದ್ದು ನಾನು ಕೇಳಲ್ಲಿಲ್ಲ. ಗಲ್ಫ್ ರಾಷ್ಟ್ರಗಳಲ್ಲಿ ನಮ್ಮ ದೇಶದ ಅದೆಷ್ಟೋ ಮಂದಿ ಉದ್ಯೋಗ ಮಾಡಿ ಜೀವನ ಸಾಗಿಸುತ್ತಿದ್ದಾರೆ, ಆ ರಾಷ್ಟದವರು ಏನಾದರೂ ಭಾರತ ದೇಶದವರಿಗೆ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಇಲ್ಲ ಹೇಳಿದರೆ ಏನು ಗತಿ ? ನೋಡಿ ಎಲ್ಲರೂ ಬೇಕು, ಎಲ್ಲರ ರಕ್ತವೂ ಕೆಂಪು ಬಣ್ಣ ಅಲ್ವಾ, ಎಲ್ಲರೂ ಒಂದೇ, ಮನುಷ್ಯ ಜಾತಿ ಒಂದೇ ಅಲ್ವಾ..?
– ಗಂಗಾಧರ್ ಕನ್ಯಾನ ಅವರ ಫೇಸಬುಕ್ ವಾಲ್ ನಿಂದ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.