(ವಿಶ್ವ ಕನ್ನಡಿಗ ನ್ಯೂಸ್) : ಅಬ್ದುಲ್ ರಫೀಕ್ ಮತ್ತು ಜಬ್ಬಾರ್ ನಿನ್ನೆ ಉದಯಪುರದಲ್ಲಿ ಟೈಲರ್ ಕನಯ್ಯನನ್ನ ಶಿರಚ್ಚೆದನ ಮಾಡಿ ಕೊಲೆ ಮಾಡಿದ ಆರೋಪಿಗಳು. ಅವರು ಯಾವುದೇ ಕಾರಣಕ್ಕೂ ಓರ್ವ ನೈಜ್ಯ ಮುಸಲ್ಮಾನ ಆಗಿರಲಾರ. ಕಾರಣ ಪ್ರವಾದಿಯವರು ಕಲಿಸಿದ ಶಾಂತಿಯ ಮಂತ್ರ ಅವುಗಳು ಕಲಿತಿರಲು ಸಾಧ್ಯವೇ ಇಲ್ಲ. ಅವರಿಬ್ಬರು ಮಾಡಿದ ಈ ಪಾಪ ನಡೆಗೆ ಯಾವುದೇ ಓರ್ವ ನೈಜ್ಯ ಮುಸಲ್ಮಾನ ಸಮರ್ಥಿಸಲಾರ, ಮುಸ್ಲಿಂ ಸಮುದಾಯಕ್ಕೆ ನೀವು ಕಳಂಕ. ಅಕ್ಲಾಕ್ ಪೆಹಲು ಖಾನ್ ಅದೇ ರೀತಿ ಹಲವು ಮುಸಲ್ಮಾನರನ್ನು ಗೋ ರಕ್ಷಣೆ, ಜೈ ಶ್ರೀರಾಮ ಹೆಸರಿನಲ್ಲಿ ಅದು ಇದು ಅಂತ ಕೊಂದ ಆ ಕೊಲೆಗಡುಕರಿಗೂ ನಿಮಗೂ ಯಾವುದೇ ವ್ಯತ್ಯಾಸವಿಲ್ಲ, ನರಕ ನಿಮ್ಮ ನ್ನು ಕಾಯುತ್ತಿದೆ.
ಧರ್ಮ ಎಂಬುದು ಈ ನಾಡಿನ ಆಸ್ಮಿತೆ. ಅದು ಇಲ್ಲಿಯ ಭಾವೈಕ್ಯತೆಯ ಭಾಗವೂ ಆಗಿದೆ. ಆದರೆ ಮೂಲಭೂತವಾದ ಎಂಬುದು ಅಪಾಯ. ಅದು ಯಾವುದೇ ಧರ್ಮದಲ್ಲಿರಲಿ ಇಲ್ಲಿಯ ಸೌಹಾರ್ದತೆಗೆ ಕಳಂಕವೂ ಆಗಿದೆ. ತಪ್ಪು ಮಾಡಿದವರು ಯಾವುದೇ ಧರ್ಮದವರಾಗಿರಲಿ ಖಂಡಿಸುವ ಮನಸ್ಸು ಎಲ್ಲಾ ಧರ್ಮದವರಲ್ಲೂ ಇರಲಿ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು. ಅದೆಷ್ಟೋ ಹತ್ಯಾ ಪ್ರಕರಣಗಳು ನ್ಯಾಯ ಕಾಣದೆ ಮಣ್ಣು ಪಾಲಾಗಿವೆ. ನ್ಯಾಯ ದೇವತೆ ಇನ್ನಾದರು ಕಣ್ಣು ತೆರೆಯುವಂತಾಗಲಿ. ಕಠಿಣ ಶಿಕ್ಷೆ ವಿಧಿಸಿದರೆ ಮಾತ್ರ ಇಂತಹ ಅಪರಾಧಗಳು ಕಡಿಮೆಯಾಗಬಹುದು.
ಇಂದು ಕನ್ಹಯ್ಯಾ ಲಾಲ್ ಅಂದು ಫೇಲು ಖಾನ್ ಇಬ್ಬರೂ ಭಾರತದಲ್ಲಿ ದ್ವೇಷದ ರಾಜಕೀಯಕ್ಕೆ ಬಲಿಪಶುಗಳಾದರು. ಉದಯಪುರದಲ್ಲಿ ಟೈಲರ್ ಹತ್ಯೆ ಆಘಾತಕಾರಿ. ನಮ್ಮ ದೇಶದಲ್ಲಿ ದ್ವೇಷ, ಹಿಂಸೆ, ಕೋಮುವಾದ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಇದು ಕೊನೆಯಾಗಬೇಕಿದೆ. ಪುಣ್ಯ ಪ್ರವಾದಿ ಪೈಗಂಬರ್ ಹೆಸರು ಹೇಳಿ ಹತ್ಯೆ ಮಾಡಿದ ರಾಕ್ಷಸರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ಧರ್ಮದ ಹೆಸರಿನಲ್ಲಿ ಹತ್ಯೆ ಮಾಡುವ ಅಧಿಕಾರ ಯಾರಿಗೂ ಇಲ್ಲ.
ಉದಯಪುರದಲ್ಲಿ ಇಬ್ಬರು ಮುಸ್ಲಿಮರೆಂದು ಹೇಳಿಕೊಂಡವರು ನಡೆಸಿದ ಟೈಲರ್ ಒಬ್ಬರ ಬರ್ಬರ ಹತ್ಯೆ ಖಂಡಿತವಾಗಿ ಒಂದು ಟೆರ್ರರಿಸ್ಟ್ ಕೃತ್ಯ. ಯಾವುದೆ ನೆಪವನ್ನು ಮುಂದೆ ಮಾಡದೆ, ಎಲ್ಲಾ ಮುಸ್ಲಿಮರು ಈ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಲೇಬೇಕು. ಇಂಥವರಿಂದಲೆ ಇಸ್ಲಾಂ ಧರ್ಮಕ್ಕೆ ಕುಖ್ಯಾತಿ ಬಂದಿರುವುದು.
– ಮೊಹಮ್ಮದ್, ರಿಯಾಜ್, ಬಜ್ಪೆ ಮಾಜಿ ಅಧ್ಯಕ್ಷರು, ಎಂ ಎಫ್ ಸಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.