ಜಿದ್ದಾ(ವಿಶ್ವಕನ್ನಡಿಗ ನ್ಯೂಸ್): ಇಂಡಿಯನ್ ಸೋಶಿಯಲ್ ಫೋರಮ್(ಐ.ಎಸ್.ಎಫ್) ಸೌದಿ ಅರೇಬಿಯಾ ಇದರ ವತಿಯಿಂದ ಜೂನ್ 24ರಿಂದ ಜುಲಾಯಿ 31ರವರೆಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಜಿದ್ದಾದಲ್ಲಿ ಚಾಲನೆ ನೀಡಲಾಯಿತು.
ಇಂಡಿಯನ್ ಸೋಶಿಯಲ್ ಫೋರಮ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರಾದ ನಜ್ರುಲ್ ಇಸ್ಲಾಂ ಚೌಧರಿ ಅಭಿಯಾನವನ್ನು ಉದ್ಘಾಟಿಸಿದರು. ಅವರ ಉರ್ದು ಭಾಷೆಯಲ್ಲಿ ನಿರರ್ಗಳ ಭಾಷಣವು ಪ್ರಸ್ತುತ ಸನ್ನಿವೇಶದ ಸಮಗ್ರ ವಿಶ್ಲೇಷಣೆಯು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಇಂಜಿನಿಯರ್ ಅಬ್ದುಲ್ ಮಜೀದ್ ಬದ್ರುದ್ದೀನ್ ಅವರು ಹಾಸ್ಯ ಮಿಶ್ರಿತ ಭಾಷಣದ ಮೂಲಕ ಸಂಕಷ್ಟದಲ್ಲಿರುವ ಪ್ರವಾಸಿಗರಿಗೆ ಸೇವೆ ಸಲ್ಲಿಸಲು ಕಾರ್ಯಕರ್ತರನ್ನು ಪ್ರೇರೇಪಿಸಿದರು.
ಭಾರತದ ಅಸ್ಸಾಂ, ಬಿಹಾರ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಪಶ್ಚಿಮದಂತಹ ವಿವಿಧ ರಾಜ್ಯಗಳ ಅನಿವಾಸಿ ಸಂಘಟನೆಗಳ, ಮುಖಂಡರು ಮತ್ತು ಗಣ್ಯ ವ್ಯಕ್ತಿಗಳು ವರ್ಣರಂಜಿತ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.