ಕಾಸರಗೋಡು (www.vknews.in) : ಗಡಿ ಜಿಲ್ಲೆಯ ಹಲವೆಡೆ ಸಮಾಜ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವುದು ಸತ್ಯ, ಇವುಗಳಲ್ಲಿ ಅತ್ಯಂತ ಅಪಾಯಕಾರಿಯಾದುದು ಅಮಲು ಪದಾರ್ಥಗಳ ಬಳಕೆ. ಮುಂಬರುವ ಪೀಳಿಗೆ ಅದರಲ್ಲೂ ನಮ್ಮ ಮಕ್ಕಳು ಹಾಗೂ ಶಿಕ್ಷಣ ಸಂಸ್ಥೆಗಳು ಇವೆಲ್ಲವನ್ನೂ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಅನುಕೂಲವಾಗುವಂತೆ, ಬಿಲ್ಡಪ್ ಕಾಸರಗೋಡು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾಸರಗೋಡು ಸರಕಾರಿ ಕಾಲೇಜು ಎನ್.ಎಸ್.ಎಸ್, ಮಾನವ ಹಕ್ಕುಗಳ ರಕ್ಷಣಾ ಮಿಷನ್, ಅಬಕಾರಿ ಇಲಾಖೆ ಮತ್ತು ರೋವರ್ ಸ್ಕೌಟ್ಸ್ ಮತ್ತು ರೇಂಜರ್ಸ್ ಜಂಟಿಯಾಗಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ಜೂನ್ 26 ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ಸರಕಾರಿ ಕಾಲೇಜು ಸೆಮಿನಾರ್ ಹಾಲ್ನಲ್ಲಿ ಜಾಗೃತಿ ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡಿರುವರು.
ಗೌರವಾನ್ವಿತ DLSA ಕಾರ್ಯದರ್ಶಿ ಹಾಗೂ ಉಪ ನ್ಯಾಯಾಧೀಶರಾದ ಶ್ರೀ ಬಿ. ಕರುಣಾಕರನ್ – ಕಾರ್ಯಕ್ರಮವನ್ನು ಉದ್ಘಾಟಿಸುವರು. ಬಿಲ್ಡಪ್ ಕಾಸರಗೋಡು ಅಧ್ಯಕ್ಷ ಶ್ರೀ ಕೂಕ್ಕಲ್ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಥೆಯ ಪೋಷಕರಾದ ನಿವೃತ್ತ ಉಪಕುಲಪತಿ ಡಾI ಖಾದರ್ ಮಾಂಗಡ, ಶ್ರೀ ಅಬ್ದುಲ್ ಖಾದಿರ್ ಸಲೀಂ ಸನಾ, ನಿವೃತ್ತ ಐ.ಜಿ. ಶ್ರೀ ಕೆ.ಮಧುಸೂದನನ್ ನಾಯರ್, ಪ್ರಮುಖ ಕೈಗಾರಿಕೋದ್ಯಮಿ ಶ್ರೀ ಎಂಟಿಪಿ ಮುಹಮ್ಮದ್ ಕುಂಞಿ, ಸರಕಾರಿ ಕಾಲೇಜು ಪ್ರಾಂಶುಪಾಲರಾದ ಡಾ. ಎಂ. ರಮ, ಬಿಲ್ಡಪ್ ಕಾಸರಗೋಡು ಪ್ರಧಾನ ಕಾರ್ಯದರ್ಶಿ ಡಾ. ಶೇಖ್ ಬಾವ, ಕೋಶಾಧಿಕಾರಿ ಡಾ.ರಶ್ಮಿ ಪ್ರಕಾಶ್, ಉಪಾಧ್ಯಕ್ಷರಾದ ಶ್ರೀ ರವೀಂದ್ರನ್ ಕನ್ನಂಕಾಯಿ, ಶ್ರೀ ಅನೂಪ್ ಕಳನಾಡ್ ಹಾಗೂ ಮಾನವ ಹಕ್ಕುಗಳ ರಕ್ಷಣಾ ಮಿಷನ್ ಜಿಲ್ಲಾ ಕಾರ್ಯದರ್ಶಿ ಶ್ರೀ ಹರ್ಷದ್ ಪೊವೆಲ್ ಮಾತನಾಡಲಿರುವರು.
ಸಮಾರಂಭದಲ್ಲಿ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಶ್ರೀ ಅಜಿತ್ ಸಿ.ಕಳನಾಡ್ ಅವರನ್ನು ಸನ್ಮಾನಿಸಲಾಗುವುದು. ಮಾದಕ ದ್ರವ್ಯ ಅಪರಾಧ ವಿಭಾಗ ಮಂಗಳೂರು ಇದರ ಪೊಲೀಸ್ ಅಧಿಕಾರಿ ಶ್ರೀಮತಿ ಶ್ರೀಲತಾ ಹಾಗೂ ಅಬಕಾರಿ ಪ್ರಿವೆಂಟಿವ್ ಆಫೀಸರ್ ಶ್ರೀ ಎನ್.ಜಿ.ರಘುನಾಥನ್ ಅವರು ತರಗತಿ ತೆಗೆದುಕೊಡಲಿದ್ದಾರೆ.
ಕಾರ್ಯಕ್ರಮಕ್ಕೆ ಮೊದಲು “ಅಮಲು – ಯೌವನವನ್ನು ಕಿತ್ತು ತಿನ್ನುವ ಕ್ಯಾನ್ಸರ್” ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆಯೊಂದು ಬೆಳಿಗ್ಗೆ 9.30 ರಿಂದ 10.15 ರವರೆಗೆ ಕಾಲೇಜು ಸೆಮಿನಾರ್ ಹಾಲಿನಲ್ಲಿ ನಡೆಯಲಿದ್ದು ಶಾಲಾ ಹಂತದಿಂದ 22 ವರ್ಷದೊಳಗಿನವರಿಗೆ ಭಾಗವಹಿಸಲು ಅವಕಾಶವಿದೆ. ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ನಲ್ಲಿಸ್ಪರ್ಧೆ ನಡೆಯಲಿದ್ದು ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ಶ್ರೀ ಅನೂಪ್ ಕಳನಾಡ್ (ಉಪಾಧ್ಯಕ್ಷರು, ಆಡಳಿತ ಸಾರ್ವಜನಿಕ ಸಂಪರ್ಕಇಲಾಖೆ – ಬಿಲ್ಡ್ ಅಪ್ ಕಾಸರಗೋಡು ಸೊಸೈಟಿ) ಇವರನ್ನು ಮೊಬೈಲ್ ಸಂಖ್ಯೆ 9847023970 ರಲ್ಲಿ ಸಂಪರ್ಕಿಸಬಹುದು. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು.
ನಿಗದಿತ ಸಮಯದಲ್ಲಿ ಹಾಜರಿದ್ದು ವಿಚಾರ ಸಂಕಿರಣವನ್ನು ಸಂಪೂರ್ಣ ವಿಜಯಗೊಳಿಸಿ ಕೊಡಬೇಕಾಗಿ ವಿನಂತಿ.
ಡಾ. ಶೇಖ್ ಬಾವ, ಪ್ರಧಾನ ಕಾರ್ಯದರ್ಶಿ, ಬಿಲ್ಡಪ್ ಕಾಸರಗೋಡು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.