ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ದುಲ್ಹಜ್ಜ್ ತಿಂಗಳ ಚಂದ್ರದರ್ಶನವಾಗಿದ್ದು ಜುಲೈ ಒಂಬತ್ತು ಶನಿವಾರ “ಅರಫಾ” ದಿವಸ ಹಾಗೂ ಜುಲೈ ಹತ್ತು ಆದಿತ್ಯವಾರ “ಈದುಲ್ ಅಝ್ಹಾ” ಆಗಿರುತ್ತದೆ ಎಂದು ಖಾಝಿಗಳು ಘೋಷಿಸಿದ್ದಾರೆ.
ಖಾಝಿಗಳಾದ ಸಯ್ಯದ್ ಫಝಲ್ ಕೋಯಮ್ಮ ತಂಗಳ್ ಕೂರ, ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ರವರು ಜುಲೈ ಒಂದು ನಾಳೆ(ಶುಕ್ರವಾರ) ದುಲ್ಹಜ್ಜ್ ಒಂದು ಆಗಿರುತ್ತದೆ ಎಂದು ತಿಳಿಸಿದ್ದಾರೆ.
ಜುಲೈ ಒಂಬತ್ತು ಶನಿವಾರ “ಅರಫಾ” ದಿವಸ ಹಾಗೂ ಜುಲೈ ಹತ್ತು ಆದಿತ್ಯವಾರ “ಈದುಲ್ ಅಝ್ಹಾ” ಆಗಿರುತ್ತದೆ ಎಂದು ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ & ಈದ್ಗಾ ಮಸೀದಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.