(www.vknews.in) : حـب الـوطـن مـن الإيـمـان (ದೇಶ ಪ್ರೇಮವು ಇಮಾನಿನ ಭಾಗವಾಗಿದೆ) ಎಂಬುವುದು ಕಲ್ಪಿಸುವುದು ನಾನಿರುವ ಭಾರತ ದೇಶಕ್ಕೆ ಅರಬಿ ದೇಶಗಳು ಯುದ್ಧಕ್ಕೆ ಬಂದರೆ ನೀನು ನಿನ್ನ ದೇಶದ ಪರವಾಗಿ ಹೋರಾಡಬೇಕಾಗಿದೆ, ಹಾಗೂ ಸಮರವನ್ನು ಕಂಡು ಮೌನವಹಿಸುವುದು ಸರಿಯಲ್ಲ ಎಂದು ಕಲ್ಪಿಸುವ ಧರ್ಮವಾಗಿದೆ ಇಸ್ಲಾಂ.
ಮತ್ತೊಂದು ಮಾತು ಯಾವುದೋ ದೇಶದ ಬಗ್ಗೆ ಚಿಂತಿಸುವ ಮೊದಲು ಭಾರತ ದೇಶದಲ್ಲಾಗುವ ಕೊಲೆ ಅತ್ಯಾಚಾರದ ಬಗ್ಗೆ ಚಿಂತಿಸಿರಿ. ನಾನು ಮುಸ್ಲಿಂ, ನಾನು ಹಿಂದೂ, ನಾನು ಕೈಸ್ತ, ಎಂದು ಹೇಳಿದರೆ ಸಾಲದು ಮೊದಲು ಮಾನವನಾಗು ಹಾಗೂ ಕರುಣೆಯುಳ್ಳವನಾಗು ಹಾಗೂ ನಿನ್ನಿಂದ ಜನರಿಗೆ ಉಪಕಾರವಾಗದಿದ್ದರು ಪರ್ವಾಗಿಲ್ಲ ಆದರೆ ಅನ್ಯಾಯವನ್ನು ಮಾತ್ರ ಮಾಡದಿದ್ದರೆ ಮಾತ್ರ ನೀನು ಹುಟ್ಟಿದ ಧರ್ಮಕ್ಕೆ ಸಾಟಿ ಹೊಂದಲು ಸಾಧ್ಯ ಹಾಗೂ ಯಾವ ಧರ್ಮದಲ್ಲಿನೂ ಸಹ ಇನ್ನೊಬ್ಬರನ್ನು ಕೊಲ್ಲಲು ತಿಳಿಸಿಲ್ಲ ಹಾಗೂ ಅವರವರ ದೇವರನ್ನು ಸಹ ದೂಷಿಸಲು ಸಹ ಯಾರಿಗೂ ಹಕ್ಕಿಲ್ಲ.
ಹಾಗೂ ಅವರವರ ಧರ್ಮದ ಆಧಾರದ ಮೇರೆಗೆ ಅವರವರ ನಂಬಿಕೆಯಾಗಿದೆ, ಹೊರತು ಸಿಕ್ಕ ಸಿಕ್ಕ ದೇವರಿಗೆ ನೀಚ ಶಬ್ದವನ್ನು ಬಳಕೆ ಮಾಡಿ ಕರೆಯುವುದರಲ್ಲಿ ಸಿಗುವ ಉಪಯೋಗವಾದರೇನು..?, ಒಂದು ಮಾತು ನೆನಪಿನಲ್ಲಿಡಿರಿ.. ರಾಜಕಾರಣಿಗಳು ಹಾಗೂ ಸಂಘದವರು ಬೇಳೆ ಬೇಯಿಸಲು ಬೇಕಾಗಿ ಜನರನ್ನು ಉಪಯೋಗಿಸಿ ಸಿಕ್ಕ ಸಿಕ್ಕ ಧರ್ಮದವರ ದೇವರಿಗೆ ನೀಚ ಪದ ಬಳಕೆಯನ್ನು ಮಾಡಿ ಪ್ರತಿಭಟನೆಯನ್ನು ಮಾಡಿರಿ ಎಂದು ಹೇಳಬಹುದು ಆದರೆ ಒಂದು ನೆನಪಿನಲ್ಲಿಡಿರಿ ದೇವರುಗಳಿಗೆ ನೀಚ ಪದ ಬಳಕೆ ಮಾಡುವ ಜನರೇ ಎಲ್ಲಾ ದೇವರುಗಳಿಗೆ ಅವರವರಿಗಾದ ಪವಾಡಗಳಿದೆ ಹಾಗೂ ಅವರ ಶಾಪದಲ್ಲಿ ಜೀವಿಸಬೇಕಾದವರು ತಾವುಗಳು ಎಂಬುವುದು ಅರಿವಿರಲಿ.
