ಕೋಝಿಕ್ಕೋಡ್ (ವಿಶ್ವ ಕನ್ನಡಿಗ ನ್ಯೂಸ್) : ಮುಸ್ಲಿಂ ಲೀಗ್ ನಾಯಕ ಹಾಗೂ ಮಾಜಿ ಶಾಸಕ ಕೆ.ಎನ್.ಎ.ಖಾದರ್ ಅವರು ಆರ್ ಎಸ್ ಎಸ್ ಕಾರ್ಯಕ್ರಮವಾದ ಸ್ನೇಹಬೋಧಿ ಶಿಲ್ಪದ ಅನಾವರಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಆರ್ ಎಸ್ ಎಸ್ ರಾಷ್ಟ್ರೀಯ ನಾಯಕ ಜೆ.ನಂದಕುಮಾರ್ ಅವರು ಕೆ.ಎನ್.ಎ.ಖಾದರ್ ಅವರನ್ನು ಶಾಲುಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಭಾಷಣ ಮಾಡಿದ ಕೆ.ಎನ್.ಎ.ಖಾದರ್, ಆರ್ ಎಸ್ ಎಸ್ ನ ಬೌದ್ಧಿಕ ವಿಭಾಗವಾದ ಪ್ರಜ್ಞಾಪ್ರವಾಹದ ರಾಷ್ಟ್ರೀಯ ಸಂಚಾಲಕ ಜೆ.ನಂದಕುಮಾರ್ ಅವರನ್ನು ಶ್ಲಾಘಿಸಿದರು. ಒಂದು ಕಾಲದಲ್ಲಿ ನನ್ನನ್ನು ಮುಸ್ಲಿಂ ಭಯೋತ್ಪಾದಕನೆಂದು ಪ್ರಚಾರ ಮಾಡಲಾಯಿತು. ನಾನು ಗುರುವಾಯೂರು ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ನನ್ನನ್ನು ಸಂಘಿಯನ್ನಾಗಿ ಮಾಡಲಾಯಿತು. ಬಳಿಕ ನನ್ನನ್ನು ನಾಸ್ತಿಕ ಎಂದು ಹೇಳಿದರು. ನಾನು ನಿಜವಾಗಿಯೂ ಯಾರೆಂದು ನನಗೆ ಗೊತ್ತಿದೆ ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.