ಕೈರಂಗಳ(ವಿಶ್ವಕನ್ನಡಿಗ ನ್ಯೂಸ್): ಎಸ್ ವೈ ಎಸ್ ಡಿಜಿ ಕಟ್ಟೆ ವತಿಯಿಂದ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಡಾ| ಅಬ್ಬಾಸ್ ಮುಹಮ್ಮದ್ ಜಾಬಿರ್. ಟಿ ( BAMS). ರವರಿಗೆ ಸನ್ಮಾನ ಕಾರ್ಯಕ್ರಮ ನೆಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ಬು ಬ್ರಾಂಚ್ ಅಧ್ಯಕ್ಷರಾದ ಎನ್ ಎಸ್ ಅಬ್ಧುಲ್ ರಹ್ಮಾನ್ ರವರು ವಹಿಸಿದ್ದರು. ಕೈರಂಗಳ, ನರಿಂಗಾನ ಗ್ರಾಮದ ಜನಪ್ರಿಯ ವೈದ್ಯರಾದ ಜಾಬೀರ್ ರವರನ್ನು ಅಬ್ಧುಲ್ ರಹ್ಮಾನ್ ರವರು ಶಾಲು ಹೊದಿಸಿ ಸನ್ಮಾನಿಸಿದರು, ಮತ್ತು ರಿಫಾಯಿಯಾ ಮಸೀದಿ ವಿದ್ಯಾನಗರ ಅಧ್ಯಕ್ಷರಾದ ಹೈದರ್ ಟಿಂಬರ್ ಮಲಿ ಯವರು ಸ್ಮರಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಾಬಿರ್ ರವರು ಹೊಗೆ ತಂಬಾಕು ಮುಂತಾದ ದುಶ್ಚಟಗಳಿಂದ ಆಗುವ ಅನಾಹುತಗಳ ಬಗ್ಗೆ ಯುವಕರಲ್ಲಿ ತಿಳಿಯೇಳುವ ಅಭಿಯಾನವನ್ನು ನಡೆಸಲು ಕರೆ ನೀಡಿದರು ಮತ್ತು ಮಧುಮೇಹ ಮತ್ತು ಪ್ರೆಶರ್ ಗಳನ್ನು ಯಾವುದೇ ಸಂದರ್ಭದಲ್ಲಿ ಕಡೆಗಣಿಸದರೆ ಅದರಿಂದ ಅರೋಗ್ಯದ ಸಮಸ್ಯೆಗಳು ವಿಪರೀತವಾಗುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಅಬ್ಧುಲ್ಲ ಕೋಳಿಯೂರು, ಖಲೀಲ್ ಕೈರಂಗಳ, ಬ್ರಾಂಚ್ ಕೋಶಾದಿಕಾರಿ ಅಬ್ದುಲ್ ರಝಾಕ್, ಉಪಾಧ್ಯಕ್ಷರಾದ ಇಜಾಝ್ ಎನ್ ಎಸ್, ಅಶ್ರಫ್ ಡಿ.ಎಸ್, ಎಸ್,ಎಸ್,ಎಫ್ ಅಧ್ಯಕ್ಷರಾದ ಇಕ್ಬಾಲ್ ಸುಟ್ಟ, ಆಸಿಫ್ ಗೋಳಿಯಡಿ, ಜಾಫರ್ ಮೊದಲಾದವರು ಉಪಸ್ಥಿತರಿದ್ದರು. ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕೈರಂಗಳ ಸ್ವಾಗತಿಸಿದರು. ಎಸ್ ಎಸ್ ಎಫ್ ಕಾರ್ಯದರ್ಶಿ ರಾಫೀ ವಿದ್ಯಾನಗರ ವಂದಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.