ಕುವೈಟ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಪೌಂಡೇಶನ್(ಕೆಸಿಎಫ್) ಕುವೈಟ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ಅಬ್ದುಲ್ ರಹಮಾನ್ ಸಖಾಫಿ ಇವರ ಅಧ್ಯಕ್ಷತೆಯಲ್ಲಿ ಬದರ್ ಅಲ್ ಸಭಾಂಗಣದಲ್ಲಿ ನಡೆಯಿತು.
ಉಮರ್ ಝುಹುರಿ ದುವಾ ದೊಂದಿಗೆ ಕಲಂದರ್ ಶಾಫಿ ಯವರ ಕಿರಾತ್ ನೊಂದಿಗೆ ಪ್ರಾರಂಭಿಸಿದ ಸಭೆಯನ್ನು ಬಾಧುಶ ಸಖಾಫಿ ಉದ್ಘಾಟನೆ ಗೈದರು. ಸಮಿತಿಯ ವರದಿಯನ್ನು ಮಾಜಿ ಕಾರ್ಯದರ್ಶಿ ಝಕರಿಯ್ಯಾ ಆನೆಕಲ್ ವಾಚಿಸಿ, ಮೂಸಇಬ್ರಾಹಿಂ ಲೆಕ್ಕ ಪತ್ರ ವನ್ನು ಮಂಡಿಸಿ ಸಭೆಯಲ್ಲಿ ಅಂಗೀಕರಿಸಲಾಯಿತು.
ಅಧ್ಯಕ್ಷ ಬಾಷಣ ನಡೆಸಿದ ಅಬ್ದುಲ್ ರಹಮಾನ್ ಸಖಾಫಿ ಯವರು ಸ್ವಲಾತ್ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುವುದರೊಂದಿಗೆ ನಾವು ಮಾಡುವ ಎಲ್ಲಾ ಕಾರ್ಯ ಗಳು ಆತ್ಮಾರ್ಥದಿಂದ ಕೂಡಿರಬೇಕು ಹಾಗೂ ಕೆಸಿಎಫ್ ನ ಉನ್ನತಿಗಾಗಿ ಕೈಜೋಡಿಸಿದ ಎಲ್ಲರನ್ನೂ ಅಭಿನಂದಿಸಿದರು.
ಹುಸೈನ್ ಮುಸ್ಲಿಯಾರ್ ಕಾರ್ಯಕರ್ತರಿಗೆ ಸಂಘಟನೆ ತರಗತಿ ನಡೆಸಿ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಚರಿಸುವ ಪ್ರತಿ ಸಮಿತಿಗಳ ಉದ್ದೇಶ ಮತ್ತು ಅದರ ಕಾರ್ಯವೈಕರಿಯ್ಯಗಳ ಕುರಿತು ಸವಿಸ್ತಾರವಾಗಿ ವಿವರಿಸಿ ಕೆಸಿಎಫ್ ನಲ್ಲಿ ಕಾರ್ಯಕರ್ತನ ಪ್ರವೃತ್ತಿ ಹೇಗಿರಬೇಕು ತಿಳಿಸಿದರು. ಝಕರಿಯ್ಯಾ ಆನೇಕಲ್ ಮಾತನಾಡಿ ಸಾಂತ್ವನ ಸಮಿತಿಯ ಅಧೀನದಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆಸಿದ ಸಾಂತ್ವನ ಕಾರ್ಯಗಳು ವಿಶೇಷವಾಗಿ ಕೋವಿಡ್ ಸಮಯದಲ್ಲಿ ನಡೆಸಿದ ಸಾಂತ್ವನ ಕೆಲಸಗಳು ಅನಿವಾಸಿ ಕನ್ನಡಿಗರ ಸಮಸ್ಯೆ ಗಳಿಗೆ ಸ್ಪಂದಿಸಿದ ಕಾರ್ಯವನ್ನು ವಿವರಿಸಿ ಹಾಲಿ ಸಮಿತಿಯು ನಡೆಸಿದ ಕಾರ್ಯ ವೈಕರಿ ಹೇಳಿ ಬಾವುಕರಾದರು.
ಫಾರೂಕ್ ಸಖಾಫಿ,ಶಾಹುಲ್ ಹಮೀದ್ ಸಹದಿ, ಬಶೀರ್ ಸಖಾಫಿಯವರು ಆಶಂಸ ಭಾಷಣಗೈದರು.
