ಕೃಷ್ಣಾಪುರ (www.vknews.in) ; 6ನೆಯ ಬ್ಲಾಕ್ ಮದ್ರಸ ವಿದ್ಯಾರ್ಥಿಯು ರಾತ್ರಿ ಮದ್ರಸ ಬಿಟ್ಟು ಮನೆಗೆ ತೆರಳುತ್ತಿರುವಾಗ ಕಿಡಿಗೇಡಿಗಳು ಆ ಪುಟಾಣಿಯ ಮೇಲೆ ಹಲ್ಲೆ ನಡೆಸಿರುವುದು ಪರಮ ಹೇಡಿತನವಾಗಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ದುರುದ್ದೇಶದೊಂದಿಗೆ ಈ ಹೀನಕೃತ್ಯವನ್ನು ಮಾಡಲಾಗಿದೆ. ಮಾನವೀಯತೆಯಿಲ್ಲದ ರಾಕ್ಷಸೀ ಮನಸ್ಸುಗಳಿಗೆ ಮಾತ್ರ ಪುಟಾಣಿಗಳ ಮೇಲೆ ಹಲ್ಲೆ ನಡೆಸಲು ಸಾಧ್ಯ.
ಇಂತಹಾ ನೀಚ ಕೃತ್ಯವನ್ನು ಎಲ್ಲಾ ಸಮುದಾಯಗಳು ಒಗ್ಗಟ್ಟಿನಿಂದ ವಿರೋಧಿಸಬೇಕಾಗಿದೆ. ಪೊಲೀಸ್ ಇಲಾಖೆಯು ಆದಷ್ಟು ಬೇಗ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಿ ಗರಿಷ್ಠ ಶಿಕ್ಷೆ ನೀಡಬೇಕು. ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕು. ಇನ್ನೆಲ್ಲೂ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ನಿಗಾ ಇರಿಸಿಕೊಳ್ಳಬೇಕೆಂದು ಸಂಬಂಧಪಟ್ಟ ಇಲಾಖೆಯೊಂದಿಗೆ ಮನವಿ ಮಾಡುತ್ತಿದ್ದೇವೆ.
ಅಧ್ಯಕ್ಷರು ಹಾಗೂ ಸದಸ್ಯರು ಎಸ್.ಜೆ.ಎಂ.ದ.ಕ.ಜಿಲ್ಲಾ ಸಮಿತಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.