ಅಧ್ಯಕ್ಷರಾಗಿ ಮುಹಮ್ಮದ್ ಶಮಿ, ಪ್ರ.ಕಾರ್ಯದರ್ಶಿಯಾಗಿ ನವಾಝ್ ಬೆಳ್ಳಾರೆ, ಕೋಶಾಧಿಕಾರಿಯಾಗಿ ಫವಾಝ್ ಅರಿಯಡ್ಕ..
ಮಾಡನ್ನೂರು (ವಿಶ್ವ ಕನ್ನಡಿಗ ನ್ಯೂಸ್) : ದಕ್ಷಿಣ ಕನ್ನಡದ ಪ್ರತಿಷ್ಠಿತ ವಿದ್ಯಾಸಂಸ್ಥೆ ಸಮನ್ವಯ ವಿದ್ಯಾಭ್ಯಾಸ ದೊಂದಿಗೆ ನವ ಕ್ರಾಂತಿಯನ್ನು ಸೃಷ್ಟಿಸುತ್ತಿರುವ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ವಿದ್ಯಾರ್ಥಿಗಳ ಸಂಘಟನೆಯಾದ ನೂರುಲ್ ಹುದಾ ಸ್ಟೂಡೆಂಟ್ಸ್ ಯೂನಿಯನ್ ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜೂನ್ 17 ರಂದು ಕ್ಯಾಂಪಸ್ ನಲ್ಲಿ ನಡೆದ ಮಹಾ ಸಭೆಯಲ್ಲಿ ಈ ಆಯ್ಕೆಯು ನಡೆಯಿತು.
ಅಧ್ಯಕ್ಷರಾಗಿ ಮುಹಮ್ಮದ್ ಶಮಿ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಬೆಳ್ಳಾರೆ, ಕೋಶಾಧಿಕಾರಿಯಾಗಿ ಫವಾಝ್ ಅರಿಯಡ್ಕ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಇಲ್ಯಾಸ್ ಮೆಲ್ಕಾರ್ ಮತ್ತು ಶಾಕಿರ್ ಪಳ್ಳತ್ತೂರ್, ಜೊತೆ ಕಾರ್ಯದರ್ಶಿಯಾಗಿ ನಿಝಾಂ ಬೆಳ್ಳಾರೆ ಮತ್ತು ಸಫ್ವಾನ್ ಪಾರಪಳ್ಳಿ, ಹಣಕಾಸು ಕಾರ್ಯದರ್ಶಿಯಾಗಿ ಸ್ವಬೀಹ್ ದೇಲಂಪಾಡಿ ರವರನ್ನು ಆಯ್ಕೆ ಮಾಡಲಾಯಿತು. ಸಂಘಟನಾ ಉಸ್ತುವಾರಿ ರಾಶಿದ್ ಹುದವಿ ಉಸ್ತಾದ್ ರವರ ನೇತೃತ್ವದಲ್ಲಿ ಸಭೆಯು ನಡೆಯಿತು.
ಕಾರ್ಯಯೋಜನೆಗಳನ್ನು ಉತ್ತಮ ರೀತಿಯಲ್ಲಿ ನಡೆಸಲು ಉಪಸಮಿತಿಗಳನ್ನು ರಚಿಸಿ ಅದರ ನಾಯಕರನ್ನು ಆಯ್ಕೆ ಮಾಡಲಾಯಿತು. ಹೆಚ್.ಆರ್. ಡಿ. ಚ್ಯಾರ್ಮಾನ್ ಆಗಿ ಬದುರುದ್ದೀನ್ ಮೂಡಿಗೆರೆ, ಆರ್ಗನೈಜೇಷನ್ ಸಮಿತಿಯ ಚ್ಯಾರ್ಮಾನ್ ಆಗಿ ಆಸಿಂ ಗಾಳಿಮುಖ, ರೈಟರ್ಸ್ ಕ್ಲಬ್ ಚ್ಯಾರ್ಮಾನ್ ಆಗಿ ಸಲೀಂ ಮಾಣಿ, ಸ್ಪೀಕರ್ಸ್ ಫೋರಂ ಚ್ಯಾರ್ಮಾನ್ ಆಗಿ ಮುನವ್ವರ್ ಕೊಡ್ಲಿಪೇಟೆ, ಲಾಂಗ್ವೇಜ್ ಕ್ಲಬ್ ಚ್ಯಾರ್ಮಾನ್ ಆಗಿ ರಮೀಝ್ ಕಟ್ಟತ್ತಾರ್, ಎಸ್ ಕೆ ಎಸ್ ಎಸ್ ಎಸ್ ಕ್ಯಾಂಪಸ್ ಚ್ಯಾರ್ಮಾನ್ ಆಗಿ ಮಿಕ್ದಾದ್ ಕುಂತೂರ್, ಮೆಡಿಕಲ್ ವಿಂಗ್ ಚ್ಯಾರ್ಮಾನ್ ಆಗಿ ಅತಾವುಲ್ಲಾ ಮಾಡನ್ನೂರ್, ವಲ್ಫೇರ್ ಚ್ಯಾರ್ಮಾನ್ ಆಗಿ ಹಿಬತುಲ್ಲಾ ಮಾಡನ್ನೂರ್, ಮೀಡಿಯಾ ಚ್ಯಾರ್ಮಾನ್ ಆಗಿ ಅಶ್ಫಾಕ್ ರವರನ್ನು ಆಯ್ಕೆ ಮಾಡಲಾಯಿತು.
ನವಪೀಳಿಗೆಯ ಹಿತಾಸಕ್ತಿಗೆ ಪೂರಕವಾದ ರೀತಿಯಲ್ಲಿ ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡಿ, ವಿದ್ಯಾರ್ಥಿಗಳು ಕಾಲದ ಗೋಡೆ ಬರಹಗಳನ್ನು ಓದಿ ಪರಿಹಾರ ಕಂಡುಕೊಳ್ಳುವಲ್ಲಿ ಅವರನ್ನು ಸಬಲೀಕರಿಸುವಲ್ಲಿ ಸಂಘಟನೆಯು ಐತಿಹಾಸಿಕ ಹೆಜ್ಜೆಯಿಡಲಿದೆಯೆಂದು ನೂತನ ಅಧ್ಯಕ್ಷ ಮುಹಮ್ಮದ್ ಶಮಿ ಈ ಸಂದರ್ಭದಲ್ಲಿ ನುಡಿದರು.
ಕಾರ್ಯಕ್ರಮವನ್ನು ನಿಕಟಪೂರ್ವ ಅಧ್ಯಕ್ಷರಾದ ಸಲೀಂ ಮಾಣಿ ಸ್ವಾಗತಿಸಿ, ಅಧ್ಯಕ್ಷರಾದ ಶಮಿ ಉಪ್ಪಿನಂಗಡಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.