(www.vknews.in) : ಸಹೋದರರೆ, ಭಾರತವು ಗತಕಾಲದಿಂದಲೂ ಜ್ಯಾತ್ಯಾತೀತ ಹಾಗೂ ವಿಶ್ವ ಶಾಂತಿ, ಮೆರೆದ ದೇಶವಾಗಿದೆ. ಇಲ್ಲಿ ಬುದ್ಧ, ಬಸವ, ಪ್ರವಾದಿ ಪೈಗಂಬರ್, ಯೇಸು, ಮಹಾವೀರ್, ನಾನಕ ರಂತಹ ಮಹಾನ್ ಧಾರ್ಮಿಕ ದಾರ್ಶನಿಕರ ನೆಲವೀಡಾಗಿದ್ದು ಅಂತಹ ರಾಷ್ಟ್ರದಲ್ಲಿ ಜನಿಸಿದ ನಾವೇ ಭಾಗ್ಯವಂತರು. ಹೀಗಿದ್ದಾಗ ಈಡಿ ಪ್ರಪಂಚಕ್ಕೆ ಸಂಸ್ಕೃತಿ,ಸಂಪ್ರದಾಯ ಹಾಗೂಮಹಾನ್ ಗ್ರಂಥಗಳನ್ನು ನೀಡಿರುವ ಹೆಮ್ಮೆ ನಮ್ಮದಾಗಿದೆ. ಜಗತ್ತಿನ ಎಲ್ಲಾ ದೇಶಗಳು ನಮ್ಮ ಸಂಸ್ಕೃತಿಯನ್ನು ಪಾಲನೆ ಮಾಡುತ್ತೀವಿ, ಹಾಗೆಯೇ ನಮ್ಮ ದೇಶಕ್ಕೆ ಗೌರವ ಸಮ್ಮನವನ್ನು ನೀಡುತ್ತಿವೆ.
ಇಂತಹ ಸನ್ನಿವೇಶದಲ್ಲಿ ದೇಶದ ಪ್ರಮುಖ ರಾಷ್ಟ್ರೀಯ ಪಕ್ಷಗಳ ವಕ್ತಾರರು ಪ್ರವಾದಿ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಾಸಲ್ಲಮರನ್ನು ನಿಂದಿಸಿರುವುದು ಅಕ್ಷಮ್ಯ ಅಪರಾಧವಾಗಿದೆ, ಅಲ್ಲದೆ ಈ ಹೇಳಿಕೆಯು ಜಾಗತಿಕ ಮಟ್ಟದ ಚರ್ಚೆಗೆ ಗ್ರಾಸವಾಗಿರುವುದರೊಂದಿಗೆ ಧಾರ್ಮಿಕ ಭಾವನೆಯನ್ನು ರೊಚ್ಚಿಗೆಬ್ಬಿಸಿದಂತಾಗಿದೆ, ನಮ್ಮ ನೆಲೆಯು ಭಾತೃತ್ವ ಹಾಗೂ ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಇಂತಹ ಸಂಧರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ಸ್ವಲಾಲಸೆಗಾಗಿ ಜನರಲ್ಲಿ ತಪ್ಪು ಹೇಳಿಕೆಗಳನ್ನು ಹೇಳಿ ಮನಸನ್ನು ಕ್ಷುದ್ರಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.
ಅಂತಹವರು ಯಾವ ಧರ್ಮದವರೆ ಆಗಲಿ ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಿ ಧಾರ್ಮಿಕ ಪತನವನ್ನು ನಿಲ್ಲಿಸುವುದು ನಮ್ಮ ಘನ ಸರ್ಕಾರದ ಪಾಲನೆಯಾಗಿದೆ. ಇಂತಹವರನ್ನು ಬಂಧಿಸುವುದರ ಮೂಲಕ ನಮ್ಮ ಸಮಾಜದ ಶಾಂತಿಗೆ ನಾಂದಿಯಾಗಬೇಕಿದೆ. ಭಾರತದಲ್ಲಿ ಸೌಹಾರ್ದತೆಯನ್ನು ಎತ್ತಿ ಹಿಡಿಯುವುದು ಪ್ರತಿಯೊಂದು ಧರ್ಮದ ನೀತಿಯಾಗಿದೆ ಎಂಬುದೇ ನನ್ನಯ ಆಶಯವಾಗಿದೆ ಎಂದು ಸಾಮಾಜಿಕ ಯುವ ಹೋರಾಟಗಾರ ಆಮೀರ್ ಬನ್ನೂರು ರವರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.