(www.vknews.in) : ಶ್ರೀ ಕ್ಷೇತ್ರ ಚಾಮುಂಡೇಶ್ವರಿ ಕಣಿಯೂರು,: 16/6/2022 ರಂದು ನಡೆದ ಕಾರುಗಳ ಮುಖಾಮುಖಿ ಡಿಕ್ಕಿ ಹೊಡೆದು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದರೆ ಶ್ರೀ ಕ್ಷೇತ್ರ ಚಾಮುಂಡೇಶ್ವರಿ ಅಮ್ಮನ ಮಹಿಮೆ ಎಂದರೆ ತಪ್ಪಾಗಲಾರದು ಏಕೆಂದರೆ ಒಂದು ಕಾರು ಕ್ಷೇತ್ರದ ಕಡೆ ಹೋಗಿ ಅ ಕಾರಿನ ಮಾಲೀಕರಿಗೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಮತ್ತೊಂದು ಕಾರು ನಜ್ಜುಗುಜ್ಜಾಗಿದ್ದ ಕಾರಿನಿಂದ ಆ ವಯಸ್ಸಾದ ಪಶುಪತಿ ಭಟ್ ಮತ್ತು ದಂಪತಿ ಯವರನ್ನು ಎಳೆದು ತಂದು ಅವರನ್ನು ಉಪಚರಿಸಿ ಶ್ರೀ ಕ್ಷೇತ್ರ ಚಾಮುಂಡೇಶ್ವರಿ ಶ್ರೀ ಶ್ರೀ ಶ್ರೀ ಮಹಾಬಲ ಸ್ವಾಮೀಜಿ ಅವರು ಮಜೀದ್ ಕಣಿಯೂರು ಎಂಬವರಿಗೆ ಪೋನ್ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದರು.
ಈ ಕಾರುಗಳ ಮುಖಾಮುಖಿ ಡಿಕ್ಕಿ ಹೊಡೆದು ಸಂದರ್ಭದಿಂದ ಕೊನೆಯವರೆಗೂ ಆ ಕಾರುಗಳು ತಮ್ಮ ತಮ್ಮ ಶೋ ರೂಂ ಗೆ ಕಳುಹಿಸುವರೆಗೆ ಇದ್ದರು ಎಂದರೆ ತಪ್ಪಾಗಲಾರದು .ಏಕೆಂದರೆ ಯಾರದೋ ಕಾರುಗಳು. ಪರಿಚಯವೇ ಇಲ್ಲದ ಅ ವಯಸ್ಸದ ದಂಪತಿಯವರನ್ನು ಶ್ರೀ ಕ್ಷೇತ್ರದ ಯುವಕರು ಸಹಕರಿಸಿದ ಪರಿ ನೋಡಿದಾಗ ನನಗೆ ಅಂತೂ ಬಹಳ ಸಂತೋಷವಾಯಿತು… ಶ್ರೀ ಕ್ಷೇತ್ರ ಶ್ರೀ ಶ್ರೀ ಶ್ರೀ ಮಹಾಬಲ ಸ್ವಾಮೀಜಿ ಕಣಿಯೂರು ಅವರು ಕ್ಷೇತ್ರದ ಟ್ರಸ್ಟ್ ಶ್ರೀ ಮತಿ ರೇಣುಕಾ ಕಣಿಯೂರು.ನವೀನ್ ಕಣಿಯೂರು .ದೀಕ್ಷೀತ್ ಕಣಿಯೂರು ನಾಗರಾಜ್ ಕಣಿಯೂರು ಮುಂತಾದವರು.
ಅ ವಯಸ್ಸಿನ ದಂಪತಿಗಳು ಶ್ರೀ ಕ್ಷೇತ್ರ ಚಾಮುಂಡೇಶ್ವರಿ ಅಮ್ಮನ ಮಹಿಮೆ ಅಪಾರ,! ಅವರ ಮಹಿಮೆಯಿಂದ ನಮಗೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದೇವೆ.. ನಾನು ಮುಂದಕ್ಕೆ ಈ ಕ್ಷೇತ್ರದ ಭಕ್ತ ಎಂದು ಹೇಳಿ… ಮತ್ತೆ ಆ ವಯಸ್ಸಾದ ಪಶುಪತಿ ಭಟ್ ದಂಪತಿಯವರನ್ನು ಪೋನ್ ಮಾಡಿ ವಿಚಾರಿಸಿದಾಗ ನಾನು ನಿಮ್ಮ ಮತ್ತು ಚಾಮುಂಡೇಶ್ವರಿ ಅಮ್ಮನ ಕೃಪೆಯಿಂದ ಚೆನ್ನಾಗಿ ಇದ್ದೇನೆ ಎಂದು ಹೇಳಿದಾಗ ಬಹಳ ಖುಷಿಯಾಯಿತು…ಇಂತಹ ಸ್ವಾಮೀಜಿಯವರನ್ನು ನಾನು ಮತ್ತು ನನ್ನ ಕುಟುಂಬದ ಮರೆಯುವಂತಿಲ್ಲ ಎಂದರು…
ಈ ಕ್ಷೇತ್ರ ಕನ್ಯಾನ ಗ್ರಾಮದ ಕಣಿಯೂರು… ಕನ್ಯಾನ ಕ್ಕೆ ಬಂದು ಒಂದು ಕಿಲೋ ಮೀಟರ್ ದೂರದಲ್ಲಿರುವ ಮಂಜೇಶ್ವರ . ಮಂಗಳೂರು ರೋಡ್ ನಲ್ಲಿರುವ ಕಣಿಯೂರು ಎಂಬಲ್ಲಿ ಇರುವ ಅಪಾರ ಮಹಿಮೆ ಇರುವ ಕ್ಷೇತ್ರ ಎಂದರೆ ತಪ್ಪಾಗಲಾರದು ಏಕೆಂದರೆ ಇಲ್ಲಿ ಭಕ್ತರು ಬಂದು ತನ್ನ ಆಸೆ ಆಕಾಂಕ್ಷೆಗಳನ್ನು ಪೂರೈಸಲು ಶ್ರೀ ಚಾಮುಂಡೇಶ್ವರಿ ಅಮ್ಮನಿಂದ ಸಾಧ್ಯ …
ಇಲ್ಲಿ ಯಾವುದೇ ರಾಜಕೀಯ ಇಲ್ಲದ ಕ್ಷೇತ್ರ ಎಂದರೆ ತಪ್ಪಾಗಲಾರದು ಏಕೆಂದರೆ ಇಲ್ಲಿ ಎಲ್ಲರೂ ಒಂದೇ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಪಕ್ಷದವರು ಶ್ರೀ ಕ್ಷೇತ್ರ ಬಂದರೂ ಪೂರ್ಣ ಕುಂಭ ಸ್ವಾಗತ .. ಎಲ್ಲರೂ ಒಂದೇ ಅವರು ಎಲ್ಲರೂ ಭಕ್ತರೇ..
✍️ ಗಂಗಾಧರ ಕನ್ಯಾನ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.