(www.vknews.in) : ಈ ಧಾರ್ಮಿಕ ನಂಬಿಕೆ ಎಂಬುದು ಇದೆಯಲ್ಲಾ ಅದು ಅತೀ ಸೂಕ್ಷ್ಮ ಮತ್ತು ಅಷ್ಟೇ ಭಾವನಾತ್ಮಕ. ತಲತಲಾಂತರದಿಂದ ನಂಬಿಕೆಯ ಆದಾರದಲ್ಲಿ ನಡೆದು ಬರುತ್ತಿರುವ ಆಚಾರ ವಿಚಾರಗಳನ್ನು ಪ್ರಶ್ನೆ ಮಾಡುವುದು ಅದು ಈ ಧರ್ಮಗಳ ಅಡಿಬೇರನ್ನೇ ಅಲ್ಲಾಡಿಸುವಂತದ್ದು. ಹಾಗೆಂದಿಟ್ಟು ಪ್ರಶ್ನಿಸಲೇ ಬಾರದೆಂದಲ್ಲ.
ಜಗತ್ತಿನಲ್ಲಿ ಹಲವು ಧರ್ಮಗಳಲ್ಲಿ ರೂಢಮೂಲ ಗೊಂಡಿದ್ದ ಮೌಡ್ಯ ಮತ್ತು ಅಷ್ಟೇ ಅಮಾನವೀಯವಾದ ನಂಬಿಕೆಗಳನ್ನು ಸುಧಾರಣಾ ವಾದಿಗಳು ಪ್ರಶ್ನೆ ಮಾಡಿದ್ದರಿಂದಲೇ ಸತಿಸಹಗಮನ,ದೇವದಾಸಿ,ಗುಲಾಮ ಪದ್ದತಿ,ಶ್ರೇಣೀಕೃತ ಜಾತಿ ವ್ಯವಸ್ಥೆ ಮೊದಲಾದವು ಕ್ರಮೇಣ ಜಗತ್ತಿನಿಂದ ಮಾಯವಾದವು. ಆದರೆ ಈಗಲೂ ಇದರ ಪಳೆಯುಳಿಕೆಯ ಸ್ಯಾಂಪಲ್ ಅಲ್ಲಿ ಇಲ್ಲಿ ವರದಿಯಾಗುತ್ತಿರುವುದನ್ನು ಅಲ್ಲಗೆಳೆಯುವುದಿಲ್ಲ. ಇಸ್ಲಾಂ ದೂರದ ಅರೇಬಿಯಾದಿಂದ ಸಹಾಬೀ ಸಾಧು ಸಂತರು ಇಲ್ಲಿ ಬಂದು ಪ್ರಚಾರ ಮಾಡಿದ್ದ ಇಸ್ಲಾಂ ಧರ್ಮ ಬೆಳೆಯುತ್ತಲೇ ಇತ್ತು.
ದೇಶದ ಜಾತಿ ವ್ಯವಸ್ಥೆಯಲ್ಲಿ ನೊಂದು ಹೈರಾಣಾದ ಜಾತಿ ಪಂಗಡದವರಿಗೆ ಮುಕ್ತಿ ಮಾರ್ಗ ತೋರಿಸಿದ್ದು ಈ ಧರ್ಮದ ಸಮಾನತೆಯ ಪಾಠವಾಗಿತ್ತು. ಜಗಕ್ಕೆ ಒಬ್ಬನೇ ಒಡೆಯ. ನಿರಾಕಾರನೂ ಪರಾಶ್ರಯ ಇಲ್ಲದವನೂ ಸರ್ವವನ್ನೂ ಸೃಷ್ಟಿಸಿದವನೂ ಆದ ಆ ಸರ್ವೇಶ್ವರನಿಗೆ ಮಾತ್ರ ತಲೆಬಾಗ ಬೇಕು. ಮನುಷ್ಯರೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಇಸ್ಲಾಮಿನ ಮೂಲ ತತ್ವ ಬುದ್ದಿವಂತ ಜನರನ್ನೂ ಆಕರ್ಷಿಸಿತು.
ಹೀಗೇ ಯಾವುದೇ ಬಿನ್ನಾಭಿಪ್ರಾಯಗಳೋ,ತಂಟೆ ತಕರಾರುಗಳೋ ಇಲ್ಲದೇ ಧರ್ಮ ಕಲಿತ ಗುರುವರ್ಯರುಗಳ ಅಣತಿಯಂತೆ ಜನರು ಇಸ್ಲಾಂ ಧರ್ಮವನ್ನು ಪಾಲಿಸುತ್ತಾ ಸಾಗುತ್ತಿದ್ದರು.
