ಯುವಕರ ಸೇವೆ ಮಾನವೀಯತೆಗೆ ಸಾಕ್ಷಿಯಾಗಿದ್ದು, ಶ್ಲಾಘನೀಯವಾಗಿದೆ..
(ವಿಶ್ವ ಕನ್ನಡಿಗ ನ್ಯೂಸ್) : 75 ವರ್ಷ ಪ್ರಾಯದ ರೋಬರ್ಟ್ ಡಿಸೋಜ ಎಂಬ ಅಪರಿಚಿತ ವ್ಯಕ್ತಿಯು ಕೈರಂಗಳ ಶಾಲಾ ಬಳಿ ತೀವ್ರ ಬಳಲಿಕೆಯಿಂದ ಬೀಳುವ ಸ್ಥಿತಿಯನ್ನು ಕಂಡು ಸ್ಥಳೀಯ ಫ್ಯಾನ್ಸಿ ಮಾಲಕರಾದ ಅಬ್ಬುಚ್ಚನವರು ಕುಡಿಯಲು ನೀರು ಕೊಟ್ಟು ಕುಳ್ಳಿರಿಸಿದರು. ಬಳಿಕ ಅವರನ್ನು ಊರಿನ ಮುಸ್ಲಿಂ ಯುವಕ ಭಾಂದವರು ಸೇರಿಕೊಂಡು ಸುಶ್ರೂಷಿಸಿದರು. ಕಾಲಿನಲ್ಲಿದ್ದ ಹುಣ್ಣಿಗೆ ತನ್ನ ಕೈಯಿಂದಲೇ ಮುಲಾಮು ಹಚ್ಚಿ, ಸ್ನಾನ ಮಾಡಿಸಿದ ಸತ್ತಾರ್ ಕೈರಂಗಳ ಅವರು ಮಾನವೀಯತೆಗೆ ಸಾಕ್ಷಿಯಾದರು.
ಈ ಸಂಧರ್ಬದಲ್ಲಿ ಪಂಚಾಯತ್ ಸದಸ್ಯರಾದ ರಹಿಮಾನ್ ತೋಟಾಲ್, ಟಿಕೆ ಸಫ್ವಾನ್ ಶರೀಫ್ ಮೊದಲಾದವರು ಸಾಥ್ ನೀಡಿದರು. ಸ್ಥಳೀಯ ಸಮಾಜ ಸೇವಕರಾದ ಬಾನೋಟ್ ಮೊಯ್ದಿನ್ ರವರು ಬಾಯಿಗೆ ಅನ್ನ ಹಾಕಿ ಹಸಿದ ಹೊಟ್ಟೆಗೆ ತುತ್ತನ್ನು ನೀಡಿದರು. ಬಳಿಕ ಅವರನ್ನು ವೆನ್ ಲಾಕ್ ಆಸ್ಪತ್ರೆಗೆ ಸೇರಿಸಲಾಯಿತು.
ವಿಶೇಷವಾಗಿ ತನ್ನ ಮನೆಯಿಂದ ತಿಂಡಿ, ತಿನಿಸು, ಚಾಪೆ ಎಲ್ಲವನ್ನೂ ನೀಡಿದ ಫ್ಯಾನ್ಸಿ ಅಬ್ಬುಚ್ಚ, ವಿಶೇಷ ಮುತುರ್ವಜಿ ವಹಿಸಿದ ಸತ್ತಾರ್ ಕೈರಂಗಳ ಮತ್ತು ತಂಡದ ಸ್ಥಳೀಯ ಯುವಕರ ಸೇವೆ ಮಾನವೀಯತೆಗೆ ಸಾಕ್ಷಿಯಾಗಿದ್ದು, ಇದು ನಿಜಕ್ಕೂ ಶ್ಲಾಘನೀಯ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.