ಕೋಟೆಕಾರು(ವಿಶ್ವಕನ್ನಡಿಗ ನ್ಯೂಸ್): ಕೋಟೆಕಾರು ಪಟ್ಟಣ ಪಂಚಾಯತಿಗೆ ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಬರುವ 5 ಕೋಟಿ ರೂಪಾಯಿ ನಿಧಿಯ ಹಂಚಿಕೆಯಲ್ಲಿ ಎಲ್ಲಾ ವಾರ್ಡ್ ಗಳ ಸಮಸ್ಯೆಯನ್ನು ಪರಿಗಣಿಸಿ ಕ್ರಿಯಾ ಯೋಜನೆಯಲ್ಲಿ ಪ್ರತೀ ವಾರ್ಡಿಗೂ ಸಮಾನ ಪ್ರಮಾಣದಲ್ಲಿ ನಿಧಿ ಹಂಚಿಕೆ ಮಾಡಲು ಶಾಸಕರು ಮುಂದಾಗಬೇಕೆಂದು ಕೋಟೆಕಾರು ಪಟ್ಟಣ ಪಂಚಾಯತ್ ಪನೀರ್ ವಾರ್ಡಿನ ಎಸ್ಡಿಪಿಐ ಸದಸ್ಯೆ ಸೆಲಿಮಾಬಿ ಹಸೀನಾ ಶಮೀರ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಈಗಾಗಲೇ ಬಂದ ಐದು ಕೋಟಿಯಲ್ಲಿ ನಾಲ್ಕು ಕೋಟಿ ಇಪ್ಪತ್ತೈದು ಲಕ್ಷದ ಕ್ರಿಯಾ ಯೋಜನೆಯ ಪಟ್ಟಿ ಸಿದ್ಧವಾಗಿದ್ದು ಇದರಲ್ಲಿ ಪನೀರ್ ವಾರ್ಡನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇಲ್ಲಿನ ಪನೀರ್ ಸೂಪರ್ ಬಜಾರ್ ನಿಂದ ಪನೀರ್ ಮಸೀದಿ ವರೆಗೆ ಚರಂಡಿ ದುರಸ್ಥಿ ಮತ್ತು ಸ್ಕೈ ಹಾರಿಝನ್ ಫ್ಲಾಟ್ ನಿಂದ 13 ನೇ ವಾರ್ಡ್ ಗಡಿಯವರೆಗೆ ಚರಂಡಿಗೆ ಕಾಂಕ್ರಿಟ್ ಮುಚ್ಚಳ ಅಳವಡಿಕೆಗೆ ನಗರೋತ್ಥಾನ ನಿಧಿಯಲ್ಲಿ ಹಣ ಮೀಸಲಿಡುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ ಇವರೆಡಕ್ಕೆ ಯಾವುದೇ ನಿಧಿ ಮೀಸಲಿಡದೇ ವಾರ್ಡನ್ನು ಕಡೆಗಣಿಸಲಾಗಿದೆ. ಶಾಸಕರು ಸರ್ಕಾರದ ಅನುಮೋದನೆ ಆಗುವ ಮುಂಚೆ ನಗರೋತ್ಥಾನ ನಿಧಿ ಹಂಚಿಕೆಯಲ್ಲಿ ಆದ ತಾರತಮ್ಯವನ್ನು ಸರಿಪಡಿಸಲು ಮುಂದಾಗಬೇಕೆಂದು ಸೆಲಿಮಾಬಿ ಹಸೀನಾ ಶಮೀರ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.