ನಿಮ್ಮನ್ನು ನಂಬಿ ಕುಳಿತಿರುವ ತಂದೆ-ತಾಯಿ ಅಣ್ಣ-ತಂಗಿ-ತಮ್ಮ ನಿಮ್ಮ ನಂಬಿ ಬಂದಿರುವ ಸಂಗಾತಿ ಹಾಗೂ ನಿಮ್ಮ ಕರುಳ ಬಳ್ಳಿಗಳಿಗೆ ಯಾರು ಗತಿ, ನಿಮ್ಮ ಜೀವನ ನರಕವಾದಲ್ಲಿ ಚಿಂತಿಸಿರಿ, ಎಲ್ಲಾ ಕಾರ್ಯಾಗಳನ್ನು ಮಾಡುವಾಗ ಹಾಗೂ ಕೇಸರಿ ಬಣ್ಣ ತೊಡಿಸಿದ ಕೂಡಲೇ ಹಾಗೂ ಜೈ ಶೀ ರಾಮ್ ಎಂದು ಕೂಗಿದ ಕೂಡಲೇ ಅಥವಾ ಇನ್ನೊಬ್ಬರೊಂದಿಗೆ ಕೂಗಿಸಿದ ಕೂಡಲೇ ಅಥವಾ ಅನ್ಯ ಧರ್ಮದವರನ್ನು ಕೊಲೆ ಅತ್ಯಾಚಾರ ಮಾಡಿದ ಕೂಡಲೇ ಅವನು ಹಿಂದೂ ಆಗುವುದಿಲ್ಲ. ಬದಲಾಗಿ ಹಿಂದೂ ಧರ್ಮದಲ್ಲಿರುವ ನಿಯಮಗಳನ್ನು ಪಾಲಿಸಿದರೆ ಮಾತ್ರ ನೈಜ ಹಿಂದೂ ಆಗಲು ಸಾಧ್ಯ.
ಅದೇ ರೀತಿ ಹಸಿರು ಬಣ್ಣ ಹಾಗೂ ತಲೆಗೆ ಟೋಪಿ ಹಾಗೂ ಅಲ್ಲಾಹು ಅಕ್ಬರ್ ಎಂದು ಕೂಗುವುದು ಅಥವಾ ಇನ್ನೊಬ್ಬರನ್ನು ಒತ್ತಾಯ ಪೂರ್ವಕವಾಗಿ ಕೂಗಿಸಿದರೆ ಅವನು ಮುಸ್ಲಿಮನಾಗಲು ಸಾಧ್ಯವಿಲ್ಲ. ಬದಲಾಗಿ ಕುರ್ಆನಿನಲ್ಲಿ ತಿಳಿಸಿದಾಗೇ ಹಾಗೂ ಇಸ್ಲಾಮಿನ ಆದರ್ಶವನ್ನು ಪಾಲಿಸಿ ಹಾಗೂ ಯಾರೊಬ್ಬರ ಮನಸ್ಸಿಗೂ ನೋವು ನೀಡದೆ ಬಾಳಿ ಬದುಕಿದರೆ ಮಾತ್ರ ನೈಜ ಮುಸ್ಲಿಮನಾಗಲು ಸಾಧ್ಯ. ಅದೇ ರೀತಿ ಬಿಳಿ ವಸ್ತ್ರ ತೊಡಿಸಿದ ಕೂಡಲೇ ಅಥವಾ ಯೇಸುವನ್ನು ಕರೆದ ಕೂಡಲೇ ಅವನು ಕ್ರೈಸ್ತನಾಗಲು ಸಾಧ್ಯವಿಲ್ಲ. ಬದಲಾಗಿ ಬೈಬಲಿನಲ್ಲಿ ತಿಳಿಸಿರುವ ನಿಯಮ ಹಾಗೂ ಧರ್ಮದ ಆದರ್ಶವನ್ನು ಪಾಲಿಸಿದರೆ ಮಾತ್ರ ನೈಜ್ಯ ಕ್ರೈಸ್ತನಾಗಲು ಸಾಧ್ಯ ಎಂಬುವುದು ಪ್ರತಿಯೊಬ್ಬರು ಅರಿಯಬೇಕಾಗಿದೆ.
ಹಾಗೂ ನಾವು ಇನ್ನೊಬ್ಬರನ್ನು ಸಾಯಿಸುವಾಗ ಒಂದು ಚಿಂತಿಸಬೇಕಾಗಿದೆ, ಕೊಲ್ಲುವವನು ಉದಾ:-ನನ್ನನ್ನೇ ಬೇರೆಯವರು ಕೊಂದರೇ ನನ್ನ ಕುಟುಂಬದವರ ಪರಿಸ್ಥಿತಿ ಹೇಗಾಗಬಹುದು ಎಂದು, ಅದೇ ರೀತಿ ತಾನೇ ನೀನು ಇನ್ನೋಬ್ಬರನ್ನು ಕೊಲ್ಲುವಾಗ ಅವರ ಮನೆಯ ಪರಿಸ್ಥಿತಿ ಹೇಗಾಬಹುದು ತಾನೇ.. ಚಿಂತಿಸು ಮನುಜ ಐಕ್ಯತೆಯೊಂದಿಗೆ ಬಾಳಿ ಬದುಕಿ ಧರ್ಮ ನಿಂದನೆಯ ಪ್ರಭಾಷಣವನ್ನು ಕೇಳದಿರಿ, ಅವರ ವಿರುದ್ಧ ಒಟ್ಟಾಗಿ ಹೋರಾಡೋಣ..
✍️ ಅನೀಸ್ ಕುಕ್ಕಾಜೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.