ದೋಹಾ(ವಿಶ್ವಕನ್ನಡಿಗ ನ್ಯೂಸ್): ಕೇರಳಿಯಂ ಕತಾರ್ ತಂಡದ ವತಿಯಿಂದ ಸಂಗೀತ ಸಂಧ್ಯಾ ಕಾರ್ಯಕ್ರಮವು ಐಡಿಯಲ್ ಇಂಡಿಯನ್ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಕೇರಳೀಯಂ ಕತಾರ್ ಇದರ ಅಧ್ಯಕ್ಷರು ಶ್ರೀ ಮಧು ಅಭಿಮನ್ಯು ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರು ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೇರಳೀಯಂ ತಂಡದ ಪ್ರಧಾನ ಕಾರ್ಯದರ್ಶಿಗಳು ಸ್ವಾಗತ ಭಾಷಣಗೈದರು, ಹಾಗೂ ಶ್ರೀ ಕೃಷ್ಣಕುಮಾರ್ ಅವರು ಸಭೆಗೆ ಧನ್ಯವಾದವನ್ನು ಅರ್ಪಿಸಿದರು.
ಕಾರ್ಯಕ್ರಮದ ನಿರೂಪಕಿಯಾದ ಶ್ರೀಮತಿ ಜಯಶ್ರೀ ಸುರೇಶ್ ಅವರು ಸಮಾರಂಭವನ್ನು ಅತ್ಯಂತ ಮನೋಹರವಾಗಿ ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಗಣ್ಯವೆಕ್ತಿಗಳು ಹಾಗೂ ಕೇರಳಿಯಂ ಕತಾರ್ ಸಂಘದ ಸದಸ್ಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.