ಸಭೆಯ ನಿಯಂತ್ರಕ(ಆರ್ ಓ) INC ಸಾಂತ್ವನ ವಿಭಾಗ ಅಧ್ಯಕ್ಷರಾದ ಅಲಿ ಮುಸ್ಲಿಯಾರ್ ಬಹರೈನ್ ಅವರ ನೇತ್ರತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. INC ಕೌನ್ಸಿಲರ್ ಗಳಾಗಿ ಅಬ್ದುಲ್ ರಹ್ಮಾನ್ ಸಖಾಫಿ ಮತ್ತು ಝಕರಿಯಾ ಆನೇಕಲ್ ಅವರನ್ನು ನೇಮಿಸಲಾಯಿತು. 2022-2023 ರ ಸಾಲಿಗೆ ನವ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹುಸೈನ್ ಮುಸ್ಲಿಯಾರ್ ಎರ್ಮಾಡ್, ಪ್ರಧಾನ ಕಾರ್ಯದರ್ಶಿಯಾಗಿ ಯಾಕೂಬ್ ಕಾರ್ಕಳ ಕೋಶಾಧಿಕಾರಿಯಾಗಿ ಮೂಸಇಬ್ರಾಹಿಂ, ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಉಮರ್ ಝುಹುರಿ ಕಾರ್ಯದರ್ಶಿ ಸಮೀರ್ ಎಂಜಿನಿಯರ್ ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಬಾಧುಶ ಸಖಾಫಿ ಮಾದಾಪುರ ಕಾರ್ಯದರ್ಶಿ ಮುಸ್ತಫಾ ಉಳ್ಳಾಲ. ಸಾಂತ್ವನ ವಿಭಾಗದ ಅಧ್ಯಕ್ಷ ರಾಗಿ ಇಕ್ಬಾಲ್ ಕಂದಾವರ ಕಾರ್ಯದರ್ಶಿ ಮಲಿಕ್ ಸೂರಿಂಜೆ . ಅಡ್ಮಿನ್ ವಿಭಾಗದ ಅಧ್ಯಕ್ಷ ರಾಗಿ ಅಬ್ಬಾಸ್ ಬಳಂಜ ಕಾರ್ಯದರ್ಶಿ ಉಸ್ಮಾನ್ ಕೋಡಿ . ಪ್ರಕಾಶನ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ರಾಗಿ ಶಾಹುಲ್ ಹಮೀದ್ ಸಅದಿ ಝುಹ್ರಿ ಕಾರ್ಯದರ್ಶಿ ಇಬ್ರಾಹಿಂ ವೇಣೂರು ಇಹ್ಸಾನ್ ವಿಭಾಗದ ಅಧ್ಯಕ್ಷ ರಾಗಿ ಫಾರೂಕ್ ಸಖಾಫಿ ಕಾರ್ಯದರ್ಶಿ ತೌಫೀಕ್ ಕಾರ್ಕಳ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಅಬ್ದುಲ್ ಲತೀಫ್ ಬಂಟ್ವಾಳ, ಸೌಕತ್ಅಲಿ ಶಿರ್ವ, ಕಲಂದರ್ ಶಾಫಿ ಜೋಕಟ್ಟೆ, ಹೈದರ್ ಉಚ್ಚಿಲ, ಉಮರಬ್ಬ ಕೊಳಕೆ, ಮುನೀರ್ ಕಾರ್ಕಳ, ಸಂಸುಂದ್ದಿನ್ ಬೆಜ್ಜವಳ್ಳಿ, ಹಸೈನಾರ್ ಮೊಂಟೆಪದವು, ಇಲ್ಯಾಸ್ ಮೊಂಟುಗೋಳಿ, ಅಬ್ಬಾಸ್ ಪಾಳ್ಯ ಜಹರ, ಅನ್ವರ್ ಬಜ್ಪೆ, ಸಿರಾಜ್ ಸುಂಟಿಕೊಪ್ಪ, ಅಝೀಝ್ ತಿಂಗಳಾಡಿ ಇವರನ್ನು ಆರಿಸಲಾಯಿತು.
ಝಕಾರಿಯ ಆನೆಕಲ್ ಸ್ವಾಗತಿಸಿ ಮುಸ್ತಾಫ ಉಳ್ಳಾಲ ಧನ್ಯವಾದ ನಡೆಸಿ ಕೊನೆಯಲ್ಲಿ ಮೂರು ಸ್ವಲಾತಿನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.