ಬಿನ್ನಮತ ; ಅದು 1925 ರ ಆಜುಬಾಜು! ಆತನಕ ಮುಸ್ಲಿಮರು ಪರಂಪರಾಗತವಾಗಿ ಆಚರಿಸುತ್ತಾ ಬಂದಿರುವ ಭಕ್ತಿ ಮಾರ್ಗವನ್ನು ಇಲ್ಲಿ ಕೆಲವರು ಕುರಾನ್ ಹದೀಸಿನ ಕೆಲವು ತುಣುಕುಗಳನ್ನು ಮುಂದಿಟ್ಟು ವಿರೋಧಿಸಲು ಆರಂಬಿಸಿದ ಕಾಲ. ಅದಕ್ಕಾಗಿ ಆ ಜನರು ಒಂದು ಸಂಘಟನೆಯನ್ನೇ ಹುಟ್ಟು ಹಾಕಿದರು. ಇದರಿಂದಾಗಿ ಧರ್ಮದ ಅಡಿಬೇರೇ ಅಲ್ಲಾಡ ತೊಡಗಿತು. ಜನರ ಹೃದಯದಲ್ಲಿ ಬೇರೂರಿದ್ದ ನಂಬಿಕೆಗೆ ಘಾಸಿಯಾಯಿತು. ಜನರು ಗೊಂದಲಕ್ಕೊಳಗಾದರು. ಆ ಟೈಮಲ್ಲಿ ಜಗತ್ತಿನ ಎಲ್ಲಾ ಕಡೆಗಳಲ್ಲೂ ಇದು ಬೇರೆ ಬೇರೆ ರೂಪದಲ್ಲಿ ಅವತಾರ ತಾಳಿತ್ತು.
ಸಮಸ್ತ ; ಅಂದಹಾಗೆ ಧಾರ್ಮಿಕ ವಿದ್ಯೆಯ ವಿಚಾರದಲ್ಲಿ ಒಂದೆಜ್ಜೆ ಮುಂದಿದ್ದ ಕೇರಳದಲ್ಲಿ ಮಾತ್ರ ಇದಕ್ಕೆ ಶಕ್ತವಾದ ಪ್ರತಿರೋಧ ವ್ಯಕ್ತವಾಯಿತು.
ಈ ಪ್ರತಿರೋಧದ ಫಲಶೃತಿಯೇ ನಾವು ಇಂದು ಹೃದಯದಲ್ಲಿಟ್ಟು ಪ್ರೀತಿಸುತ್ತಿರುವ ಸಮಸ್ತ ಉಲಮಾ ಒಕ್ಕೂಟ. ಇದರ ಬಗ್ಗೆ ಇಲ್ಲಿ ಬರೆಯಲು ಶುರುವಿಟ್ಟರೆ ಅದನ್ನು ಮುಗಿಸಲು ದಿನಗಳೇ ಬೇಕಾಗ ಬಹುದು. ಮಲಯಾಳಿಗಳ ಮತ್ತು ಅವರೊಂದಿಗೆ ಸಾಮ್ಯತೆ ಇರುವವರ ಮಧ್ಯೆ ಇಂದು ಸಮಸ್ತದ ಸಂದೇಶ ಪ್ರಚಾರ ಪೂರ್ಣಪ್ರಮಾಣದಲ್ಲಿ ವ್ಯಾಪಿಸಿ ನಿಂತಿದ್ದು ಇತ್ತೀಚಿಗಿನ ವರ್ಷಗಳಲ್ಲಿ ಜಗತ್ತಿನ ಇತರ ಜನಾಂಗಗಳಿಗೂ ಇದರ ಕಂಪು ವಿಸ್ತರಣೆ ಗೊಳ್ಳುತ್ತಿದೆ ಅಲ್ ಹಂದುಲಿಲ್ಲಾ.
ಜಗತ್ತಲ್ಲಿ ಪರ್ಯಾಯ ಇಲ್ಲದ ರೀತಿಯಲ್ಲಿ ಇದರ ಕಾರ್ಯ ಚಟುವಟಿಕೆಗಳು ಸುಸೂತ್ರವಾಗಿ ಸಾಗುತ್ತಿದ್ದು ಹತ್ತು ಸಾವಿರದಷ್ಟು ಪ್ರಾಥಮಿಕ ಮದ್ರಸಗಳು,ನೂರಾರು ಶಿಕ್ಷಣ ಸಂಸ್ಥೆಗಳು,ಅನಾಥಾಲಯಗಳು,ನಿಯತಕಾಲಿಕ ಗಳು, ವಿಖಾಯದಂತಹ ಸೇವಾ ಸಂಘಟನೆಗಳು,ಕ್ಷೇಮ ಪದ್ದತಿಗಳು ಇದರಡಿಯಲ್ಲಿ ಇಂದು ಅತ್ಯದ್ಭುತವಾಗಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಪುಣ್ಯ ಸಂಘಟನೆಯ ಪ್ರಚಾರಕರಾಗುವುದು ಅದೊಂದು ಭಾಗ್ಯವೇ ಸರಿ.
ಲೇಖನ; ಎಸ್ ಬಿ ದಾರಿಮಿ ಜಿಲ್ಲಾದ್ಯಕ್ಷರು, ಜಂಇಯ್ಯತ್ತುಲ್ ಖುತಬಾ ದ.ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.